ಮರಳಿನ ಟಿಪ್ಪರ್ಗೆ ಇಬ್ಬರು ಬಲಿ
ಜೇವರ್ಗಿ ರಸ್ತೆಯಲ್ಲಿ ಅವಘಡ•ಬೈಕ್ ಖರೀದಿಸಿ ಹೊರಟವರ ಮೇಲೆ ಎರಗಿದ ಯಮ
Team Udayavani, Jul 15, 2019, 9:58 AM IST
ಕಲಬುರಗಿ: ರಾಮ ಮಂದಿರ ವೃತ್ತದ ಸಮೀಪ ನಡೆದ ರಸ್ತೆ ಅಪಘಾತ ಸ್ಥಳದಲ್ಲಿ ಸಾರ್ವಜನಿಕರು, ವಾಹನ ಸವಾರರು ಜಮಾವಣೆಗೊಂಡಿದ್ದರು.
ಕಲಬುರಗಿ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಹರಿದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಜೇವರ್ಗಿ ರಸ್ತೆಯಲ್ಲಿರುವ ರಾಮ ಮಂದಿರ ವೃತ್ತದ ಸಮೀಪ ನಡೆದಿದೆ.
ವಿಜಯಪುರ ಜಿಲ್ಲೆಯ ಆಲಮೇಲದ ನಿವಾಸಿಗಳಾದ ಸೇವಾಲಾಲ ಭೀಮಶಾ ವಡ್ಡರ್ (41), ನಿಂಗಪ್ಪ ಸುಭಾಷ ಲೋಟೆ (32) ಮೃತಪಟ್ಟವರು. ನಗರದ ಶೋ ರೂಮ್ವೊಂದರಲ್ಲಿ ಹೊಸ ಬೈಕ್ ಖರೀದಿಸಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊಸ ಬೈಕ್ ಮೇಲೆ ಇಬ್ಬರು ಊರಿಗೆ ಹಿಂದಿರುಗುತ್ತಿದ್ದರು.
ಈ ಸಂದರ್ಭದಲ್ಲಿ ಬೈಕ್ಗೆ ಟಿಪ್ಪರ್ ಗುದ್ದಿ, ಕೆಳಗಡೆ ಬಿದ್ದ ಇಬ್ಬರ ಮೇಲೂ ಹರಿದಿದೆ. ಪರಿಣಾಮ ಚಕ್ರದಡಿ ಸಿಲುಕಿದ ಇಬ್ಬರ ದೇಹಗಳು ನಜ್ಜುಗುಜ್ಜುಗೊಂಡಿವೆ. ಬೈಕ್ ಕೂಡ ಟಿಪ್ಪರ್ನ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾಗಿದೆ. ಘಟನಾ ಸ್ಥಳದಲ್ಲಿ ಜನ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಇದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ವಿಷಯ ತಿಳಿದ ತಕ್ಷಣವೇ ಸಂಚಾರಿ ಪೊಲೀಸ್ ಠಾಣೆ-2ರ ಇನ್ಸ್ಪೆಕ್ಟರ್ ಮಹಾದೇವ ಪಂಚಮುಖೀ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ನಂತರ ಟಿಪ್ಪರ್ನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸಂಚಾರಿ ಪೊಲೀಸ್ ಠಾಣೆ-2ರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನದಿ ಸಿನ್ನೂರ ಘಟನೆ ನೆನಪು: ಕಳೆದ ಜುಲೈ 8ರಂದು ತಾಲೂಕಿನ ನದಿ ಸಿನ್ನೂರ ಬಳಿ ನಡೆದ ರಸ್ತೆ ಅಪಘಾತವನ್ನು ಈ ಘಟನೆ ನೆನಪಿಸಿದೆ. ಅಂದು ಬೈಕ್ ಮೇಲೆ ತೆರಳುತ್ತಿದ್ದವರಿಗೆ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೂಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಒಬ್ಬನ ಕೈ ತುಂಡಾಗಿ ರಸ್ತೆ ಮೇಲೆ ಬಿದ್ದಿತ್ತು.
ಕಳೆದ ಎರಡುವರೆ ತಿಂಗಳಿನಿಂದ ಮರಳಿನ ಟಿಪ್ಪರ್ಗಳ ಹಾವಳಿ ವ್ಯಾಪಕವಾಗಿದ್ದು, ಒಂದಲ್ಲ ಒಂದು ದಿನ ಅಪಘಾತಗಳು ಸಂಭವಿಸುತ್ತಿವೆ. ಮರಳಿನ ಟಿಪ್ಪರ್ಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕೆಲವೊಂದು ಅಪಘಾತಗಳಲ್ಲಿ ಮರಳಿನ ಟಿಪ್ಪರ್ಗಳಿಂದ ಅಪಘಾತಗಳಾಗಿದ್ದರೂ ಅಪರಿಚಿತ ವಾಹನಗಳಿಂದ ಡಿಕ್ಕಿ ಎಂದು ನಮೂದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಬೇಕಿದ್ದ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಾಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೇ ಮುಂದಿನ ದಿನಗಳಲ್ಲಿ ದಿನನಿತ್ಯ ಅಪಘಾತ ನಡೆದು, ಅಮಾಯಕರು ಬಲಿಯಾಗುವ ಆತಂಕ ಹೆಚ್ಚಿದೆ. ಮಳೆಯಿಲ್ಲದೇ ಮೊದಲೇ ರೈತರು ಕಂಗಾಲಾಗಿರುವಾಗ ಹಗಲಿರುಳು ಎನ್ನದೇ ಮರಳಿನ ಲಾರಿಗಳು ರೈತರ ಹೊಲಗಳ ಮೂಲಕ ನದಿ ಪಾತ್ರಕ್ಕೆ ನುಗ್ಗಿ ಅವ್ಯಾಹತವಾಗಿ ಮರಳು ಲೂಟಿ ಮಾಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ