ಚಿಂಚೋಳಿಯಲ್ಲಿ ರಾತ್ರಿ ಭೂಮಿಯಿಂದ ವಿಚಿತ್ರ ಶಬ್ದ; ಜನತೆಯಲ್ಲಿ ಆತಂಕ
ಕಂಪಿಸಿದ ಭೂಮಿ
Team Udayavani, Sep 1, 2022, 5:58 PM IST
ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಬುಧವಾರ ರಾತ್ರಿ ಸಮಯದಲ್ಲಿ ಭೂಮಿಯಿಂದ ವಿಚಿತ್ರವಾದ ಶಬ್ದ ಉಂಟಾಗಿ ನಂತರ ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೋಡಿಬಂದಿರುವ ಘಟನೆ ನಡೆದಿದೆ.
ತಾಲೂಕಿನ ಸುಲೇಪೇಟ ದಸ್ತಾಪುರ ಚಿಮ್ಮಾಇದ್ಲಾಯಿ ಇಂದ್ರಪಾಡ ಹೊಸಳ್ಳಿ ನೀಮಾಹೊಸಳ್ಳಿ ಗೌಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ರಾತ್ರಿಯಲ್ಲಿ10.59 ಕ್ಕೆ ಭೂಮಿಯಿಂದ ವಿಚಿತ್ರವಾದ ಶಬ್ದ ಉಂಟಾಗಿ ನಂತರ ಭೂಮಿ ಅಲುಗಾಡಿದ ಇದರಿಂದ ಮನೆಯಲ್ಲಿ ಮಲಗಿದ್ದ ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರ ಗೆ ಬಂದಿದ್ದಾರೆ.
ತಾಲೂಕಿನಲ್ಲಿ ಹಲವು ವರ್ಷಗಳಿಂದ ಇಂಥ ಶಬ್ದ ಭೂಮಿಯಿಂದ ನಿಗೂಢವಾದ ಶಬ್ದ ಉಂಟಾಗಿ ಭೂಮಿ ಅಲುಗಾಡುತ್ತಿರುದರಿ೦ದ ಗಡಿಕೇಶ್ವರ ಗ್ರಾಮದಲ್ಲಿ ರಿಕ್ಟರ್ ಮಾಪನ ಯಂತ್ರವನ್ನು ಜೋಡಿಸಲಾಗಿತ್ತು.ಆದರೆ ಇದೀಗ ಯಂತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆಯ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬ ಮಾಹಿತಿ ಗ್ರಾಮಸ್ಥರಿಗೆ ಲಭ್ಯವಾಗುತ್ತಿಲ್ಲ.
ತಾಲೂಕಿನಲ್ಲಿ ಇಂಥ ನಿಗೂಢ ಶಬ್ಧ, ಭೂಮಿ ಕಂಪಿಸಿದ್ದರಿಂದ ಜನರು ಜೀವದ ಭಯದಲ್ಲಿ ದಿನ ಕಳೆಯುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್