ಕಲಬುರಗಿ: ಪಕ್ಷೇತರ ಅಭ್ಯರ್ಥಿ ಅಷ್ಟಗಿ ಪರ ಜಗದ್ಗುರುಗಳ ಪ್ರಚಾರ
Team Udayavani, Aug 28, 2021, 4:06 PM IST
ಕಲಬುರಗಿ: ಕೊನೆಯ ಘಳಿಗೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ವಾರ್ಡ್ ನಂಬರ್ 5ರಲ್ಲಿ ಪಕ್ಷೇತರಾಗಿ ಸ್ಪರ್ಧಿಸಿರುವ ಮಲ್ಲಮ್ಮ ಶಿವಾನಂದ ಪಾಟೀಲ್ ಅಷ್ಟಗಿ ಪರ ಇಲ್ಲಿನ ಶಹಾಬಜಾರ ಸುಲಫಲ ಮಠದ ಪೀಠಾಧಿಪತಿ ಹಾಗೂ ಶ್ರೀ ಶೈಲಂ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಪ್ರಚಾರ ನಡೆಸಿದರು.
ಅಷ್ಟಗಿ ಅವರು ವಾರ್ಡ್ ನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ವಾರ್ಡ್ ನ ಜನ ಅಷ್ಟಗಿ ಅವರನ್ನೇ ನೆಚ್ಚಿಕೊಂಡಿದ್ದಾರೆ. ಪಕ್ಷ ಅವರನ್ನೇ ಗುರುತಿಸಿ ಟಿಕೆಟ್ ನೀಡಬೇಕಿತ್ತು. ಆದರೆ ಟಿಕೆಟ್ ನೀಡದೇ ಅನ್ಯಾಯ ಎಸಗಲಾಗಿದೆ. ಹೀಗಾಗಿ ಕ್ಷೇತ್ರದ ಜನ ಕೈ ಹಿಡಿಯುವ ಮುಖಾಂತರ ಗೆಲ್ಲಿಸಬೇಕೆಂದರು.
ತಮ್ಮ ಪಾಡಿಗೆ ತಾವಿದ್ದು ಕೆಲಸ ಮಾಡುವರು ಅಪರೂಪ. ಅಂತಹ ಸಾಲಿನಲ್ಲಿ ಶಿವಾನಂದ ಅಷ್ಟಗಿ ಸೇರಿದ್ದಾರೆ. ಈಗ ಅವರ ಪತ್ನಿ ಮಲ್ಲಮ್ಮ ಅಷ್ಟಗಿ ಅಭ್ಯರ್ಥಿಯಾಗಿದ್ದಾರೆ. ಅಷ್ಟಗಿ ಅವರ ಮನೆ ಎಲ್ಲಿ ಬರುತ್ತದೆ ಎಂಬುದನ್ನು ನೋಡಿಲ್ಲ. ಆದರೆ ವಾರ್ಡ್ ಗೆ ಬಂದು ಜನರಿಗೆ ಆಗಿರುವ ಅನ್ಯಾಯ ವಿವರಿಸಲು ಹಾಗೂ ಬೆಂಬಲಿಸುವಂತೆ ತಿಳಿ ಹೇಳಲು ವಾರ್ಡ್ ನಂಬರ್ ಐದಕ್ಕೆ ಬಂದಿರುವುದಾಗಿ ಜಗದ್ಗುರುಗಳು ತಿಳಿಸಿದರು.
ಇದನ್ನೂ ಓದಿ:ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ಸುರಕ್ಷತಾ ಕಾರ್ಯ ಕೈಗೊಳ್ಳಿ : ನಟ ಚೇತನ್
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಅಷ್ಟಗಿ ಮಾತನಾಡಿ, ಗುರುಗಳು ವಾಡ್೯ಗೆ ಬಂದು ಬೆಂಬಲಿಸಿರುವುದು ನಮ್ಮ ಸೌಭಾಗ್ಯ, ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.
ಅಭ್ಯರ್ಥಿ ಮಲ್ಲಮ್ಮ ಶಿವಾನಂದ ಅಷ್ಠಗಿ, ಮುಖಂಡರಾದ ಸಿದ್ದು ತಾಳಮಡಗಿ, ನಾಗರಾಜ ವರದಾ, ರವಿ ಗುತ್ತೇದಾರ, ಸಂಜು ಕಠಾರೆ, ಶ್ರೀ ಕಾಂತ ಅಂಕಲಕಾರ, ಶರಣು ಹೇರೂರ, ಅನಂತಯ್ಯ ಮಠಪತಿ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್