ಗ್ರೀನ್ ಮ್ಯಾನ್; ಎರಡೇ ವರ್ಷದಲ್ಲಿ 25 ಕಿರು ಅರಣ್ಯ ನಿರ್ಮಿಸಿದ ಕಂದಾಯ ಅಧಿಕಾರಿ
ಮಾಲಿನ್ಯದ ಪರಿಸ್ಥಿತಿ ಅರಿವಾಗಿದ್ದು ಹಾಗೂ ಅವರ ಮೇಲೆ ಇದು ಗಾಢ ಪರಿಣಾಮವನ್ನು ಬೀರಿತ್ತು.
Team Udayavani, Aug 28, 2021, 4:22 PM IST
ಸರಕಾರಿ ಅಧಿಕಾರಿಗಳೆಂದರೆ ತಮ್ಮ ಪಾಲಿಗೆ ಬಂದ ಕೆಲಸವನ್ನು ಮಾತ್ರ ಮಾಡಿ ಮುಗಿಸುವವರು ಎಂಬ ಮಾತಿದೆ. ಇಂಥವರ ನಡುವೆಯೂ ಸರಕಾರಿ ಅಧಿಕಾರಿಗಳು ಈ ರೀತಿಯಲ್ಲೂ ಕಾರ್ಯನಿರ್ವಹಿಸಬಹುದು ಎನ್ನುವುದಕ್ಕೆ ಮಾದರಿ ಪಂಜಾಬ್ ಲೂಧಿಯಾನದ ಭಾರತೀಯ ಕಂದಾಯ ಸೇವೆಯ ಅಧಿಕಾರಿ ರೋಹಿತ್ ಮೆಹ್ರಾ.
ಗ್ರೀನ್ ಮ್ಯಾನ್ ಆಫ್ ಲೂಧಿಯಾನ ಎಂದೇ ಖ್ಯಾತರಾಗಿರುವ 41 ವರ್ಷದ ರೋಹಿತ್ ಮೆಹ್ರಾ ಎರಡೇ ವರ್ಷದಲ್ಲಿ 500 ಅಡಿಯಿಂದ 4 ಎಕ್ರೆ ಪ್ರದೇಶಗಳಲ್ಲಿ 25 ಮಿನಿ ಕಾಡುಗಳನ್ನು ನಿರ್ಮಿಸಿದ್ದಾರೆ. ಪಂಜಾಬ್ನಾದ್ಯಂತ ಇಲ್ಲಿಯವರೆಗೆ 75 ಲಂಬ ಉದ್ಯಾನವನಗಳನ್ನು ನಿರ್ಮಿಸಿದ ಖ್ಯಾತಿ ಇವರದ್ದಾಗಿದೆ.
ಹೇಳಿ ಕೇಳಿ ಲೂಧಿಯಾನ ಕೈಗಾರಿಕೆಗಳ ಕೇಂದ್ರ ಇಂತಹ ಪ್ರದೇಶದಲ್ಲಿ ಕಾಡು ಬೆಳೆಸುವುದು ಸವಾಲಿನ ಕೆಲಸವೇ ಸರಿ. ಇಲ್ಲಿನ ವಿಪರೀತ ಮಾಲಿನ್ಯ ವಾತಾವರಣದಿಂದಾಗಿ ಶಾಲಾ-ಕಾಲೇಜುಗಳಿಗೆ ನಾಲ್ಕೈದು ದಿನ ರಜೆ ನೀಡಲಾಗುತ್ತದೆ. ಶಾಲಾ ವಿದ್ಯಾರ್ಥಿಯಾಗಿದ್ದ ರೋಹಿತ್ ಮೆಹ್ರಾ ಮಗನಿಗೂ ಹೀಗೆ ನಾಲ್ಕೈದು ದಿನ ರಜೆ ನೀಡಲಾಗಿದ್ದು ಆವಾಗಲೇ ರೋಹಿತ್ ಮೆಹ್ರಾಗೆ ಇಲ್ಲಿನ ಪರಿಸರ ಮಾಲಿನ್ಯದ ಪರಿಸ್ಥಿತಿ ಅರಿವಾಗಿದ್ದು ಹಾಗೂ ಅವರ ಮೇಲೆ ಇದು ಗಾಢ ಪರಿಣಾಮವನ್ನು ಬೀರಿತ್ತು.
ಪ್ರಾಚೀನ ತಂತ್ರಜ್ಞಾನ
ಎರಡೇ ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸುವುದು ಸುಲಭದ ಮಾತಲ್ಲ. ಇದರ ಅನುಭವ ಕೂಡ ಇವರಿಗೆ ಇರಲಿಲ್ಲ. ಇದಕ್ಕಾಗಿ ಸಾಕಷ್ಟು ಅಧ್ಯಯನವನ್ನು ನಡೆಸಿದರು. ಪ್ರಾಚೀನ ವಿಜ್ಞಾನವನ್ನು ಅರಿಯಲು ಮುಂದಾದರೂ ವೃಕ್ಷಾಯುರ್ವೇದ ಕೃತಿ ಆಧಾರದಲ್ಲಿ ಅರಣ್ಯ ನಿರ್ಮಿಸಿದರು. ಆಶ್ಚರ್ಯವೆಂದರೆ ಈ ಕೃತಿಯಲ್ಲಿ ಮಿಯಾವಕಿ ಮಾದರಿಯ ಉಲ್ಲೇಖವಿತ್ತು.
ಕೈಗಾರಿಕ ಪ್ರದೇಶವೀಗ ಹಚ್ಚ ಹಸುರು
ಲೂಧಿಯಾನದಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿನ ತೆರೆದ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಮಾಲಿನ್ಯವನ್ನು ತಗ್ಗಿಸುವ ರೋಹಿತ್ ಅವರ ಕಾರ್ಯಕ್ಕೆ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೂಡ ಕೈಜೋಡಿಸಿದೆ. ರೋಹಿತ್ ಅವರ ಮಾರ್ಗದರ್ಶನದಲ್ಲಿ ಸೃಷ್ಟಿಯಾದ 15 ಅರಣ್ಯಗಳಲ್ಲಿ ಎಂಟು ಕಾಡುಗಳು ಕೈಗಾರಿಕಾ ಪ್ರದೇಶಗಳಲ್ಲಿಯೇ ಇವೆ.
ವರ್ಟಿಕಲ್ ಗಾರ್ಡನ್
ಲೂಧಿಯಾನ ಆಯುಕ್ತರ ಭವನದಲ್ಲಿ ನಗರದ ಮೊದಲ ವರ್ಟಿಕಲ್ ಗಾರ್ಡನ್ ಸೃಷ್ಟಿಸಿದ ಖ್ಯಾತಿ ಇವರದ್ದು. ಕೈಗಾರಿಕೋದ್ಯಮಿಯೊಬ್ಬರು ತಮ್ಮ 6,000 ಚದರ ಅಡಿ ಅಗಲದ ನಿವೇಶನವನ್ನು ಅರಣ್ಯವನ್ನಾಗಿ ಪರಿವರ್ತಿಸುವಂತೆ ಮೆಹ್ರಾ ಅವರನ್ನು ಕೋರಿದ್ದರು ಎಂದರೆ ಅವರು ಬೀರಿರುವ ಪ್ರಭಾವ ಎಂಥದ್ದು ಎಂದು ಅರಿವಾಗುತ್ತದೆ. ಜನರು ಈ ವರ್ಟಿಕಲ್ ಗಾರ್ಡನ್ ಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ, ತಮ್ಮ ಜಮೀನುಗಳಲ್ಲಿನ ಉಳಿದ ಭಾಗಗಳನ್ನು ಅರಣ್ಯವನ್ನಾಗಿ ಪರಿವರ್ತಿಸಿಕೊಡವಂತೆಯೂ ಕೋರುತ್ತಿದ್ದಾರೆ ಎಂದು ರೋಹಿತ್ ಹೇಳುತ್ತಾರೆ. ಇದೀಗ ಅನೇಕ ಸಂಘ,ಸಂಸ್ಥೆಗಳು ರೋಹಿತ್ ಮೆಹ್ರಾ ಜತೆ ಕೈಜೋಡಿಸಿದೆ.
*ಧನ್ಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ