ಲಾಕ್‌ಡೌನ್‌ದಲ್ಲಿ ಬರಹದ ಮೂಲಕ ಗಮನ ಸೆಳೆದ ಮನಸ್ವಿ

ಬೇಸರ ದೂರ ಮಾಡಿಕೊಳ್ಳಲು ಪದ್ಯಗಳು ಮತ್ತು ಶಾಯಿರಿ ಬರೆಯಲು ಶುರು ಮಾಡಿದೆ

Team Udayavani, Mar 3, 2021, 6:18 PM IST

Lockdown

ಕಲಬುರಗಿ: ಲಾಕ್‌ಡೌನ್‌ ಎಂಬ “ಗೃಹ ಬಂಧನ’ ಅವ ಧಿಯನ್ನೇ ಸದುಪಯೋಗ ಪಡಿಸಿಕೊಂಡ 17 ವರ್ಷದ ವಿದ್ಯಾರ್ಥಿನಿ ಮನಸ್ವಿ ಪಾಟೀಲ ತಮ್ಮ ಬರವಣಿಗೆ
ಮೂಲಕ ದೇಶದ ಗಮನ ಸೆಳೆದಿದ್ದಾರೆ. ಕೆಲವೇ ಕೆಲ ತಿಂಗಳ ಪರಿಶ್ರಮಕ್ಕೆ ಅವರಿಗೆ ಅಂತರಾಷ್ಟ್ರೀಯ ಮಟ್ಟದ “ಕಲಾಂ ಗೋಲ್ಡನ್‌ ಅವಾರ್ಡ್‌’ ಒಲಿದು ಬಂದಿದೆ.

ನಗರದ ರಾಮ ಮಂದಿರ ವೃತ್ತದ ಅಫಜಲಪುರ ರಸ್ತೆಯ ಬಿ.ಎಲ್‌ .ನಗರ ನಿವಾಸಿಯಾಗಿರುವ ಮನಸ್ವಿ ಪಾಟೀಲಗೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್‌ ಫೌಂಡೇಷನ್‌ದವರು 2021ರ ಕಲಾಂ ಗೋಲ್ಡನ್‌ ಅವಾರ್ಡ್‌ ವಿಭಾಗದಲ್ಲಿ ಉತ್ತಮ ಬರಹಗಾರ್ತಿ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರತಿಷ್ಠಿತ ಶರಣಬಸವೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಮನಸ್ವಿ, ಚಿಕ್ಕಂದಿನಿಂದಲೂ ತುಂಬಾ ಕ್ರಿಯಾಶೀಲ ವಿದ್ಯಾರ್ಥಿನಿ. ಹವ್ಯಾಸಕ್ಕಾಗಿ ಒಂದೆರಡು ಸಾಲುಗಳ “ಕೋಟ್‌’ ಬರೆಯುವ ಚುಟುಕು ಸಾಹಿತ್ಯ ರೂಢಿಸಿಕೊಂಡಿದ್ದರು. ಆದರೆ, ಲಾಕ್‌ ಡೌನ್‌ ಕಾಲ ಇವರನ್ನು ಓರ್ವ ಮೊನಚು ಬರಹಗಾರ್ತಿಯನ್ನಾಗಿ ರೂಪಿಸಿದೆ. ಕಳೆದ ಏಪ್ರಿಲ್‌ನಲ್ಲಿ ಆರಂಭವಾದ ಇವರ ಬರಹ ಇದೀಗ ದೇಶದ ವಿವಿಧ ಪ್ರಕಾಶನಗಳು ಪ್ರಕಟಿಸಿದ ಪುಸ್ತಕಗಳಲ್ಲಿ ಅಚ್ಚಾಗಿದೆ. ಇಲ್ಲಿಯವರೆಗೆ 50ಕ್ಕೂ ಹೆಚ್ಚು ಪುಸ್ತಕಗಳಿಗೆ ಬರೆದುಕೊಟ್ಟಿದ್ದಾರೆ.

ಈಗಾಗಲೇ 25 ಪುಸ್ತಕಗಳು ಹೊರ ಬಂದಿವೆ. “ದಿವ್ಯಾಂ-ಲೈಫ್‌ ಆ್ಯಂಡ್‌ ರಿಯಾಲಿಟಿ ವಿಥಿನ್‌’ ಪುಸ್ತಕದಲ್ಲಿ ಪ್ರಕಟಗೊಂಡ “ಸೈನ್ಸ್‌ ನೀಡ್ಸ್‌ ಮೈಥ್ಸ್ ಟು ಥ್ರಿವ್‌’ ಇಂಗ್ಲಿಷ್‌ ಪಂದ್ಯಕ್ಕೆ ಈ ಕಲಾಂ ಗೋಲ್ಡನ್‌ ಅವಾರ್ಡ್‌ ದೊರೆತಿದೆ.

ಇಂಗ್ಲಿಷ್‌ ಮೇಲೆ ಹಿಡಿತ: ವಿಜ್ಞಾನ ವಿದ್ಯಾರ್ಥಿನಿಯಾಗಿರುವ ಮನಸ್ವಿ ಪಾಟೀಲ್‌ ಇಂಗ್ಲಿಷ್‌ ಮೇಲೆ ಹಿಡಿತ ಹೊಂದಿದ್ದಾರೆ. ಇಂಗ್ಲಿಷ್‌ನಲ್ಲೇ ತಮ್ಮ ಬರವಣಿಗೆ ಕೌಶಲ ಹೆಚ್ಚಿಸಿಕೊಂಡಿದ್ದಾರೆ. ಹೊಸ ಆಲೋಚನೆ, ಹೊಸ ಚಿಂತನೆಯೊಂದಿಗೆ ಇಂಗ್ಲಿಷ್‌ನಲ್ಲಿ ತಮ್ಮದೇ ಆದ ಕವನಗಳು, ಉಲ್ಲೇಖಗಳು (ಕೋಟ್‌) ಬರೆಯುತ್ತಿದ್ದಾರೆ.

ಶಾಲಾ ಮತ್ತು ಕಾಲೇಜಿನಲ್ಲಿ ಕಾರ್ಯಕ್ರಮ ನಿರೂಪಣೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ತೊಡಿಸಿ ಕೊಳ್ಳುತ್ತಿದ್ದೆ. ಸಮಯ ಸಿಕ್ಕಾಗ ಮನಸ್ಸಿನಲ್ಲಿ ಮೂಡುತ್ತಿದ್ದ ಚಿಕ್ಕ-ಚಿಕ್ಕ “ಕೋಟ್‌’ ಬರೆಯುತ್ತಿದ್ದೆ. ಆದರೆ, ಲಾಕ್‌ಡೌನ್‌ ಸಮಯದಲ್ಲಿ ಮನೆಯೊಳಗೆ ಕೂಡಿ ಹಾಕಿದಂತೆ ಆಗಿತ್ತು. ಹೀಗಾಗಿ ಮನೆಯಲ್ಲಿ ಸಮಯ ಕಳೆಯಲು ಮತ್ತು ಬೇಸರ ದೂರ ಮಾಡಿಕೊಳ್ಳಲು ಪದ್ಯಗಳು ಮತ್ತು ಶಾಯಿರಿ ಬರೆಯಲು ಶುರು ಮಾಡಿದೆ ಎನ್ನುತ್ತಾರೆ ಮನಸ್ವಿ. ನಾನು ವಿಜ್ಞಾನ ವಿದ್ಯಾರ್ಥಿನಿ ಆಗಿರುವುದರಿಂದ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಪದ್ಯಗಳು ಹೆಚ್ಚಾಗಿ ಬರೆಯುತ್ತೇನೆ. ವಿಜ್ಞಾನದೊಂದಿಗೆ ವಿಧಾನಶಾಸ್ತ್ರ ಹೋಲಿಕೆ ಮಾಡಿ ಬರೆಯುವುದು ಇಷ್ಟ. ಜತೆಗೆ ಪ್ರಕೃತಿ, ಬಾಲ್ಯ, ಸ್ನೇಹ, ನೆನಪು ಹೀಗೆ ಬೇರೆ ವಿಷಯದ ಬಗ್ಗೆಯೂ ಬರೆದಿದ್ದೇನೆ ಎಂದು ಹೇಳುತ್ತಾರೆ.

ಇನ್‌ಸ್ಟಾಗ್ರಾಮ್‌ “ಸೇತುವೆ’
ಮನಸ್ವಿ ಪಾಟೀಲ ಅವರ ಬರಹ ಹೊರ ಜಗತ್ತಿಗೆ ಬರಲು ಸೇತುವೆ ಆಗಿರುವುದು ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ “ಇನ್‌ಸ್ಟಾಗ್ರಾಮ್‌’. ತಮ್ಮ
ಬರಹಕ್ಕೆ “ಫೋಟೋ ಫ್ರೇಮ್‌’ ಮಾಡಿ ಅದರ ಅಂದ ಹೆಚ್ಚಿಸಿ “ಇನ್‌ಸ್ಟಾಗ್ರಾಮ್‌ ‘ನಲ್ಲಿ ಹಂಚಿಕೊಳ್ಳುತ್ತಿದ್ದರು. ಅಲ್ಲಿ ಅನೇಕರು ಇವರ ಬಹರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೊದಲ ಬಾರಿಗೆ ದೆಹಲಿಯ ಇನ್‌ಫೆದರ್ ಪ್ರಕಾಶನದವರು “ಮೆಮೋರಿ ಕಾರ್ಡ್‌’ ಎನ್ನುವ ಕವನವನ್ನು ಗಮನಿಸಿ, ಕಮೆಂಟ್‌ ಮತ್ತು ಇನ್‌ಬಾಕ್ಸ್‌ ಗೆ ಮೇಸೆಜ್‌ ಕಳಿಸುವ ಮೂಲಕ ಇವರು ಸಂಪರ್ಕಿಸಿದರು. ತಮ್ಮ ಬರಹ ಚೆನ್ನಾಗಿದೆ ಎಂದು “ಮಿಡ್‌ನೈಟ್‌ ರೈಟರ್’ ಎನ್ನುವ “ಮೆಮೋರಿ ಕಾರ್ಡ್‌’ ಕವನ
ಪ್ರಕಟಿಸಿದರು. ಅಲ್ಲಿಂದ ಅವರು ಬರಹ ಆರಂಭವಾಗಿ, ಇದುವರೆಗೆ 52 ಪುಸ್ತಕಗಳಿಗೆ ತಮ್ಮ ಬರಹಗಳನ್ನು ಬರೆದುಕೊಟ್ಟಿದ್ದಾರೆ. 25 ಪುಸ್ತಕಗಳು ಹೊರ ಬಂದಿದ್ದು, ಇನ್ನೂ 27 ಪುಸ್ತಕಗಳು ಪ್ರಕಟಣೆ ಹಂತದಲ್ಲಿವೆ ಎಂದು ಮನಸ್ವಿ ಪಾಟೀಲ ಹೇಳಿಕೆ.

ಏಳೆಂಟು ತಿಂಗಳ ಹಿಂದೆಷ್ಟೇ ಬರವಣಿಗೆ ನನಗೆ ಕೇವಲ ಹವ್ಯಾಸ ಆಗಿತ್ತು. ಈಗ ಅದು ನನಗೆ ಚೈತನ್ಯದಾಯಕವಾಗಿದೆ. ನನ್ನ ಬರಹದ ಬಗ್ಗೆ ಪ್ರಶಂಸೆ
ವ್ಯಕ್ತವಾಗುತ್ತಿದ್ದು, ಖುಷಿ ಪಡೆಯುವಂತೆಯೂ ಆಗಿದೆ. ಯಾವುದೋ ಜವಾಬ್ದಾರಿ ನಮ್ಮ ಮೇಲೆ ಹೆಚ್ಚುವಂತೆ ಮಾಡಿದ ಭಾವನೆ ಮೂಡುತ್ತಿದೆ.
ಮನಸ್ವಿ ಪಾಟೀಲ, ಯುವ ಬರಹಗಾರ್ತಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.