ಬಸವ ತತ್ವ ಬದುಕಿಗೆ ದಾರಿದೀಪ
Team Udayavani, Nov 13, 2017, 11:51 AM IST
ಆಳಂದ: ಬಸವ ತತ್ವ ಆಚರಣೆ ಬದುಕಿಗೆ ದಾರಿ ದೀಪವಾಗಿದೆ ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ| ಶಿವರಾಜ ಪಾಟೀಲ ಹೇಳಿದರು. ತಾಲೂಕಿನ ನರೋಣಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕರ್ನಾಟಕ ವಚನ ಸಾಹಿತ್ಯ ಪರಿಷತ್ ನರೋಣಾ ವಲಯದ ಘಟಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಚನಗಳ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಜಾತ್ಯತೀತ ಮನೋಭಾವ, ಕಾಯಕ, ದಾಸೋಹ ಸಮಾನತೆ ತತ್ವಗಳ ಸಾರಿದ ಬಸವಾದಿ ಶಿವಶರಣರ ಕನಸು ನನಸಾಗಿಸಲು ಮುಂದಾಗಬೇಕು ಎಂದು ಹೇಳಿದರು.
ಕಲಬುರಗಿ ಜಿಲ್ಲಾ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿ, ಶರಣರು ಯಾವುದೇ ಜಾತಿ ಪಂಥಕ್ಕೆ ಸೀಮಿತವಲ್ಲ. ಮನುಷ್ಯ ಧರ್ಮವನ್ನು ಪ್ರತಿಪಾದಿಸಿದ್ದಾರೆ. ಅವರ ನೀಡಿದ ವಚನಗಳ ಮಾಡಿದ ಕಾರ್ಯವನ್ನು ಇಂದಿನ ಎಲ್ಲರಿಗೂ ಆದರ್ಶಪ್ರಯಾವಾಗಿದೆ. ವಚನಗಳನ್ನು ಅಧ್ಯಯನದ ಮೂಲಕ ಆಚರಣೆಗೆ ತರಬೇಕು ಎಂದು
ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಶಿವಶಾಂತರೆಡ್ಡಿ ಮತ್ತು ಅಪ್ಪಸಾಹೇಬ ತೀರ್ಥೆ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗ್ರಾಮದ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿದರು. ಗ್ರಾಮದ ಚಂದ್ರಕಾಂತ ಸಿ. ವಾಲಿ, ಅಪ್ಪಾರಾವ ಪಾಟೀಲ, ಸಿದ್ದಪ್ಪ ವಾಗªರಗಿ, ಬಾಳಪ್ಪ ಬೋಳಶೆಟ್ಟಿ, ಗ್ರಾಪಂ ಸದಸ್ಯ ಪ್ರಭುಲಿಂಗ ಹೀರಾ, ಮಲ್ಕಪ್ಪ ಬಂಕುರ, ತಸ್ಲಿಮಾ ಖಜೂರಿ, ವೀರಭದ್ರಪ್ಪ ಹಾರಕೆ, ನಾಗಣ್ಣ ಬಿರಾದಾರ, ಕಲ್ಯಾಣಿ ತುಕಾಣೆ, ಮುಖ್ಯ ಶಿಕ್ಷಕ ಶಂಕರ ಜಾಧವ, ಸುವರ್ಣ ಮಾಲೀಪಾಟೀಲ, ಅಂಬಾರಾಯ ಗಣಜಲಖೇಡ, ಕ್ಷೇಮಲಿಂಗ ಎಸ್. ಮುರಡಿ ಇದ್ದರು. ಶಿಕ್ಷಕ ನಿಂಗಪ್ಪ ಮಾಗೊಂಡ ಸ್ವಾಗತಿಸಿದರು. ವೀರಣ್ಣ ಬೋಳಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿಂಗರಾಜ ವಾಲಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
MUST WATCH
ಹೊಸ ಸೇರ್ಪಡೆ
Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
IPL 2024; ಲಕ್ನೋ, ಹೈದ್ರಾಬಾದ್ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ
ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ
ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ