ನಡೆ-ನುಡಿ ಒಂದಾದರೆ ಶ್ರೇಷ್ಠತೆ: ಗೊಗ್ಗೆಹಳ್ಳಿ ಶ್ರೀ
Team Udayavani, Oct 20, 2018, 12:04 PM IST
ಕಲಬುರಗಿ: ನಡೆ-ನುಡಿ ಒಂದಾದಲ್ಲಿ ಹಾಗೂ ತನ್ನತ್ತ ಬರುವ ಭಕ್ತರ ಏಳ್ಗೆ ಬಯಸಿ ಅವರ ಸಮಸ್ಯೆಗಳಿಗೆ ಪರಿಹಾರ ಮತ್ತು ಸಮಾಧಾನ ಹೇಳುವರೇ ನಿಜವಾದ ಗುರು ಎಂದು ಗೊಗ್ಗೆಹಳ್ಳಿ ಸಂಗಮೇಶ್ವರ ಶಿವಾಚಾರ್ಯರು ನುಡಿದರು.
ನಗರದ ಕೆಸರಟಗಿ ರಸ್ತೆ ಸಮಾಧಾನದಲ್ಲಿ ಮೌನಯೋಗಿ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶುಕ್ರವಾರ 40 ದಿನಗಳ ಕಾಲ ಧ್ಯಾನಮಂದಿರದಲ್ಲಿ ನಡೆದ ರುದ್ರಪಠಣ ಹಾಗೂ ಗುರು ಮಾಸಾಚರಣೆ ಸಮಾರೋಪ, ವಿಜಯದಶಮಿ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ
ಶ್ರೀಗಳು ಆಶೀರ್ವಚನ ನೀಡಿದರು.
ತಾಯಿ ಬಿಟ್ಟರೆ ಕ್ಷಮಿಸುವರು ಯಾರಾದರೂ ಇದ್ದರೆ ಗುರು ಮಾತ್ರ. ಆತ್ಮಬಲ ವೃದ್ಧಿಸುವ ಗುಣ ಗುರುವಿನಲ್ಲಿರುತ್ತದೆ. ಇದೇ ಹಿನ್ನೆಲೆಯಲ್ಲಿ ಗುರುವಿಗೆ ತನ್ನದೇ ಸ್ಥಾನಮಾನವಿದೆ ಎಂದು ಹೇಳಿದರು.
ಚಲನಚಿತ್ರ: ವೀರಶೈವ-ಲಿಂಗಾಯತ್ ಸಮಾಜಕ್ಕೆ ಭದ್ರ ಅಡಿಪಾಯ ಹಾಕಿರುವ ಹಾನಗಲ್ ಕುಮಾರೇಶ್ವರರ ಕುರಿತು ಚಲನಚಿತ್ರ ಹಾಗೂ ಸಾಕ್ಷ್ಯಾಚಿತ್ರ ಹೊರತರಲು ಉದ್ದೇಶಿಸಲಾಗಿದೆ. ಕುಮಾರೇಶ್ವರ ಅವರು ಜೀವನಪೂರ್ತಿ ಸಮಾಜಕ್ಕಾಗಿ ದುಡಿದಿದ್ದಾರೆ. ಸ್ವಂತಕ್ಕಾಗಿ ಏನು ಮಾಡಿಲ್ಲ. ಸಮಾಜವೇ ಸಂಪತ್ತು ಎಂಬುದಾಗಿ ತಿಳಿದುಕೊಂಡಿದ್ದರು. ಅಂತಹವರ ಜೀವನ ಚರಿತ್ರೆಯನ್ನು ತೆರೆ ಮೇಲೆ ತರಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಚಿತ್ರಕಥೆ ನಿರ್ಮಾಣ-ನಿರ್ದೇಶಕತ್ವ ನಡೆದಿದೆ. ಚಿತ್ರ ನಿರ್ಮಾಣಕ್ಕೆ 2 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಜಡೆ ಹಿರೇಮಠದ ಅಮರೇಶ್ವರ ಮಹಾಸ್ವಾಮೀಜಿ, ಯಾವುದೇ ಗುರುಗಳ ಹತ್ತಿರ ಸಮಾಧಾನ ಮತ್ತು ಶಾಂತಿ ಸಿಕ್ಕರೆ ಅದೇ ದೊಡ್ಡ ಆಶೀರ್ವಾದ ಎಂದು ಹೇಳಿದರು. ಭೈರಾಮಡಗಿ ವಿಜಯಕುಮಾರ ಸ್ವಾಮೀಜಿ ಹಾಜರಿದ್ದರು.
ಪ್ರೊ| ನಿಂಗಮ್ಮ ಪತಂಗೆ ಪ್ರಾಸ್ತಾವಿಕ ಮಾತನಾಡಿ, ಗುರುಮಾಸಾಚರಣೆ ಅಂಗವಾಗಿ ದಿನಾಲು ಬೆಳಗಿನ ಜಾವ 4:30ಕ್ಕೆ ಪ್ರಾರ್ಥನೆ ಮಾಡುವಲ್ಲಿ ಹೊಸ ಚೈತನ್ಯ ಹಾಗೂ ಶಕ್ತಿ ಅಡಗಿದೆ ಎಂದರು. ನಿವೃತ್ತ ಶಿಕ್ಷಕ ಶಿವಶಂಕರ ಇಟಗಿ ನಿರೂಪಿಸಿದರು. ನಂತರ ಮೌನಯೋಗಿಗಳ ತುಲಾಭಾರ,
ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು.
ಪಾದಯಾತ್ರೆ ಭಕ್ತರಿಗೆ ಮಹಾಪ್ರಸಾದ
ಸೊಲ್ಲಾಪುರ: ತುಳಜಾಪುರದ ಅಂಬಾ ಭವಾನಿ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಸೇವಾ ಮಂಡಳ ವತಿಯಿಂದ ಅಕ್ಕಲಕೋಟ-ಹನ್ನೂರ ರಸ್ತೆಯಲ್ಲಿ ಅ. 20 ರಿಂದ 22ರ ವರೆಗೆ ಮಹಾಪ್ರಸಾದ ಹಾಗೂ ಔಷಧೋಪಚಾರ ವ್ಯವಸ್ಥೆ ಮಾಡಲಾಗುವುದು ಎಂದು ಬಸವರಾಜ ಅಳ್ಳೋಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಮಂಡಳದ ವತಿಯಿಂದ ತುಳಜಾಪುರ ಪಾದಯಾತ್ರಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ತಾಲೂಕು ವೈದ್ಯಕೀಯ ಅಧಿಕಾರಿ ಡಾ| ಕರಜಖೇಡಕರ್, ಗಣೇಶ ಅಳ್ಳೋಳಿ, ಪರಮೇಶ್ವರ ಬಿರಾಜದಾರ ಹಾಗೂ ಮತ್ತಿತರರು ಔಷಧೋಪಚಾರ ಮಾಡಲಿದ್ದಾರೆ ಎಂದು ಹೇಳಿದರು. ಮಂಡಳದ ಮಹೇಶ ಪೂಜಾರಿ, ನಿಲಕಂಠ ಕಾಪಸೆ, ವಿಕ್ರಾಂತ ಅಳ್ಳೋಳಿ, ಶರಣು ಕಾಪಸೆ, ರಾಜು ಮಾಶಾಳೆ, ಅನಿಲ ಕಟಾರೆ, ಪ್ರಶಾಂತ ಹಾರಕೂಡ, ವಿಶಾಲ ಕೋಂಪಾ, ನಾಗು ಬಹಿರಗೊಂಡೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…