ಅಪ್ಪನ ದೇವಸ್ಥಾನಕ್ಕೆ ಭಕ್ತಸಾಗರ
Team Udayavani, Aug 22, 2017, 10:35 AM IST
ಕಲಬುರಗಿ: ಶ್ರಾವಣ ಕಡೇ ಸೋಮವಾರ ಹಾಗೂ ಬೆನಕನ ಅಮಾವಾಸ್ಯೆಯಂದು ನಗರದ ಪ್ರಸಿದ್ಧ ಐತಿಹಾಸಿಕ
ಶರಣಬಸವೇಶ್ವರ ದೇವಸ್ಥಾನಕ್ಕೆ ನಗರವಲ್ಲದೇ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಮೂಲೆ-ಮೂಲೆಗಳಿಂದ ಸಹಸ್ರಾರು
ಭಕ್ತರು ಆಗಮಿಸಿ ಮಹಾಪುರುಷ ಶರಣರ ದರ್ಶನ ಪಡೆದು ಪುನೀತರಾದರು. ಶ್ರಾವಣ ಮಾಸದ ಕೊನೆ ಸೋಮವಾರ ಹಾಗೂ ಅಮಾವಾಸ್ಯೆಯಾಗಿದ್ದರಿಂದ ಬೆಳಗಿನ ಜಾವದಿಂದಲೇ ಭಕ್ತರು ಶರಣಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಶರಣರ ದರ್ಶನ ಪಡೆದರು. ದೀಡ ನಮಸ್ಕಾರ, ನೈವೇದ್ಯ ಸೇರಿದಂತೆ ಇತರೆ ಹರಕೆ ತೀರಿಸಿದರು. ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳು, ಯಾದಗಿರಿ ಜಿಲ್ಲೆಯಲ್ಲದೇ ನೆರೆಯ ವಿವಿಧ ಜಿಲ್ಲೆಯ ಗ್ರಾಮಗಳು ಸೇರಿದಂತೆ ವಿವಿಧೆಡೆ ಭಕ್ತರು ತಮ್ಮೂರಿನಿಂದ ಪಾದಯಾತ್ರೆ ಮೂಲಕ ಹಲವು ಭಜನಾ ತಂಡಗಳು ಸೋಮವಾರ ಅಪ್ಪನ ಗುಡಿಗೆ ಆಗಮಿಸಿ ಭಕ್ತಿ ಭಾವ ಸಮರ್ಪಿಸಿದವು. ವಾರ ಇಲ್ಲವೇ ನಾಲ್ಕು ದಿನಗಳ ಪಾದಯಾತ್ರೆ ಮೂಲಕ ಆಗಮಿಸಿದ ತಂಡಗಳಿಗೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪಾಜಿ ಅವರು ಶುಭಾಶೀರ್ವಾದ ಮಾಡಿದರು. ಶ್ರಾವಣ ಮಾಸದಂಗವಾಗಿ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದಲ್ಲಿ ಪ್ರತಿನಿತ್ಯ ಉಪನ್ಯಾಸ ನಡೆದು ಬರುತ್ತಿದ್ದು, ಆ. 29ರವರೆಗೆ ನಡೆಯಲಿದೆ. 30ರಂದು ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ 34ನೇ ಪುಣ್ಯಸ್ಮರಣೋತ್ಸವ ನಡೆಯಲಿದೆ. ಅಮವಾಸ್ಯೆ ನಿಮಿತ್ತ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಮಹೋತ್ಸವ ಸಹ ನಡೆಯಿತು. ಪಲ್ಲಕ್ಕಿ ಉತ್ಸವದುದ್ದಕ್ಕೂ ಭಕ್ತರಿಂದ ಶರಣಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಶರಣಬಸವೇಶ್ವರರ ಜಾತ್ರೆ ಸಂದರ್ಭದಲ್ಲಿ ಸೇರುವಷ್ಟು ಭಕ್ತರು ಆವರಣದಲ್ಲಿ ಸೇರಿದ್ದರು. ಇಡೀ ಆವರಣ ಜಾತ್ರೆ ಮೈದಾನದಂತೆ ಕಂಡುಬಂತು. ಡಾ| ಶಿವರಾಜ ಶಾಸ್ತ್ರೀ ಅವರು ಶರಣಬಸವೇಶ್ವರ ಅವರ ಜೀವನ ಚರಿತ್ರೆ ಹಾಗೂ ಪವಾಡಗಳ ಕುರಿತು ಪ್ರವಚನ ಪ್ರಸ್ತುತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ