ರೈತರಿಗೆ ಆರ್ಥಿಕ ಹೊಡೆತ, ವ್ಯಾಪಾರಿಗಳಿಗೆ ಸಂಕಟ
ಬರಿಗೈಯಿಂದಲೇ ಮನೆಗೆ ಮರಳುವಂತಾದ ಸೋಯಾಬಿನ್ ರೈತರು
Team Udayavani, Oct 7, 2021, 4:09 PM IST
ಆಳಂದ: ಭರ್ಜರಿಯಾಗಿ ರಾಶಿಗೆ ಬಂದಿರುವ ಸೋಯಾಬಿನ್ ಬೆಳೆ ಮಳೆ ನೀರಿಗೆ ನೆನೆದು ಧಾನ್ಯವೆಲ್ಲ ಉಬ್ಬಿದ್ದರಿಂದ ರಾಶಿ ಮಾಡಿದವರು ಮಾರಾಟಕ್ಕೆ ಮುಂದಾದರೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯದೇ ಅಗ್ಗದ ದರದಲ್ಲಿ ಮಾರಾಟ ಮಾಡಿ ಕೈಸುಟ್ಟುಕೊಳ್ಳುತ್ತಿದ್ದಾರೆ.
ರಾಶಿ ಮಾಡಿದ ಧಾನ್ಯವು ನೀರಿಗೆ ನೆನೆದ ಪ್ರಯುಕ್ತ ಪುನಃ ಬಿಸಿಲಿಗೆ ಹಾಕಿ ಒಣಗಿಸಲು ದುಪ್ಪಟ್ಟು ಲಾಗೋಡಿ ಭರಿಸುತ್ತಿದ್ದಾರೆ. ಇತ್ತ ಬೇಗ ಮಾರಾಟ ಮಾಡಿ ಕೈತೊಳೆದುಕೊಳ್ಳಲು ಮುಂದಾದ ರೈತರಿಗೆ ನಿಮ್ಮ ಧಾನ್ಯ ಗುಣಮಟ್ಟದಿಂದ ಕೂಡಿಲ್ಲ ಎಂದು ಅಗ್ಗದ ದರದಲ್ಲಿ ಖರೀದಿಸುವ ವ್ಯಾಪಾರಿಗಳು ಸಹ ಖರೀದಿಸಿದ ಧಾನ್ಯಗಳನ್ನು ಪುನಃ ಬಿಸಿಲಿಗೆ ಹಾಕಿ ತೆಗೆಯುವುದರಲ್ಲೇ ಸುಸ್ತಾಗಿ ಕೂಲಿಯಲಾಗೋಡಿ ಭರಿಸತೊಡಿದ್ದಾರೆ.
ಆರಂಭದಲ್ಲಿಸೋಯಾಬಿನ್, ಉದ್ದು, ಹೆಸರು ಬೆಳೆಗೆ ಮಳೆಕೊರತೆ ಎದುರಾಗಿ ನಂತರ ಬಂದ ಮಳೆಯಿಂದ ಬೆಳೆದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಮಳೆಯ ಕಾಟದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕೆಲವು ರೈತರ ಬೆಳೆ ಕೈಗೆ ಬಂದರೂ ನಿರೀಕ್ಷಿತ ಬೆಲೆ ಬಾರದೇ ಬೆಳೆಗೆ ಮಾಡಿದ ಲಾಗೋಡಿ ಖರ್ಚು ಕಳೆದರೆ ಬರಿಗೈಯಿಂದಲೇ ಮನೆಗೆ ಮರಳುವಂತಾಗಿದೆ¨ಎಂದು ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ