ಸಂಭ್ರಮದ ಕೊಂಚೂರು ಹನುಮಾನ ರಥೋತ್ಸವ


Team Udayavani, Dec 23, 2018, 12:23 PM IST

gul-1.jpg

ವಾಡಿ: ಭಕ್ತ ಸಾಗರದ ಮಧ್ಯೆ ಶನಿವಾರ ಸಂಜೆ ಕೊಂಚೂರು ಶ್ರೀ ಹನುಮಾನ ರಥೋತ್ಸವ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆ ಭಕ್ತರು ತೇರಿಗೆ ಬಾರೆಕಾಯಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು.

ದರ್ಶನಕ್ಕಾಗಿ ಬೆಳಗ್ಗೆಯಿಂದ ಶ್ರೀ ಹನುಮಾನ ಮಂದಿರದಲ್ಲಿ ಕಿಕ್ಕಿರಿದು ಜಮಾಯಿಸಿದ್ದ ಭಕ್ತರು, ಸಾಲುಗಟ್ಟಿ ಕಾಯಿ-ಕರ್ಪೂರ, ನೈವೇದ್ಯ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು. ವಿಶೇಷವಾಗಿ ಮಾರವಾಡಿ ಸಮಾಜದ ಭಕ್ತರು ಹನುಮಾನ ದೇವರ ಪಲ್ಲಕ್ಕಿ ಹೊತ್ತು ಸಂಪ್ರದಾಯ ಪಾಲಿಸಿದರು. ನಂದಿಕೋಲು ಮತ್ತು ಕೇಸರಿ ಧ್ವಜದ ಸಾಕ್ಷಿಯಾಗಿ ತೇರು ಸಾಗಿತು. 

ಲಾಟಿ ರುಚಿಯುಂಡ ಭಕ್ತರು: ದೇವಸ್ಥಾನದ ಎದುರಿನ ರಥ ಬೀದಿಯಲ್ಲಿ ತೇರು ಸಾಗುತ್ತಿದ್ದಂತೆ ಭಕ್ತರು ಬಾರೆಕಾಯಿ ಮತ್ತು ಬಾಳೆ ಹಣ್ಣಿನ ಸುರಿಮಳೆ ಸುರಿಸಿದರು. ನೂರಾರು ಜನ ಭಕ್ತರು ರಥದ ಚಕ್ರಗಳ ಹಿಂದೆ ಓಡುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು. ಈ ಮಧ್ಯೆ ಕೆಲ ಪುಂಡ ಹುಡುಗರು ತೇರಿಗೆ ಬಾಳೆಕಾಯಿ ಎಸೆಯುವ ಬದಲು ಕಬ್ಬಿನ ತುಂಡುಗಳನ್ನು ಎಸೆಯಲು ಶುರುಮಾಡಿದರು. ಕೆಲವರು ಕಬ್ಬಿನ ಏಟಿಗೆ ಗಾಯಗೊಂಡರು. ತಕ್ಷಣ ಜಾಗೃತರಾದ ರಥೋತ್ಸವದ ರಕ್ಷಣೆಗೆ ನಿಂತಿದ್ದ ಪೋಲಿಸರು ಭಕ್ತರನ್ನು ಚದುರಿಸಲು ಲಾಟಿ ಬೀಸಿದರು. ಅನೇಕ ಜನ ಭಕ್ತರು ಪೊಲೀಸರ ಲಾಟಿಯ ರುಚಿಯುಂಡ ಬಳಿಕ ತೇರಿನಿಂದ ದೂರ ಸರಿದ ಪ್ರಸಂಗ
ನಡೆಯಿತು. 

 ಏಲಾಂಬಿಕೆ ದೇವಿಗೆ ಹಡ್ಡಲಗಿ: ಕೊಂಚೂರು ಪಕ್ಕದ ಬಳವಡಗಿ ಗ್ರಾಮದಲ್ಲಿ ಇದೇ ವೇಳೆ ಏಕಕಾಲಕ್ಕೆ ಶ್ರೀ ಏಲಾಂಬಿಕೆ ದೇವಿ ಜಾತ್ರೆ ನಡೆಯಿತು. ಕೊಂಚೂರಿಗೆ ಬರುವ ಮುನ್ನ ಭಕ್ತರು, ಐತಿಹಾಸಿಕ ಶ್ರೀ ಏಲಾಂಬಿಕೆ ದೇವಿಗೆ ಜೋಳದ ಕಡಬು, ಪುಂಡಿಪಲ್ಲೆ, ಹೋಳಿಗೆ, ತರಕಾರಿ ಪಲ್ಲೆ ಮತ್ತು ಜೋಳದ ಬಾನವನ್ನು ನೈವೇದ್ಯವಾಗಿ ನೀಡಿ ಜೋಗುತಿಯರ ಕೈಯಿಂದ ಹಡ್ಡಲಗಿ ತುಂಬಿಸುವ ಮೂಲಕ
ಕೃತಾರ್ಥರಾದರು. ಬಳವಡಗಿಯಿಂದ ಕೊಂಚೂರು ವರೆಗೆ ಸಾವಿರಾರು ಜನ ಭಕ್ತರು ಕಾಲ್ನಡಿಗೆಯಲ್ಲಿ ಬಂದು ಹನುಮಾನ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ಸಂಪ್ರದಾಯ. ಒಟ್ಟಾರೆ ಬಳವಡಗಿ ಗ್ರಾಮದ ಶ್ರೀ ಏಲಾಂಬಿಕೆ ದೇವಿ ಜಾತ್ರೆ ಹಾಗೂ ಕೊಂಚೂರು ಗ್ರಾಮದ ಶ್ರೀ ಹನುಮಾನ ದೇವರ ರಥೋತ್ಸವ ಏಕಕಾಲಕ್ಕೆ ನಡೆಯಿತು. 

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.