ಪ್ರತಿನಿಧಿಗಳ ನಿಷ್ಕಾಳಜಿಗೆ ಹಿಡಿದ ಕನ್ನಡಿ
ಹೆದ್ದಾರಿ ಪಕ್ಕದಲ್ಲೇ ಕಸದ ರಾಶಿ¬ಜನರ ಮೌನ-ಅಧಿಕಾರಿಗಳ ನಿರ್ಲಕ್ಷ್ಯ
Team Udayavani, Jan 4, 2021, 4:18 PM IST
ಅಫಜಲಪುರ: ಸಾಮಾನ್ಯವಾಗಿ ಕಸವನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಹಾಕುವುದು ವಾಡಿಕೆ, ಆದರೆ ಮುಖ್ಯರಸ್ತೆ, ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿಹಾಕುತ್ತಿರುವುದರಿಂದ ಜನಸಾಮಾನ್ಯರಿಗೆ ಕಿರಿಕಿರಿ ಆಗುತ್ತಿದೆ.
ತಾಲೂಕಿನ ಗೊಬ್ಬೂರ (ಬಿ) ಗ್ರಾಮ ಜಿಲ್ಲಾ ಪಂಚಾಯಿತಿ ಮತಕ್ಷೇತ್ರವಾಗಿದ್ದು, ಗ್ರಾ.ಪಂಕೇಂದ್ರ ಸ್ಥಳವಾಗಿದೆ. ತಾಲೂಕಿನಲ್ಲಿ ದೊಡ್ಡ ಗ್ರಾಮವಾಗಿದೆ. ಗ್ರಾ.ಪಂನವರು ನಿತ್ಯ ಮುಖ್ಯರಸ್ತೆಗಳ ಪಕ್ಕದಲ್ಲಿ ಕಸದ ರಾಶಿ ಹಾಕುವ ಮೂಲಕನೈರ್ಮಲ್ಯ ಸಮಸ್ಯೆಗೆ ಕಾರಣ ವಾಗುತ್ತಿದ್ದಾರೆ. ಗೊಬ್ಬೂರ ಮಾತ್ರವಲ್ಲದೇ ತಾಲೂಕಿನ ಅನೇಕಗ್ರಾಮಗಳಲ್ಲಿ ಕಸದ ಸಮಸ್ಯೆ ತಲೆದೋರಿದ್ದು, ಕಸದ ಸಮಸ್ಯೆ ನಿವಾರಣೆಗೆ ಸಂಬಂಧ ಪಟ್ಟವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಗೊಬ್ಬೂರ (ಬಿ), ಕರ್ಜಗಿಗಳಂತೆ ತಾಲೂಕಿನಮಲ್ಲಾಬಾದ, ಮಾತೋಳಿ, ಅತನೂರ, ಮಣೂರ,ಗೊಬ್ಬೂರವಾಡಿ ತಾಂಡಾ ಸೇರಿದಂತೆ ಬಹುತೇಕರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಗ್ರಾಮಗಳಲ್ಲಿಕಸದ ಸಮಸ್ಯೆ ಕಾಡುತ್ತಿದೆ.
ಕಸ ಹಾಕುವುದು ರಸ್ತೆ ಪಕ್ಕದಲ್ಲೇ: ಗೊಬ್ಬೂರ(ಬಿ) ಗ್ರಾಮದಲ್ಲಿ ಪಂಚಾಯಿತಿಗೆ ಸಂಬಂಪಟ್ಟ ಖಾಲಿ ಗೋಮಾಳಗಳಿದ್ದರೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಕಸ ಹಾಕಲಾಗುತ್ತಿದೆ. ಸಾರ್ವಜನಿಕರ ಮನೆ ಕಸ, ಚರಂಡಿಯೊಳಗಿನಕಸ, ಅಂಗಡಿ, ಮುಂಗಟ್ಟುಗಳ ಕಸ ಸೇರಿಸಿಹೆದ್ದಾರಿ ಪಕ್ಕದಲ್ಲಿ ತಂದು ಹಾಕಲಾಗುತ್ತಿದೆ.ಇದರಿಂದ ದುರ್ನತ ಬೀರುತ್ತಿದ್ದು ಗ್ರಾಮಸ್ಥರಿಗೆಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಕರ್ಜಗಿಯಲ್ಲೂ ಕಸದ ಸಮಸ್ಯೆ: ತಾಲೂಕಿಇನ್ನೊಂದು ದೊಡ್ಡ ಗ್ರಾ.ಪಂ ಕೇಂದ್ರಸ್ಥಳ, ಜಿಲ್ಲಾ ಪಂಚಾಯಿತಿ ಮತಕ್ಷೇತ್ರವಾಗಿರುವ ಕರ್ಜಗಿಯಲ್ಲೂ ಕಸದ ಸಮಸ್ಯೆ ತಲೆದೋರಿದೆ. ಗ್ರಾಮದಲ್ಲಿನ ಕಸ ತಂದು, ರಸ್ತೆಗಳ ಪಕ್ಕದಲ್ಲಿ ಹಾಕುವ್ಯದರಿಂದ ಸೊಳ್ಳೆ ಉತ್ಪತ್ತಿಯಾಗಿ ಹಗಲು-ರಾತ್ರಿ ಜನರು ನೆಮ್ಮದಿ ಕಳೆದುಕೊಳ್ಳುವಂತೆ ಆಗಿದೆ.
ಸಾರ್ವಜನಿಕರಲ್ಲೂ ಬಂದಿಲ್ಲ ಜಾಗೃತಿ: ಇನ್ನು ಗ್ರಾ.ಪಂನವರು ಗ್ರಾಮದ ಕಸ ತಂದು ರಸ್ತೆಗಳ ಪಕ್ಕದಲ್ಲಿ ಹಾಕುತ್ತಾರೆ. ಜೊತೆಗೆ ಗ್ರಾಮಸ್ಥರು,ಸಾರ್ವಜನಿಕರಲ್ಲೂ ಜಾಗೃತಿ ಮೂಡಿಲ್ಲ.
ನಿಯಮ ಗಾಳಿಗೆ: ಸರ್ಕಾರ ಕಸ ವಿಲೇವಾರಿಗಾಗಿಯೇ ವಿನೂತನ ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ. ಕಸವನ್ನು ಹಸಿ ಮತ್ತುಒಣ ಕಸವೆಂದು ವಿಂಗಡಿಸಿ ಪಂಚಾಯಿತಿಒದಗಿಸಿದ ಕಸದ ತೊಟ್ಟಿಗಳಿಗೆ ಹಾಕುವಂತೆನಿಯಮ ರೂಪಿಸಲಾಗಿದೆ. ಆದರೆ ಕಸವನ್ನುಸರ್ಕಾರದ ನಿಯಮತೆ ವಿಲೇವಾರಿ ಮಾಡದೆಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿಮನಸೋ ಇಚ್ಚೆ ಕಸ ಹಾಕುತ್ತಿದ್ದಾರೆ. ಇದರಿಂದಾಗಿಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ವಾಹನಗಳಲ್ಲಿ ಚಲಿಸುವಾಗ ಯಾವುದೇಗ್ರಾಮಗಳು ಬಂದರೂ ತಲೆಬಿಸಿ ಶುರುವಾಗುತ್ತದೆ.ಗ್ರಾಮ ಹತ್ತಿರವಾಗುತ್ತಿದ್ದಂತೆ ಕಸದ ರಾಶಿರಸ್ತೆಗಳ ಪಕ್ಕದಲ್ಲಿರುತ್ತದೆ. ಇದರಿಂದ ದುರ್ನಾತಬೀರುತ್ತದೆ. ಆದ್ದರಿಂದ ಕೂಡಲೇ ಕಸ ವಿಲೆವಾಗಿಗೆಕ್ರಮ ಕೈಗೊಳ್ಳಬೇಕು ಎಂದು ಸಮಾಜ ಸೇವಕಜೆ.ಎಂ ಕೊರಬು ಮನವಿ ಮಾಡಿದ್ದಾರೆ.
ಸರ್ಕಾರದ ನಿಯಮದಂತೆ ಕಸ ವಿಲೇವಾರಿ ಆದರೆ ಯಾವ ಊರುಗಳಲ್ಲೂ ಸಮಸ್ಯೆ ಆಗುವುದಿಲ್ಲ. ಪಂಚಾಯಿತಿಯವರಿಗೆ ಕನಿಷ್ಠ ಕಾಳಜಿ ಇಲ್ಲ. ಸಾರ್ವಜನಿಕರಲ್ಲೂ ಜಾಗೃತಿ ಬಂದಿಲ್ಲ. ಹೀಗಾಗಿ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಕಸ ವಿಲೇವಾರಿಗಾಗಿ ಸರ್ಕಾರ ಕೈಗೊಂಡ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು.-ಶ್ರೀಮಂತ ಬಿರಾದಾರ, ಹೋರಾಟಗಾರ
ದೇವಲ ಗಾಣಗಾಪುರ, ಮಾಶಾಳ ಸೇರಿದಂತೆ ನಾಲ್ಕೈದು ಕಡೆ ಮಾತ್ರಸ್ಥಳ ಮತ್ತು ವಾಹನ ಸೌಕರ್ಯವಿದೆ.ಉಳಿದ ಕಡೆ ವಾಹನವಿದ್ದರೆ ನಿವೇಶನವಿಲ್ಲ,ನಿವೇಶನವಿದ್ದಲ್ಲಿ ವಾಹನ ಸಮಸ್ಯೆ ಇದೆ.ಇದಕ್ಕಾಗಿ 100ಹಿ100 ನಿವೇಶನ ಬೇಕು.ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ. -ನಬಿಸಾಬ್, ತಾ.ಪಂ, ಇಒ
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್