ಕಮಲಾಪುರ ಬಸ್ ನಿಲ್ದಾಣ ಕೊಳಚೆ ತಾಣ
Team Udayavani, Jun 11, 2018, 9:48 AM IST
ಕಮಲಾಪುರ: ಇದು ನೂತನ ತಾಲೂಕು ಕಮಲಾಪುರ ಬಸ್ ನಿಲ್ದಾಣದ ದೃಶ್ಯ. ಯಾವ ದೃಷ್ಟಿಯಿಂದ ನೋಡಿದರೂ ಬಸ್ ನಿಲ್ದಾಣ ಎನ್ನುವಂತೆ ಕಾಣುವುದೇ ಇಲ್ಲ.
ಒಂದಿಷ್ಟು ಮಳೆ ಬಂದರೆ ಸಾಕು ನೀರು ನಿಲ್ದಾಣದೊಳಗೆ ನಿಲ್ಲುತ್ತದೆ. ಒಂದು ಹೆಜ್ಜೆ ಇಡಬೇಕೆಂದರೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಿಸಿ ರಸ್ತೆ ಇರದೇ ಬರೀ ಮಣ್ಣಿನದ್ದಾಗಿದ್ದರಿಂದ ತಗ್ಗು-ಗುಂಡಿಗಳು ಬಿದ್ದಿವೆ. ಇದರಲ್ಲಿ ನೀರು ನಿಂತು ಕೊಳಚೆಯಂತೆ ನಿರ್ಮಾಣವಾಗುತ್ತಿರುವುದು ಪ್ರಯಾಣಿಕರು ಹಾಗೂ ವ್ಯಾಪಾರಸ್ಥರು ತೀವ್ರ ಯಾತನೆ ಅನುಭವಿಸುವಂತಾಗಿದೆ.
ಬಸ್ ನಿಲ್ದಾಣದ ಪಕ್ಕದಲ್ಲೇ ಹರಿಯುವ ಚರಂಡಿ ನೀರಿನ ವಾಸನೆಯಂತು ಬಸ್ ನಿಲ್ದಾಣದೊಳಗೆ ಕೂಡಲಿಕ್ಕೆ, ನಿಲ್ಲಲಿಕ್ಕೆ
ಬಾರದಂತೆ ಮಾಡುತ್ತಿದೆ. ಇದಕ್ಕೆಲ್ಲ ಮುಕ್ತಿ ಯಾವಾಗ ಎಂದು ಪಟ್ಟಣದ ಜನತೆ ಪ್ರಶ್ನಿಸುತ್ತಿದ್ದಾರೆ.
ಕಲಬುರಗಿ-ಬೀದರ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲಿರುವ ನೂತನ ತಾಲೂಕು ಕಮಲಾಪುರ ಬಸ್ ನಿಲ್ದಾಣದೊಳಗೆ ದಿನಾಲು ನೂರಾರು ಬಸ್ಗಳು ಬರುತ್ತವೆ. ಆದರೆ ಅವುಗಳನ್ನು ನಿಲ್ಲಲು ಸೂಕ್ತ ಸ್ಥಳವಿರದಿರುವುದು ಹಾಗೂ ಪ್ರಯಾಣಿಕರು ಬಸ್ ಏರಲು ಹರ ಸಾಹಸ ಪಡುತ್ತಿರುವುದು ನಿಜಕ್ಕೂ ಜನಪ್ರತಿನಿಧಿಗಳಿಗೆ ಸವಾಲು ಎನ್ನುವಂತಾಗಿದೆ.
ನೂತನ ತಾಲೂಕಾಗಿದ್ದರಿಂದ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ಮೇಲೆ ಈ ಬಸ್ ನಿಲ್ದಾಣ ಅಭಿವೃದ್ಧಿಪಡಿಸುವ ಮಹತ್ವದ ಜವಾಬ್ದಾರಿ ಅಡಗಿದೆ. ಈ ನಿಟ್ಟಿನಲ್ಲಿ ಶಾಸಕರು ಕೈಗೊಳ್ಳುವ ಶಾಶ್ವತ ಕಾಮಗಾರಿಗಿಂತ ಮೊದಲು ಹಾಗೂ ತುರ್ತಾಗಿ ಗ್ರಾಪಂನವರು ಶುಚಿತ್ವ ಕಾರ್ಯ ಕೈಗೊಳ್ಳುವುದು ಅಗತ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್