ಕೊಲ್ಲಾಪುರ ಮಹಾಲಕ್ಷ್ಮೀ ರಥೋತ್ಸವ
Team Udayavani, Feb 18, 2019, 6:31 AM IST
ಶಹಾಬಾದ: ನಗರದಲ್ಲಿ ರವಿವಾರ ರಾಮಾ ಹಲ್ಲಾದಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮೀ ದೇವಿ ರಥೋತ್ಸವ ಸಂಗೀತಾ ಅಮ್ಮನವರ ನೇತೃತ್ವದಲ್ಲಿ ಜರುಗಿತು. ಶನಿವಾರ ಬೆಳಗ್ಗೆ ದೇವಿಗೆ ಕಾಕಡಾರತಿ, ಅಭೀಷೇಕ, ಅಲಂಕಾರ, ವೈದಿಕತ್ವದಲ್ಲಿ ಗಣಪತಿ ಹವನ, ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ, ಸತ್ಯನಾರಾಯಣ ಪೂಜೆ, ಮಹಾಪ್ರಸಾದ ವಿತರಣೆ, ಸಾಯಂಕಾಲ ವೇದಘೋಷ, ಮಂತ್ರಪುಷ್ಟ ನಡೆಯಿತು. ರಾತ್ರಿ 9 ಗಂಟೆಗೆ ಕಲಾವಿದ ಅನಂತ ಕುಲಕರ್ಣಿ ಬಾಗಲಕೋಟ, ಭದ್ರಿನಾಥ ಮುಡಬಿ ಹಾರ್ಮೋನಿಯಂ, ಜಯತೀರ್ಥ ಆದ್ಯ ಅವರಿಂದ ತಬಲಾ ಸೇವೆ ನಡೆಯಿತು.
ಗುರುವಾರ ಬೆಳಗ್ಗೆ ಮಹಾಲಕ್ಷ್ಮೀ ಹವನ, ಕುಂಕುಮಾರ್ಚನೆ, ಹವನದ ಪೂರ್ಣಾಹುತಿ ಭವ್ಯ ರಥೋತ್ಸವ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ, ಸಂಗೀತಾ ಅಮ್ಮನವರಿಂದ ಭಕ್ತರಿಗೆ ಪ್ರಸಾದ ವಿತರಣೆ, ಆಶೀರ್ವಚನ, ರಾತ್ರಿ 8 ಗಂಟೆಗೆ ತೊಟ್ಟಿಲು ಸೇವೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್