ಸೈನಿಕರಿಂದ ಕೆರೆ ಸ್ವತ್ಛತೆ
Team Udayavani, Oct 11, 2018, 12:35 PM IST
ಬೆಂಗಳೂರು: ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಕೇಂದ್ರದ ಸಾವಿರಕ್ಕೂ ಅಧಿಕ ಸೈನಿಕರು ಪರಿಸರ ಸಂರಕ್ಷಣೆಯ ಅಭಿಯಾನದಡಿ ಬುಧವಾರ ಹಲಸೂರು ಕೆರೆಯಲ್ಲಿ ಸ್ವತ್ಛತಾ ಕಾರ್ಯ ನಡೆಸಿದರು.
ಬೆಳಗ್ಗೆಯಿಂದಲೇ ಕರೆಯ ನೀರು ಹಾಗೂ ದಡದಲ್ಲಿ ದಟ್ಟಾವಾಗಿ ಬೆಳೆದಿದ್ದ ಕಳೆ ಕಿತ್ತು, ನೀರನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸುವ ಪ್ರಯತ್ನ ನಡೆಸಿದರು. ಈ ಮೂಲಕ ಸೈನಿಕರು ದೇಶದ ಗಡಿ ಕಾಯುವುದು ಮಾತ್ರವಲ್ಲದೇ
ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೂ ಮುಂದಿದ್ದೇವೆ ಎಂಬುದನ್ನು ಸಾಬೀತು ಮಾಡಿದರು.
ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಕೇಂದ್ರದ ಸೈನಿಕರು ತಮ್ಮ ನಿತ್ಯದ ತರಬೇತಿಗಾಗಿ ಹಲಸೂರು ಕರೆ
ಬಳಸಿಕೊಳ್ಳುತ್ತಾರೆ. ಕಳೆದ ಕೆಲವು ವರ್ಷಗಳಿಂದ ಒಳಚರಂಡಿ ನೀರು ನೇರವಾಗಿ ಕೆರೆಗೆ ಹರಿದುಬರುತ್ತಿರುವುದರಿಂದ ನೀರು ಕಲುಷಿತವಾಗಿರುವ ಜತೆಗೆ ಪಾಚಿ ಹಾಗೂ ಅನುಪಯುಕ್ತ ವಸ್ತುಗಳು ತುಂಬಿಕೊಂಡಿದ್ದವು.
ಆಗಾಗೇ ಸ್ವತ್ಛತಾ ಕಾರ್ಯ ನಡೆಸುತ್ತಿದ್ದರೂ, ತ್ಯಾಜ್ಯ ಬೀಳುವ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಇದು ಕೆರೆಯ ಸುತ್ತಲಿನ ಪರಿಸರ ಕಲುಷಿತವಾಗುವಂತೆ ಮಾಡಿದೆ. ಕೆರೆಗೆ ಯಾವುದೇ ರೀತಿಯಲ್ಲೂ ಅನಾಹುತ ಆಗದಂತೆ ಸೈನಿಕರು ಎಷ್ಟೇ ಜಾಗೃತಿ ಹಾಗೂ ಎಚ್ಚರ ವಹಿಸಿದರೂ, ಬೇರೆ ಬೇರೆ ಮೂಲಗಳಿಂದ ಕಲುಷಿತವಾಗುತ್ತಲೇ ಇದೆ.
ಹೀಗಾಗಿ ಆಗಾಗ ಸ್ವತ್ಛತಾ ಕಾರ್ಯವನ್ನು ಮಾಡುತ್ತಿರುತ್ತಾರೆ. ಅದರ ಮುಂದುವರಿದ ಭಾಗವಾಗಿ ಬುಧವಾರ ನಿರಂತರ ಶ್ರಮದಾನ ಮೂಲಕ ಕೆರೆ ಸ್ವತ್ಛತೆ ಮಾಡಿದ್ದಾರೆ. ದೋಣಿ ಸಹಿತವಾಗಿ ವಿವಿಧ ಪರಿಕರಗಳನ್ನು ಬಳಸಿಕೊಂಡು ಕೆರೆಯ ಸ್ವತ್ಛತಾ ಕಾರ್ಯ ನಡೆಸಿ, ವಿವಿಧ ತ್ಯಾಜ್ಯ ವಸ್ತುಗಳನ್ನು ಕೆರೆಯಿಂದ ಮೇಲೆ ತೆಗೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ