ಗ್ರಾಮಗಳು ಚಿತ್ತಾಪುರದಲ್ಲಿಯೇ ಮುಂದುವರಿಯಲಿ
Team Udayavani, Nov 8, 2020, 6:26 PM IST
ಚಿತ್ತಾಪುರ: ತಾಲೂಕಿನಿಂದ ಕೇವಲ 10ಕಿ.ಮೀ ಅಂತರದಲ್ಲಿರುವ ರಾವೂರ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡಿರುವುದಕ್ಕೆ ಗ್ರಾಮಸ್ಥರ ವಿರೋಧವಿದ್ದು, ಯತಾಸ್ಥಿತಿ ಚಿತ್ತಾಪುರ ತಾಲೂಕಿನಲ್ಲಿಯೇ ಮುಂದುವರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಗಿರಿಧರ ವೈಷ್ಣವ ಆಗ್ರಹಿಸಿದ್ದಾರೆ.
ಚಿತ್ತಾಪುರ ತಾಲೂಕಿನಿಂದ ಹೆಚ್ಚುವರಿಯಾಗಿ ಕಾಳಗಿ ತಾಲೂಕಿಗೆ ಒಟ್ಟು 13 ಗ್ರಾಮ ಮತ್ತು ಶಹಾಬಾದತಾಲೂಕಿಗೆ ಒಟ್ಟು 8 ಗ್ರಾಮ ಸೇರ್ಪಡೆ ಮಾಡುವ ಕುರಿತುಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲು ಕರೆದ ಸಭೆಯಲ್ಲಿ, ತಹಶೀಲ್ದಾರ್ಗೆ ಮನವಿ ಸಲ್ಲಿಸಿದ ಅವರು, ಈಗ್ರಾಮಗಳು ಭೌಗೋಳಿಕವಾಗಿ ಚಿತ್ತಾಪುರ ತಾಲೂಕಿಗೆ ಅತಿ ಸಮೀಪವಾಗುತ್ತಿವೆ. ಆದ್ದರಿಂದ ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡುವ ಕ್ರಮ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿನಿತ್ಯ ರಾವೂರ ಗ್ರಾಮದ ಚಿತ್ತಾಪುರಕ್ಕೆ ಶಿಕ್ಷಣಕ್ಕಾಗಿ, ಕೃಷಿ ಚಟುವಟಿಕೆಗಳಿಗಾಗಿ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಮತ್ತು ನ್ಯಾಯಾಲಯ, ಕಚೇರಿಗಳಿಗೆ ಹೋಗಿ ಬರಲು ಉತ್ತಮ ರಸ್ತೆಗಳು ಇದ್ದು, ವ್ಯವಹಾರ ನಡೆಸಲು ಅನುಕೂಲಕರವಾಗಿದೆ. ಹೀಗಾಗಿ ಸರ್ಕಾರ ಹೊರಡಿಸಿದ ಅಧಿಸೂಚನೆ ಅವೈಜ್ಞಾನಿಕದಿಂದ ಕೂಡಿದೆ ಎಂದರು.
ತಾಲೂಕಿನ ಗ್ರಾಮಗಳನ್ನು ಶಹಾಬಾದ ಮತ್ತು ಕಾಳಗಿ ಹೊಸ ತಾಲೂಕಿಗೆ ಸೇರ್ಪಡೆ ಮಾಡುವ ವಿಷಯವನ್ನು ಕೇವಲ ಆಯಾ ಊರಿನ ಗಣ್ಯ ವ್ಯಕ್ತಿಗಳಿಗೆ ಮಾತ್ರ ತಿಳಿಸಿದ್ದಾರೆ. ಹೊರತು ಗ್ರಾಮಸ್ಥರ ಅಭಿಪ್ರಾಯ, ಸಲಹೆ ಪಡೆದಿಲ್ಲ. ಗ್ರಾಮ ಪಂಚಾಯತಿಗಳಿಂದ ಡಂಗೂರ ಮೂಲಕ ಸಾರ್ವಜನಿಕರ ಸಭೆ ಕರೆದಿಲ್ಲ. ಹೀಗಾಗಿ ಈ ಸಭೆ ಕರೆದಿರುವುದೇ ಅವೈಜ್ಞಾನಿಕವಾಗಿದೆ ಎಂದರು.
ಮುಖಂಡರಾದ ಅಜೀಜ್ ಸೇಠ್, ಶ್ರೀನಿವಾಸ ಸಗರ, ಗುರುನಾಥ ಗುದಗಲ್, ಸೂರ್ಯಕಾಂತ ಕಟ್ಟಿಮನಿ, ಹಸನ್ ಪಟೇಲ್, ರಾಮಚಂದ್ರ ಪಂಚಾಳ, ಮಹೇಬೂಬ ಖಾನ್ದರಿ, ಶಂಕರ ಕಟಕೆ, ಯುನುಸ್ ಪ್ಯಾರೆ, ಅಮೀರ ಹುಸೇನ್, ಖದೀರ ಪಾಶಾ, ಇಸ್ಮಾಯಿಲ್ ಖಾನ್, ಸೋಮಶೇಖರ ನಡುವಿನಕೇರಿ, ಸುರೇಶ ಪಂಚಾಳ, ಮಂಜುನಾಥ ಕಟಕೆ, ಶಿವಯೋಗಿ ರಾವೂರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ