ದುರಸ್ತಿ ನೆಪದಲ್ಲಿ ಶೌಚಾಲಯಕ್ಕೆ ಬೀಗ: ಮಹಿಳೆಯರ ಸಂಕಟ
Team Udayavani, Jun 29, 2018, 10:23 AM IST
ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ನೇತಾಜಿ ನಗರದಲ್ಲಿರುವ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಕಳೆದ 15 ದಿನಗಳಿಂದ ಬೀಗ ಬಿದ್ದಿದ್ದು, ಬಡಾವಣೆ ಮಹಿಳೆಯರು ಪರದಾಡುವಂತಾಗಿದೆ. ಶೌಚಾಲಯ ದುರಸ್ತಿಯಾಗುವ
ವರೆಗೆ ಮಹಿಳೆಯರು ಊಟ ಮಾಡಲು ಸಹ ಹಿಂದೆ ಮುಂದೆ ನೋಡುವಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.
ಶುಚಿತ್ವವಿಲ್ಲದೆ ಶೌಚಾಲಯ ಗಬ್ಬು ನಾರುತ್ತಿದೆ. ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಹಾಗೂ
ವಾರ್ಡ್ ಸದಸ್ಯ ಭೀಮಶಾ ಜಿರೊಳ್ಳಿ ಸಲ್ಲಿಸಿದ ದೂರಿನ ಮೇರೆಗೆ ಪುರಸಭೆ ಅಧಿಕಾರಿಗಳು ಶೌಚಾಲಯಕ್ಕೆ ಬೀಗ
ಹಾಕಿದ್ದಾರೆ. ಶೌಚ ಕೋಣೆಗಳ ಪೈಪ್ಲೈನ್ ಕಾಮಗಾರಿ ನೆಲಕಚ್ಚಿದೆ. ಸೆಪ್ಟಿಕ್ ಟ್ಯಾಂಕ್ ಸ್ವತ್ಛವಾಗಿಲ್ಲ. ಮಲ ಮೂತ್ರಗಳಿಂದ ದುರ್ಗಂಧದ ತಾಣವಾಗಿರುವ ಶೌಚಾಲಯದೊಳಗಿನ ಆರು ಕೋಣೆಗಳು ದುರಸ್ತಿಗೊಳಿಸಲಾಗಿಲ್ಲ. ವಿವಿಧ ಕಾರಣಕ್ಕೆ ದುರಸ್ತಿ ಕಾರ್ಯ ವಿಳಂಬವಾಗುತ್ತಿದ್ದು, ನಾವು ದಿನವೂ ಹಿಂಸೆ ಅನುಭವಿಸುವಂತಾಗಿದೆ ಎಂದು ಮಹಿಳೆಯರು ದೂರಿದ್ದಾರೆ.
ದುರಸ್ತಿ ಹೆಸರಿನಲ್ಲಿ ಕಳೆದ ಎರಡು ವಾರದಿಂದ ಪುರಸಭೆಯವರು ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ
ಮಲ ಮೂತ್ರಕ್ಕೆ ತೊಂದರೆಯಾಗುತ್ತಿದೆ. ಮಲ್ಲಿಕಾರ್ಜುನ ಗುಡಿ ಏರಿಯಾ, ಪಿಲಕಮ್ಮ ಏರಿಯಾ ಹಾಗೂ ರಾಡಿಪಟ್ಟಿ
ಬಡಾವಣೆಗಳ ಮಹಿಳೆಯರು ನೇತಾಜಿ ನಗರದ ಸಾರ್ವಜನಿಕ ಶೌಚಾಲಯವನ್ನೆ ಅವಲಂಭಿಸಿದ್ದಾರೆ. ನಿರ್ವಹಣೆ
ಕೊರತೆಯಿಂದ ಶೌಚಾಲಯದಿಂದ ಪದೇ ಪದೇ ಗಬ್ಬುನಾತ ಹರಡುತ್ತದೆ.
ಹಗಲು ಹೊತ್ತಿನಲ್ಲಿ ಸಂಕಟ ಅನುಭವಿಸಿ ರಾತ್ರಿ ವೇಳೆ ಬಯಲು ಪ್ರದೇಶಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಯುವತಿಯರು ಬಯಲು ಶೌಚಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸಂಜೆ ಕತ್ತಲಾಗುತ್ತಿದ್ದಂತೆ ಹಾಗೂ ಬೆಳಗಿನಜಾವ ಮುಖ್ಯ ರಸ್ತೆ ಬದಿಯಲ್ಲಿ ಮಲಬಾಧೆ ತೀರಿಸಿಕೊಳ್ಳಬೇಕಾದ ಹೀನಾಯ ಸ್ಥಿತಿ ಎದುರಾಗಿದೆ. ಪುರಸಭೆ ಅಧಿಕಾರಿಗಳು ದುರಸ್ತಿ ಕಾರ್ಯ ಬೇಗ ಪೂರ್ಣಗೊಳಿಸುತ್ತಿಲ್ಲ ಎಂದು ನೇತಾಜಿ ನಗರ ನಿವಾಸಿಗಳಾದ ಶಾರದಾಬಾಯಿ ಹೊನಗುಂಟಿಕರ, ಮುಮ್ತಾಜ್ ಬೇಗಂ, ಸಲ್ಮಾ ಬೇಗಂ, ಗಂಗಮ್ಮ ಚಿತ್ತಾಪುರ, ಮಲ್ಲಮ್ಮ ಅರಿಕೇರಿ, ಶೇಖ ಝೈರಾಬಿ, ಮಹೆಬೂಬೀ, ನರಸಪ್ಪ ಅರಿಕೇರಿ ದೂರಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್