ಮನುವಾದಿಗಳಿಗೆ ಭಾತೃತ್ವ ಬೇಕಿಲ್ಲ: ಪಾಟೀಲ
Team Udayavani, Nov 11, 2018, 11:22 AM IST
ಅಫಜಲಪುರ: ಟಿಪ್ಪು ಸುಲ್ತಾನ್ ಭಾರತದ ಚರಿತ್ರೆಯ ಪುಟದಲ್ಲಿ ಅಜರಾಮರವಾಗಿ ಉಳಿದ ಅರಸ. ಆತನ ತ್ಯಾಗ, ಬಲಿದಾನವನ್ನು ದೇಶ ಯಾವತ್ತೂ ಮರೆಯುವುದಿಲ್ಲ. ಟಿಪ್ಪುವನ್ನು ವಿರೋಧಿ ಸುವ ಮನುವಾದಿಗಳಿಗೆ ಭಾವೈಕ್ಯತೆ, ಭಾತೃತ್ವ ಬೇಕಾಗಿಲ್ಲ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಚರಿತ್ರೆಯು ಮನುವಾದಿಗಳ ಕೈಯಲ್ಲಿ ಸಿಕ್ಕಿದೆ. ಹೀಗಾಗಿ ಸಮಾನತೆ, ಶಾಂತಿ, ಸಹೋದರತೆಗೆ ಎಲ್ಲ ಕಡೆ ಕೊಳ್ಳಿ ಇಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರಿಂದಾಗಿಯೇ ದೇಶದಲ್ಲಿ ಐಕ್ಯತೆ ಹಾಳಾಗಿ ಕೋಮುದ್ವೇಷಗಳು ಹೆಚ್ಚಾಗಿವೆ ಎಂದು ಆಪಾದಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಅನೇಕ ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿ, ಜಯಂತಿ ಆಚರಿಸಿ ಪೇಟ ತೊಟ್ಟು ಖಡ್ಗ ಹಿಡಿದು ಸಂಭ್ರಮಿಸಿದ್ದರು. ಈಗ ವಿರೋಧಿಸುತ್ತಿದ್ದಾರೆ. ಬಿಜೆಪಿಯವರಿಗೆ ಕೇವಲ ಜಾತಿ ಜಗಳ ಹಚ್ಚಿ ರಾಜಕೀಯ ಮಾಡುವುದು ಮಾತ್ರ ಗೊತ್ತಿದೆ ಎಂದು ಟೀಕಿಸಿದರು.
ಮುಖಂಡ ಶಿವಕುಮಾರ ನಾಟೀಕಾರ, ಡಾ| ವಿಜಯಕುಮಾರ ಸಾಲಿಮನಿ ಮಾತನಾಡಿ, ಟಿಪ್ಪು ಧರ್ಮ ವಿರೋಧಿಯಲ್ಲ. ಆತ ಹಿಂದೂ ಧರ್ಮ ರಕ್ಷಕನಾಗಿದ್ದ. ಸಾಕಷ್ಟು ಹಿಂದೂ ದೇವಾಲಯಗಳನ್ನು ಕಟ್ಟಿದ್ದಾನೆ. ಟಿಪ್ಪು ಜಯಂತಿ ವಿರೋಧ ಮಾಡುವರು ಇತಿಹಾಸ ತಿಳಿದು ಮಾತನಾಡಲಿ ಎಂದರು.
ಮುಖಂಡರಾದ ಅರುಣಕುಮಾರ ಪಾಟೀಲ, ಮಕೂಲ ಪಟೇಲ್, ಮಕ್ಸೂದ ಜಾಗಿರದಾರ, ಮತೀನ ಪಟೇಲ್, ಪಪ್ಪು ಪಟೇಲ್, ಮುನೀರ ಪಟೇಲ್, ತಹಶೀಲ್ದಾರ್ ಇಸ್ಮಾಯಿಲ್ ಮುಲ್ಕಿ ಮಾತನಾಡಿದರು. ಮಳೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಾಸಕರಿಗೆ ಟಿಪ್ಪು ಅಭಿಮಾನಿಗಳು ಖಡ್ಗ ನೀಡಿ ಸನ್ಮಾನಿಸಿದರು. ಬಿಇಒ ವಸಂತ ರಾಠೊಡ ನಿರೂಪಿಸಿದರು.
144ನೇ ಸೆಕ್ಷನ್ ಜಾರಿ: ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆನ್ನುವ ಕಾರಣಕ್ಕಾಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಹೊರತು ಪಡಿಸಿ ಉಳಿದ ಎಲ್ಲೆಡೆ 144ನೇ ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…