ಅತಿವೃಷ್ಟಿಗೆ ಬಸವಳಿದ ಯಡ್ರಾಮಿ ಅನ್ನದಾತ
Team Udayavani, Oct 10, 2020, 4:47 PM IST
ಯಡ್ರಾಮಿ: ತಾಲೂಕಿನೆಲ್ಲೆಡೆ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಬೆಳೆಗಳುಸಂಪೂರ್ಣ ಹಾಳಾಗಿದ್ದು, ಕೈಗೆ ಬಂದ ತುತ್ತುಬಾಯಿಗೆ ಬರದಂತಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬಿಟ್ಟುಬಿಡದೆ ಬಿದ್ದ ವ್ಯಾಪಕ ಮಳೆ ರೈತರನ್ನು ನಿಜಕ್ಕೂಕಂಗಾಲಾಗಿಸಿದೆ.
ತಾಲೂಕಿನಲ್ಲಿ ಶೇ.98ರಷ್ಟು ಬಿತ್ತನೆಯಾಗಿ ಭತ್ತ, ಕಬ್ಬು, ತೊಗರಿ, ಹತ್ತಿ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದವು. ಆದರೆ, ವರುಣನ ಆರ್ಭಟಕ್ಕೆಹೂವು, ಕಾಯಿಗಳನ್ನು ಹೊತ್ತುಕೊಂಡು ನಿಂತಿದ್ದ ಹತ್ತಿ ಬೆಳೆ ಕೆಂಪು ರೋಗಕ್ಕೆ ತುತ್ತಾಗಿ, ಹೂವು ಉದುರಿ ಬಿದ್ದವೆ. ಮೈ ಬಿಚ್ಚಿ ಹತ್ತಿ ಕೊಡುವ ಹಂತದಲ್ಲಿದ್ದ ಕಾಯಿಗಳು ಕೊಳೆತು ಹೋಗಿವೆ.ಹೆಚ್ಚಿನ ಪ್ರಮಾಣದ ಮಳೆಯಿಂದ ಭೂಮಿಯಲ್ಲಿನೀರು ನಿಂತು ತೊಗರಿ ಬೆಳೆ ಒಣಗುತ್ತಿವೆ. ಪ್ರತಿಎಕರೆಗೆ ಹತ್ತಿ 15-18 ಕ್ವಿಂಟಲ್ ನಿರೀಕ್ಷೆಯಿತ್ತು.ಆದರೆ ಸದ್ಯ 6-8 ಕ್ವಿಂಟಲ್ ಬರುವುದೇ ಕಷ್ಟ. ಪ್ರತಿ ಎಕರೆಗೆ ತೊಗರಿ 6-8 ಕ್ವಿಂಟಲ್ ಬರುವುದೆಂದರೆ,ಪ್ರಸ್ತುತ ಪರಿಸ್ಥಿತಿಯಲ್ಲಿ 2-3 ಕ್ವಿಂಟಲ್ ಬರುವುದೇಅನುಮಾನವಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೊನ್ನೆಯಷ್ಟೆ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿರುವ ಎರಡು ತಾಲೂಕುಗಳಲ್ಲಿ ಯಡ್ರಾಮಿಯುಒಂದಾಗಿದೆ. ಬರದಿಂದ ನರಳಾಡುತ್ತಿರುವ ತಾಲೂಕಿನ ರೈತರ ಈ ಸಂಕಷ್ಟಕ್ಕೆ ತುರ್ತುಪರಿಹಾರದ ಅಗತ್ಯವಂತೂ ಇದೆ. ಈ ನಿಟ್ಟಿನಲ್ಲಿಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಿಸಿ,ಪ್ರತಿ ಕ್ವಿಂಟಲ್ ಹತ್ತಿಗೆ 8 ಸಾವಿರ ರೂ., ಕ್ವಿಂಟಲ್ತೊಗರಿಗೆ 10 ಸಾವಿರ ರೂ. ನಿಗದಿ ಮಾಡಿಖರೀದಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಮಂಡಳಿಯಾಗಲಿ, ರಾಜ್ಯ ಸರ್ಕಾರವಾಗಲಿಕೂಡಲೇ ಮುಂದಾಗಬೇಕಾಗಿದೆ. ಹೀಗಾದರೆ ಈಭಾಗದ ರೈತರು ಕೋವಿಡ್ ಹಾಗೂ ಅತಿವೃಷ್ಟಿಯಸಂಕಷ್ಟದ ಸ್ಥಿತಿ ಎದುರಿಸಿ, ತಕ್ಕಮಟ್ಟಿನ ಸಮಾಧಾನ ಹೊಂದಬಹುದು
ಈ ವರ್ಷ ಮೊದಲೇ ಕೋವಿಡ್ ಬಂದು ಹೈರಾಣು ಮಾಡಿದೆ. ಹೋದ ತಿಂಗಳು ಹತ್ತಿದ ಮಳೆಯಿಂದ ಹತ್ತಿ, ತೊಗರಿ ಹಾಳಾಗಿವೆ.ಸಾಕಷ್ಟು ಸರ್ಕಾರಿ ಗೊಬ್ಬರ, ಔಷಧಕ್ಕೆ ಖರ್ಚುಮಾಡಿದ್ದು ವ್ಯರ್ಥವಾಯಿತು. ನಮ್ಮ ಜೀವನವೇ ಇಷ್ಟೇ ಎನ್ನುವಂತಾಗಿದೆ. ನಮ್ಮ ಗೋಳು ಕೇಳುವರ್ಯಾರಿಲ್ಲ. –ರಾಜೇಸಾಬ ಮನಿಯಾರ, ಮಳ್ಳಿ ರೈತ
ಬೆಳೆ ನಷ್ಟದ ಬಗ್ಗೆ ಶೀಘ್ರವಾಗಿ ಸರ್ಕಾರ ಪರಿಹಾರ ನೀಡಿ ರೈತರ ಜೀವ ಕಾಯಬೇಕಾಗಿದೆ. ಬರೀ ಬೆಳೆಗಳ ಸಮೀಕ್ಷೆ, ಪರಿಶೀಲನೆಯ ನೆಪದಲ್ಲಿ ಹೊತ್ತು ಕಳೆಯುವ ಬದಲು ರೈತರ ಸಂಕಷ್ಟಕ್ಕೆ ಕೂಡಲೇ ಧಾವಿಸಬೇಕು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತಪರ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ಇದೆ.-ಕೇಶುರಾಯಗೌಡ ಮಾಲೀಪಾಟೀಲ, ಪ್ರಗತಿಪರ ರೈತ
-ಸಂತೋಷ ಬಿ. ನವಲಗುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…