ನಾಡಿಗೆ ಸಿದ್ಧಗಂಗಾ ಶ್ರೀ ಸಾಧನೆ ಅಪಾರ: ಸ್ವಾಮೀಜಿ
ಅವರ ಸಮಾಜ ಸೇವೆ ನಮಗೆ ಪ್ರೇರಣೆ, ಮಾರ್ಗದರ್ಶನವಾಗಿದೆ ಎಂದರು.
Team Udayavani, Apr 2, 2021, 5:49 PM IST
ಆಳಂದ: ಲಿಂ| ಡಾ| ಶಿವಕುಮಾರ ಮಹಾ ಸ್ವಾಮೀಜಿ 114ನೇ ಜನ್ಮದಿನದ ಅಂಗವಾಗಿ ಗುರುವಾರ ಯುವ ಮುಖಂಡ ಆನಂದ ದೇಶಮುಖ ನಿರಗುಡಿ, ಶರಣಗೌಡ ಪಾಟೀಲ ಶಖಾಪುರ ನೇತೃತ್ವದಲ್ಲಿ ಶ್ರೀಗಳ ಅಭಿಮಾನಿಗಳಿಗೆ 114 ಭಾವಚಿತ್ರಗಳನ್ನು ನೀಡುವ ಮೂಲಕ ಜನ್ಮದಿನ ಆಚರಿಸಿ, ಪ್ರಸಾದ ಉಣಬಡಿಸಲಾಯಿತು.
ಸಂಸ್ಥಾನ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ನಾಡಿನ ಲಕ್ಷಾಂತರ ಬಡ, ದೀನ ದಲಿತ, ಶೋಷಿತ, ಅನಾಥ ಮಕ್ಕಳಿಗೆ ಅನ್ನ ಮತ್ತು ಜ್ಞಾನದಾಸೋಹ, ಸಂಸ್ಕಾರ, ಮಾನವೀಯತೆ ಬೋಧಿ ಸಿ ಅವರ ಜೀವನ ಕಟ್ಟಿಕೊಟ್ಟ ನಡೆದಾಡುವ ಮಹಾನ ಸಂತರಾಗಿದ್ದ ಸಿದ್ಧಗಂಗಾ ಮಠದ ಲಿಂ| ಡಾ| ಶಿವಕುಮಾರ ಮಹಾಸ್ವಾಮಿಗಳ ಸಾಧನೆ, ಕೊಡುಗೆ ನಾಡಿಗೆ ಅಪಾರವಾಗಿದೆ ಎಂದರು.
ಮುಖಂಡ ಆನಂದ ದೇಶಮುಖ ಮಾತನಾಡಿ, ಡಾ| ಶಿವುಕುಮಾರ ಶ್ರೀಗಳು ಜಾತಿ, ಮತ, ಪಂಥ ಮೀರಿ ನಾಡಿಗೆ ಸಾಮರಸ್ಯದ ಪಾಠ ಕಲಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸ್ಮರಣಾರ್ಥವಾಗಿ ಭಕ್ತರಿಗೆ ಪ್ರಸಾದ ಸೇವೆ ಮತ್ತು ಅವರ 114ನೇ ಜನ್ಮದಿನ ನಿಮಿತ್ತ 114 ಭಾವಚಿತ್ರಗಳನ್ನು ನೀಡುವ ಸೇವೆ ಕೈಗೊಂಡಿದ್ದು, ಅವರ ಸಮಾಜ ಸೇವೆ ನಮಗೆ ಪ್ರೇರಣೆ, ಮಾರ್ಗದರ್ಶನವಾಗಿದೆ ಎಂದರು.
ಗುರುಶರಣ ಪಾಟೀಲ ಕೊರಳ್ಳಿ, ಡಾ| ನಿಖೀಲ ಶಹಾ, ಲಿಂಗರಾಜ ಪಾಟೀಲ, ಕಿರಣ ಪಾಟೀಲ, ಪಂಚಮಸಾಲಿ ಸಮಾಜದ ಜಿಲ್ಲಾ ಮುಖಂಡ ಶರಣಗೌಡ ಪಾಟೀಲ ದೇವಂತಗಿ, ಮಂಜುನಾಥ ಗುಡ್ಡೊಡಗಿ, ಅಜಯ ಮಾನೆ, ಅಣ್ಣಾರಾವ್ ಪಾಟೀಲ ಚಿಂಚೋಳಿ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ