ಹೆಚ್ಚಿದ ಧಗೆ.. ಬಾಯಾರಿದ ಜನ-ಜಾನುವಾರು


Team Udayavani, Mar 3, 2019, 6:27 AM IST

gul-2.jpg

ವಾಡಿ: ಮತ್ತೂಮ್ಮೆ ಭೀಕರ ಬರಗಾಲಕ್ಕೆ ತುತ್ತಾಗಿರುವ ಬಿಸಿಲು ನಾಡು ಕಲಬುರಗಿಯ ಜೀವನದಿಗಳಾದ ಭೀಮೆ ಮತ್ತು ಕಾಗಿಣಾ ಜಲವಿಲ್ಲದೆ ಭಣಗುಡುತ್ತಿದ್ದು, ಚಿತ್ತಾಪುರ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ವಾಡಿ ನಗರದಲ್ಲಿ ಅಕ್ಷರಶಃ ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದಿದೆ.
ಪುರಸಭೆ ಆಧೀನದ ಹಲವು ಬಡಾವಣೆಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ಎಲ್ಲೆಡೆ ಖಾಲಿ ಕೊಡಗಳ ಪ್ರದರ್ಶನವೇ ಕಾಣುತ್ತಿದೆ. ನಳಗಳು ಮತ್ತು ಬೋರ್‌ವೆಲ್‌ಗ‌ಳ ಸುತ್ತ ನೂರಾರು ಕೊಡಗಳು ನೀರಿಗಾಗಿ ಧರಣಿ ಕುಳಿತಿವೆ. ಸೈಕಲ್‌ ಮತ್ತು ಬೈಕ್‌ಗಳ ಮೇಲೆ ಯುವಕ-ಯುವತಿಯರು
ಕೊಡಗಳನ್ನು ಹೊತ್ತು ದೂರದ ಪ್ರದೇಶಗಳಿಂದ ನೀರು ತರುತ್ತಿರುವ ದೃಶ್ಯ ಸಾಮಾನ್ಯವಾಗಿವೆ.

ಇಡೀ ವಿಶ್ವಕ್ಕೆ ಸಿಮೆಂಟ್‌ ಸರಬರಾಜು ಮಾಡುತ್ತಿರುವ ಹೆಸರಾಂತ ಎಸಿಸಿ ಕಾರ್ಖಾನೆ ಹೊಂದಿರುವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಅತಿದೊಡ್ಡ ನಗರ ವಾಡಿಯಲ್ಲಿ ಜನರು ಜಲದಾಹಕ್ಕೆ ತತ್ತರಿಸಿದ್ದಾರೆ.
ಸಾರ್ವಜನಿಕ ಬಾವಿಗಳಲ್ಲಿ ಹೂಳು ತುಂಬಿ ನೀರು ಬಳಕೆಗೆ ಬಾರದಂತಾಗಿದೆ. ಹಲವು ಬೋರ್‌ವೆಲ್‌ಗ‌ಳು ದುರಸ್ತಿ ಕಾಣದೆ ಮುರಿದು ಬಿದ್ದಿವೆ. ನಿರ್ವಹಣೆ ಕೊರತೆಯಿಂದ ಕೆಲ ಬೋರ್‌ವೆಲ್‌ ಗಳು ಕಸದ ತೊಟ್ಟಿ ಸೇರಿವೆ. ನೇತಾಜಿ ನಗರ, ಮಲ್ಲಿಕಾರ್ಜುನ ದೇವಸ್ಥಾನ ಏರಿಯಾ, ಬಿಯ್ನಾಬಾನಿ ಬಡಾವಣೆ, ಇಂದಿರಾ ಕಾಲೋನಿ, ಭೀಮನಗರ, ಚೌಡೇಶ್ವರ ಕಾಲೋನಿ, ಹನುಮಾನ ನಗರ, ಪಿಲಕಮ್ಮಾ ಬಡಾವಣೆ, ರಾಮ ಮಂದಿರ ಬಡಾವಣೆ ಹೀಗೆ ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. 

ನದಿಯಲ್ಲಿ ನೀರು ಖಾಲಿಯಾಗಿ ಎರಡು ತಿಂಗಳಾಯಿತು. ಐದಾರು ದಿನಕ್ಕೊಮ್ಮೆ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಶುದ್ಧ ನೀರಂತೂ ಕನಸಿನ ಮಾತಾಗಿದೆ. ಜನರು ಪರದಾಡುವ ಮುಂಚೆ ಸಮಸ್ಯೆ ನಿವಾರಿಸಬೇಕಾದ ಪುರಸಭೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಗಾಢ ನಿದ್ರೆಗೆ ಜಾರಿದ್ದಾರೆ. ಕೋಟ್ಯಂತರ ರೂ. ಅನುದಾನ ಇದ್ದರೂ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಆಡಳಿತಕ್ಕೆ
ಸಾಧ್ಯವಾಗುತ್ತಿಲ್ಲ. ಕೂಡಲೇ ಜಲಾಶಯಗಳಿಂದ ನದಿಗೆ ನೀರು ಹರಿಸಬೇಕು. ನದಿಗೆ ನೀರು ಬರುವ ವರೆಗೂ ಟ್ಯಾಂಕರ್‌ಗಳ ಮೂಲಕ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ತಕ್ಷಣವೇ ಮುಂದಾಗಬೇಕು. ನಿರ್ಲಕ್ಷé ತೋರಿದರೆ ಖಾಲಿ ಕೊಡಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುತ್ತೇವೆ.
 ಮಲ್ಲಿನಾಥ ಹುಂಡೇಕಲ್‌, ಸಮಾಜವಾದಿ ಹೋರಾಟಗಾರ 

ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆಂದು ಪುರಸಭೆಯಿಂದ 35 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಜಲಮೂಲಗಳ ರಕ್ಷಣೆಗೆ ಮುಂದಾಗಬೇಕಾದ ಪುರಸಭೆ ಆಡಳಿತ ಲೋಕಸಭೆ ಚುನಾವಣೆ ನಿಮಿತ್ತ ಸಭೆ, ಸಮಾರಂಭಗಳಲ್ಲಿ ಮುಳುಗಿದೆ. ಎಸಿಸಿ ಸಿಮೆಂಟ್‌ ಕಂಪನಿ ಜಾಕ್‌ ವೆಲ್‌ನಿಂದ ಪುರಸಭೆಗೆ ಸೇರಿದ ನೀರು ಶುದ್ಧೀಕರಣ ಘಟಕಕ್ಕೆ ಶಾಶ್ವತ ಪೈಪುಗಳ ಸಂಪರ್ಕ ಜೋಡಿಸಲು ಚಿಂತನೆ ನಡೆಸುತ್ತಿದ್ದ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಈ ತೀರ್ಮಾನ ಕೈ ಬಿಟ್ಟಿದ್ದೇ ಜನರ ಪರದಾಟಕ್ಕೆ ಕಾರಣವಾಗಿದೆ. ದಿನೆದಿನೇ ಗಂಭೀರತೆ ಪಡೆದುಕೊಳ್ಳುತ್ತಿರುವ ನೀರಿನ ಸಮಸ್ಯೆ ಜನರ ಆಕ್ರೋಶಕ್ಕೂ ಕಾರಣವಾಗಿದೆ.

„ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.