ಕಲಬುರ್ಗಿ : ಆತ್ಮಹತ್ಯೆಗೆ ಯತ್ನಿಸಿ ಕಾಲು ಕಳೆದುಕೊಂಡ ಯುವಕ
Team Udayavani, Feb 23, 2020, 5:37 PM IST
ಕಲಬುರಗಿ: ರೈಲಿನಡಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಜಿಲ್ಲೆ ಚಿತ್ತಾಪೂರ ರೈಲ್ವೆ ಸ್ಟೇಷನ್ ನಲ್ಲಿ
ರವಿವಾರ ಸಂಭವಿಸಿದೆ.
ಯುವಕನೋರ್ವ ರವಿವಾರ ಬೆಳಿಗ್ಗೆ ಚಲಿಸುತ್ತಿದ್ದ ರೈಲಿನಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭ ರೈಲಿನ ಚಕ್ರ ಕಾಲಿನ ಮೇಲೆ ಹರಿದು ಕಾಲು ತುಂಡಾಗಿದೆ. ಈತನ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಯುವಕ ಯಾರು, ಎಲ್ಲಿಯವನು ಎನ್ನುವುದರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.