ಸಂಚಾರಿ ನಿಯಮ ಪಾಲಿಸಿ
ವಾಹನ ಚಲಾವಣೆ ಸಂದರ್ಭ ಮೊಬೈಲ್ ಬಳಕೆ ಇಲ್ಲ •ಜೀವವಿಮೆ ಪಾಲಿಸಿ ಕಡ್ಡಾಯ
Team Udayavani, May 30, 2019, 10:20 AM IST
ಕೆರೂರ: ಪಟ್ಟಣದಲ್ಲಿ ನಡೆದ ಸರಕು ವಾಹನ ಚಾಲಕರ ಸಭೆಯಲ್ಲಿ ಪಿಎಸ್ಐ ಗುರುಶಾಂತ ದಾಸ್ಯಾಳ ಮಾತನಾಡಿದರು.
ಕೆರೂರ: ಸರಕು ಸಾಗಾಣಿಕೆಯ ವಾಹನಗಳಲ್ಲಿ ಪ್ರಯಾಣಿಕರನ್ನು ಕೊಂಡೊ ಯ್ಯುವಂತಿಲ್ಲ. ಪ್ರಯಾಣಿಕ ವಾಹನಗಳಲ್ಲಿ ಸಾರಿಗೆ ಇಲಾಖೆ ಮಿತಿಯ ಅನ್ವಯ ನಿಗದಿಪಡಿಸಿದ ಸಂಖ್ಯೆಯ ಪ್ರಯಾಣಿಕರ ಪ್ರಯಾಣಕ್ಕೆ ಒತ್ತು ನೀಡಬೇಕು. ನಿಯಮ ಮೀರಿ ಹೆಚ್ಚಿನ ಜನರನ್ನು ಸಾಗಿಸಿದರೆ ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಪಿಎಸ್ಐ ಗುರುಶಾಂತ ದಾಸ್ಯಾಳ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸರಕು ಸಾಗಾಣಿಕೆ ವಾಹನ ಹಾಗೂ ಚಿಕ್ಕ, ಪುಟ್ಟ ವಾಹನಗಳ ಚಾಲಕರು ಮತ್ತು ಮಾಲೀಕರ ಜೊತೆಗೆ ನಡೆದ ಸಭೆಯಲ್ಲಿ ಅವರು ಸಂಚಾರ ನಿಯಮ ಕಡ್ಡಾಯ ಪಾಲನೆ ಮತ್ತು ಸಾರಿಗೆ ಇಲಾಖೆ ನಿಗದಿ ಪಡಿಸಿದ ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ತಿಳಿವಳಿಕೆ ಹೇಳಿದರು.
ಸರಕು ತುಂಬುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ವಾಹನ ಚಲಾವಣೆ ಮಾಡುವಾಗ ಕಡ್ಡಾಯವಾಗಿ ಮೊಬೈಲ್ ಬಳಸುವಂತಿಲ್ಲ. ಪ್ರಯಾಣಿಕ ವಾಹನದಾರರು ತಮಗೆ ಸಾರಿಗೆ ಇಲಾಖೆ ನೀಡಿರುವ ಪರವಾನಗಿಯಲ್ಲಿ ಎಷ್ಟು ಪ್ರಯಾಣಿಕರನ್ನು ನಿಗದಿ ಮಾಡಲಾಗಿದೆಯೊ ಅಷ್ಟೇ ಜನರ ಪ್ರಯಾಣಿಕರ ನಿಗದಿಗೆ ಒತ್ತು ನೀಡಬೇಕು. ಹೆಚ್ಚಿಗೆ ಜನರನ್ನು ಸಾಗಿಸಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ಲೈಸನ್ಸ್, ಸಮವಸ್ತ್ರ, ಜೀವ ವಿಮೆ ಪಾಲಸಿ ಹೊಂದಿರಬೇಕು. ತಪ್ಪದೇ ಇಲಾಖೆ ನಿಗದಿ ಪಡಿಸಿದ ರಸ್ತೆ ನಿಯಮ ಪಾಲಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಪಟ್ಟಣ ಪಂಚಾಯತ ಸದಸ್ಯ ವಿಠಲ ಗೌಡರ, ವಾಹನ ಚಾಲಕರಾದ ಮೌಲಾಸಾಬ್, ಶಿವಾನಂದ, ಮಹಮ್ಮದ, ರಾಮಣ್ಣಾ, ಲಾಲಸಾಬ್,ವಿಠಲ, ಮಂಜು, ಹುಸೇನಸಾನ, ಈಶ್ವರ, ರವಿ, ಆನಂದ, ಅಬ್ದುಲ್ ರೆಹಮಾನ, ಪೊಲೀಸ್ ಸಿಬ್ಬಂದಿ ಎಚ್.ಎಂ. ಹೊಸಮನಿ, ಎನ್.ಎಸ್. ಸಿಮಾನಿ, ಎಂ.ಆರ್. ಹೊನ್ನಾಯಕ, ಎಸ್.ಕೆ. ಪೀರಜಾದೆ, ಡಿ.ಜೆ. ಶಿವಪುರ, ಜೆ.ಆರ್. ಹೊಕ್ರಾಣಿ, ಎನ್.ಬಿ. ರೇಷ್ಮಿ, ಮಲ್ಲು ಕೂಡಗಿ, ವೈ.ಪಿ. ಪೂಜಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ