Madikeri; ಕಸ ಸುರಿದ ವ್ಯಕ್ತಿಗೆ 10 ಸಾ. ರೂ. ದಂಡ!
Team Udayavani, Feb 19, 2024, 12:28 AM IST
ಮಡಿಕೇರಿ: ರಸ್ತೆ ಬದಿಯ ತೋಡಿಗೆ ತ್ಯಾಜ್ಯ ಸುರಿದ ಬೇಕರಿ ಮಾಲಕನಿಗೆ ಗೋಣಿಕೊಪ್ಪಲು ಅರುವತ್ತೂಕ್ಲು ಗ್ರಾ. ಪಂ. 10 ಸಾವಿರ ರೂ. ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.
ಕುಂದ ರಸ್ತೆಯ ಹಳ್ಳಿಗಟ್ಟು ತೋಡಿನ ಸೇತುವೆ ಬಳಿ ಮೋಟಾರ್ ಬೈಕಿನಲ್ಲಿ 3 ಚೀಲದಲ್ಲಿ ತ್ಯಾಜ್ಯವನ್ನು ತುಂಬಿ ತಂದಿದ್ದ ವ್ಯಕ್ತಿ ಹಳ್ಳಿಗಟ್ಟುವಿನ ಗದ್ದೆ ಬಳಿಯ ತೋಡಿನ ಸೇತುವೆ ಕೆಳಗೆ ರಾತ್ರಿ ಸುರಿಯುತ್ತಿದ್ದರು. ಈ ಸಂದರ್ಭ ಸ್ಥಳೀಯರು ಆತನನ್ನು ಹಿಡಿದು ಗ್ರಾಮ ಪಂಚಾಯತ್ಗೆ ಒಪ್ಪಿಸಿದರು.
ಈ ವಿಷಯ ಅರಿತು ಪಂಚಾಯತ್ ಉಪಾಧ್ಯಕ್ಷ ಮನೆಯಪಂಡ ಪ್ರಾಣ್ ಬೋಪ್ಪಣ್ಣ, ಸದಸ್ಯರಾದ ತಿತಮಾಡ ಸುಗುಣ ಸೋಮಯ್ಯ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಈ ಕುರಿತು ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದರು.
ಸ್ಥಳಕ್ಕೆ ಬಂದ ಪೊಲೀಸರು ಬೇಕರಿ ಮಾಲಕನಿಗೆ ಎಚ್ಚರಿಕೆ ನೀಡಿದ್ದಲ್ಲದೇ ಸುರಿದ ವ್ಯಕ್ತಿಯಿಂದಲೇ
ತ್ಯಾಜ್ಯ ತೆರವುಗೊಳಿಸಿದರು. ನೀರಿನ ಮೂಲ ಮಾಲಿನ್ಯಕ್ಕೆ ಕಾರಣನಾದ ಆರೋಪದಡಿ ಬೇಕ ರಿಯ ಮಾಲಕರಿಗೆ ಅರುವತ್ತೂಕ್ಲು ಗ್ರಾ. ಪಂ. 10 ಸಾವಿರ ದಂಡ ವಿಧಿಸಿತು. ರಸ್ತೆ ಬದಿ ಹಾಗೂ ಹೊಳೆ ದಡಗಳಲ್ಲಿ ಯಾರೇ ತ್ಯಾಜ್ಯ ಸುರಿದರೂ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಎಚ್ಚರಿಕೆ ನೀಡಿದೆ.