ಲೀಟರ್ ಹಾಲಿಗೆ 40 ರೂ. ಕೊಡಿ
Team Udayavani, Aug 30, 2019, 12:30 PM IST
ಬಂಗಾರಪೇಟೆ ತಾಲೂಕಿನ ಐತಾಂಡಹಳ್ಳಿ ಡೇರಿಯಲ್ಲಿ ನೂತನ ಬಿಎಂಸಿ ಕೇಂದ್ರವನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ, ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಉದ್ಘಾಟಿಸಿದರು.
ಬಂಗಾರಪೇಟೆ: ಬರದಿಂದ ತತ್ತರಿಸಿರುವ ರೈತರ ಹಿತಕಾಯಲು ಪ್ರತಿ ಲೀಟರ್ ಹಾಲಿಗೆ 40 ರೂ. ನೀಡಬೇಕು. ಈ ಬಗ್ಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಐತಾಂಡಹಳ್ಳಿ ಗ್ರಾಮದಲ್ಲಿ ನೂತನ ಬಿಎಂಎಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದ್ಯಕ್ಕೆ ಹೈನೋದ್ಯಮವೇ ರೈತರಿಗೆ ಕಾಮಧೇನು ಆಗಿದೆ. 15 ವರ್ಷಗಳಿಂದ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಪ್ರಸ್ತುತ ನೀಡುತ್ತಿರುವ ಹಾಲಿನ ಬೆಲೆ ಸಾಕಾಗುವುದಿಲ್ಲ ಎಂದರು.
ಅವಳಿ ಜಿಲ್ಲೆಗಳಲ್ಲಿ ಬರಗಾಲದಿಂದ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ. ಕುಡಿಯುವ ನೀರಿಗೂ ತಾತ್ವರ ಉಂಟಾಗಿದೆ. ಕೃಷಿಯನ್ನೇ ಪ್ರಧಾನವಾಗಿ ನಂಬಿದ್ದ ರೈತರು ಈಗ ಹೈನೋದ್ಯಮದತ್ತ ವಾಲಿದ್ದು, ರೈತ ಕುಟುಂಬಗಳಿಗೆ ಸಹಕಾರಿಯಾಗಲು ಹಾಲಿನ ಬೆಲೆ 40 ರೂ.ಗೆ ಏರಿಕೆ ಮಾಡುವುದು ಅಗತ್ಯವಾಗಿದೆ ಎಂದರು.
ಫೀಡ್ಸ್ ಬೆಲೆ ಕಡಿಮೆ ಮಾಡಿ: ಪ್ರತಿ ಲೀಟರ್ ಹಾಲಿಗೆ 6 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಎರಡೂ ಜಿಲ್ಲೆಗಳ ರೈತರಿಗೆ ಇದು ವರದಾನವಾಗಿದೆ. ಈಗಿನ ಸರ್ಕಾರವೂ ಪ್ರೋತ್ಸಾಧನ ವನ್ನು ಮುಂದುವರಿಸಬೇಕಾಗಿದೆ. ಹಾಲಿ ಬೆಲೆಯನ್ನು ಹೆಚ್ಚಿಸಿ, ಕೋಚಿಮುಲ್ನಿಂದ ನೀಡುವ ಫೀಡ್ಸ್ ಆಹಾರ ಬೆಲೆ ಕಡಿಮೆ ಮಾಡಬೇಕೆಂದು ಮನವಿ ಮಾಡಿದರು.
42 ಬಿಎಂಸಿ ಕೇಂದ್ರ ಉದ್ಘಾಟನೆ: ಹಾಲು ಉತ್ಪಾದನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ಬಂಗಾರಪೇಟೆ ತಾಲೂಕು ಮಾದರಿ ಮಾಡಲು ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಶ್ರಮಿಸುತ್ತಿದ್ದಾರೆ. ಆರು ತಿಂಗಳಲ್ಲಿ 11 ಕೋಟಿ ರೂ. ವೆಚ್ಚದಲ್ಲಿ 42 ನೂತನ ಬಿಎಂಸಿ ಕೇಂದ್ರಗಳನ್ನು ಉದ್ಘಾಟನೆ ಮಾಡಲಾಗಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಎರಡು ಮೂರು ತಿಂಗಳಲ್ಲಿ ಕೆ.ಸಿ. ವ್ಯಾಲಿ ನೀರು: ಜಿಲ್ಲೆಯಲ್ಲಿ ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ಕೆ.ಸಿ. ವ್ಯಾಲಿ ನೀರು ತಾಲೂಕಿಗೆ ಹರಿಯಲಿದೆ. ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಈ ಭಾಗದ ಕೆರೆಗಳ ಡಿಪಿಆರ್ ಮಾಡಿಸಲಾಗುತ್ತಿದೆ. ತಾಲೂಕಿನ ಐತಾಂಡಹಳ್ಳಿ ಕೆರೆಗೂ ಕೆ.ಸಿ. ವ್ಯಾಲಿ ನೀರು ತುಂಬಿಸಲು ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಗುಣಮಟ್ಟದ ಹಾಲು ಪೂರೈಸಿ: ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಮಾತನಾಡಿ, ಕೋಚಿಮುಲ್ನಿಂದ ಪ್ರಸಿದ್ಧ ತಿರುಪತಿ ದೇಗುಲಕ್ಕೆ 40 ಸಾವಿರ ಟನ್ ನಂದಿನ ತುಪ್ಪವನ್ನು ಲಡ್ಡು ತಯಾರಿಸಲು ನೀಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಾಲನ್ನು ತಿರುಪತಿ ವೆಂಕಟರಮಣಸ್ವಾಮಿ ನೈವೇದ್ಯಕ್ಕೆ ಬಳಸಲಾಗುತ್ತಿದೆ. ಹೀಗಾಗಿ ರೈತರು ಗುಣಮಟ್ಟದ ಹಾಲು ಡೇರಿಗೆ ಹಾಕಬೇಕು. ತಾಲೂಕಿನಲ್ಲಿ ಎಲ್ಲಾ ಕಡೆ ಬಿಎಂಸಿ ಕೇಂದ್ರ ತೆರೆದು ಕ್ಯಾನ್ಲೆಸ್ ಹಾಲು ಸಂಗ್ರಹ ಮಾಡಲಾಗುವುದು ಎಂದರು.
ಐತಾಂಡಹಳ್ಳಿ ಹಾಲು ಡೇರಿ ಅಧ್ಯಕ್ಷ ಬಿ.ಎಂ.ಅಮರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೋಚಿಮುಲ್ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಕೆ.ವೆಂಕಟರಮಣ, ಬಿಎಂಸಿ ಘಟಕದ ಸಹಾಯಕ ವ್ಯವಸ್ಥಾಪಕ ಪಿ.ಮೋಹನ್ಬಾಬು, ವಿಸ್ತರಣಾಧಿಕಾರಿ ನಟರಾಜ್, ಬಿಎಂಸಿ ಹಿರಿಯ ತಾಂತ್ರಿಕ ಅಧಿಕಾರಿ ತಿಪ್ಪಾರೆಡ್ಡಿ, ಕೆ.ಜಿ.ರವೀಂದ್ರನಾಥ್, ಮಂಡಲ್ ಮಾಜಿ ಸದಸ್ಯ ಎಂ.ಕೃಷ್ಣಪ್ಪ, ಗ್ರಾಪಂ ಸದಸ್ಯ ಚಲಪತಿ, ಡೇರಿ ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಡೇರಿ ನಿರ್ದೇಶಕರಾದ ಚಲಪತಿ, ತಿಪ್ಪಣ್ಣ, ಮುನಿಯಮ್ಮ, ನಾರಾಯಣಪ್ಪ, ಮಾವಹಳ್ಳಿ ಚೌಡೇಗೌಡ, ಪಿಡಿಒ ರಾಮಮೂರ್ತಿ, ಡೇರಿ ಕಾರ್ಯದರ್ಶಿ ಕೆ.ಕೆ.ಶಿವಕುಮಾರ್, ವಿ.ಪ್ರೇಮಕುಮಾರ್, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ