ಕೋಲಾರ: ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಒತ್ತು


Team Udayavani, Jul 26, 2021, 7:09 PM IST

Government Hospital

ಕೋಲಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಎರಡು ವರ್ಷಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ಕೊರೊನಾಮೊದಲ ಮತ್ತು ಎರಡನೇ ಅಲೆ ಎದುರಿಸಲು ಜಿಲ್ಲಾಮತ್ತು ತಾಲೂಕು ಸರ್ಕಾರಿ ಆಸ್ಪತ್ರೆಗಳನ್ನು ಬಲವರ್ಧನೆಮಾಡಲಾಗಿದೆ. ಆಮ್ಲಜನಕ ಬೆಡ್‌ಗಳ ಸಂಖ್ಯೆಯನ್ನುಹೆಚ್ಚಿಸಿ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ.

ಕೋಲಾರ ಜಿಲ್ಲಾ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿಕೊರೊನಾ ಎರಡನೇ ಅಲೆ ಶುರುವಾಗುವ ಮುನ್ನಕೇವಲ ಹತ್ತಕ್ಕಿಂತಲೂ ಕಡಿಮೆ ಸಂಖ್ಯೆಯ ಆಮ್ಲಜನಕಬೆಡ್‌, ಐಸಿಯು ಬೆಡ್‌ಗಳಿದ್ದವು. ಆದರೆ, ಕೊರೊನಾಎರಡನೇ ಅಲೆ ಆರಂಭವಾದ ಕೆಲವೇ ದಿನಗಳಲ್ಲಿಜಿಲ್ಲಾಸ್ಪತ್ರೆಯ ಆಮ್ಲಜನಕ ಬೆಡ್‌ಗಳ ಸಂಖ್ಯೆಯನ್ನು200 ಕ್ಕೇರಿಸಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ ಐಸಿಯುಬೆಡ್‌ಗಳ ಸಂಖ್ಯೆ 50ಕ್ಕೇರಿಸಲಾಯಿತು. ಪ್ರತಿ ತಾಲೂಕುಸರ್ಕಾರಿ ಆಸ್ಪತ್ರೆಯಲ್ಲಿಯೂ ಕನಿಷ್ಠ 50 ಆಮ್ಲಜನಕಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.

ಆಮ್ಲಜನಕ ಘಟಕ ಸ್ಥಾಪನೆ: ಆಮ್ಲಜನಕವನ್ನು ಆಸ್ಪತ್ರೆಬಳಕೆಗಾಗಿ ದೂರದ ಮಾಲೂರು ಮತ್ತು ದೊಡ್ಡಬಳ್ಳಾಪುರ ಘಟಕಗಳಿಂದ ಖರೀದಿಸಿ ತರಬೇಕಾದ ಪರಿಸ್ಥಿತಿಇತ್ತು. ಆದರೆ, ಈಗ ಕೋಲಾರ ಜಿಲ್ಲಾಸ್ಪತ್ರೆಯಆವರಣದಲ್ಲಿಯೇ 5 ಸಾವಿರ ಲೀಟರ್‌ ಸಾಮರ್ಥ್ಯದಆಮ್ಲಜನಕ ಉತ್ಪಾದಕ ಘಟಕವನ್ನು ಸ್ಥಾಪಿಸಲಾಗಿದೆ.ಜೊತೆಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದಕೊಡುಗೆಯಾಗಿ ಸಿಕ್ಕ ನೂರಕ್ಕೂ ಹೆಚ್ಚು ಆಮ್ಲಜನಕಸಾಂದ್ರಕಗಳಿಂದಾಗಿ ಸದ್ಯಕ್ಕೆಆಮ್ಲಜನಕ ಉತ್ಪಾದನೆಯಲ್ಲಿಸ್ವಾವ ಲಂಬನೆ ಸಾಧಿಸಲಾಗಿದೆ.

ಕೊರೊನಾ ನಿರ್ವಹಣಾ ಒತ್ತಡ:ಕೊರೊನಾ ಮೊದಲ ಮತ್ತು ಎರಡನೇಅಲೆಯನ್ನು ಸಮರ್ಥವಾಗಿ ಎದುರಿಸಲುಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಯಂತ್ರೋಪಕರಣ ಮತ್ತು ಕೊರತೆ ಇರುವ ಸಿಬ್ಬಂದಿ ಭರ್ತಿ,ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸರ್ಕಾರಅನುಮತಿ ನೀಡಿತ್ತು. ಇದರಿಂದ ಕೋವಿಡ್‌ ಕೇರ್‌ಕೇಂದ್ರಗಳನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿಸ್ಥಾಪಿಸಲು ಅನುಕೂಲವಾಗಿತ್ತು. ಕೊರೊನಾ ನಿರ್ವಹಣೆಒತ್ತಡ ತಗ್ಗುವಂತಾಗಿತ್ತು.

ಕೋವಿಡ್ಪ್ರಯೋಗಾಲಯ: ಕೋಲಾರ ಜಿಲ್ಲೆಗೆಕೊರೊನಾ ಮೊದಲ ಅಲೆ ಎದುರಿಸುವ ಮೊದಲುಕೋವಿಡ್‌ ಪರೀಕ್ಷಾ ದ್ರಾವಣಗಳನ್ನು ಬೆಂಗಳೂರಿಗೆಕಳುಹಿಸಬೇಕಾಗಿತ್ತು. ಕೊರೊನಾ ಪಾಸಿಟಿವ್‌ ಹಾಗೂನೆಗೆಟಿವ್‌ ವರದಿ ಪಡೆಯಲು ಮೂರು ದಿನಗಳಿಂದ ಒಂದು ವಾರ ಕಾಯಬೇಕಾಗಿತ್ತು.ಆದರೆ, ಮೊದಲ ಅಲೆಯ ಸಂದರ್ಭದಲ್ಲಿಯೇ ಸರ್ಕಾರಕೋಲಾರ ಜಿಲ್ಲಾಸ್ಪತ್ರೆಗೆ ಕೋವಿಡ್‌ ಟೆಸ್ಟ್‌ ಪ್ರಯೋಗಾಲಯವನ್ನು ಸ್ಥಾಪಿಸಿತು. ಇದರಿಂದ ಕೇವಲ 24 ಗಂಟೆಯೊಳಗಾಗಿ ಕೊರೊನಾ ಪಾಸಿಟಿವ್‌ -ನೆಗೆಟಿವ್‌ ವರದಿಸ್ಥಳೀಯವಾಗಿ ಪಡೆದುಕೊಳ್ಳಲು ಸಾಧ್ಯವಾಯಿತು.

ಕೇಸಿ ವ್ಯಾಲಿ 400ಎಲ್‌ಡಿಗೆ ಆದೇಶ: ಕೋಲಾರಜಿಲ್ಲೆಗೆ 400 ಎಂಎಲ್‌ಡಿ ಸಂಸ್ಕರಿತ ಕೊಳಚೆ ನೀರನ್ನುಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆಯಡಿಆರಂಭಿಕವಾಗಿ ಕೇವಲ 200 ಎಂ.ಎಲ್‌ಡಿ ನೀರುಮಾತ್ರವೇ ಹರಿಯುತ್ತಿದ್ದು. ಯಡಿಯೂರಪ್ಪ ಸರ್ಕಾರವು ಪೂರ್ಣ 400 ಎಂಎಲ್‌ಡಿ ನೀರು ಹರಿಸಲುಆದೇಶಿಸಿತು. ಸದ್ಯಕ್ಕೆ 270 ರಿಂದ 300ಎಂಎಲ್‌ಡಿನೀರು ಹರಿಯುತ್ತಿದ್ದು. ಪೂರ್ಣ ಪ್ರಮಾಣದ ನೀರುಹರಿಸಲು ಕ್ರಮವಹಿಸಲಾಗಿದೆ.ಸಚಿವರ ಭರವಸೆ: ಜೊತೆಗೆ ಸಣ್ಣ ನೀರಾವರಿ ಸಚಿವಯೋಗೇಶ್ವರ್‌ ಕೋಲಾರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ತ್ಯಾಜ್ಯ ನೀರನ್ನು ಮೂರು ಬಾರಿಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆಹರಿಸುವುದು ಸರ್ಕಾರಕ್ಕೇನು ಹೊರೆಯಾಗುವುದಿಲ್ಲ,ಶೀಘ್ರ ಕ್ರಮವಹಿಸಲಾಗುವುದು ಎಂದು ಹೇಳಿಕೆನೀಡಿರುವುದು ಸ್ವಾಗತಾರ್ಹವಾಗಿದೆ.ಕೈಗಾರಿಕಾ ಪ್ರದೇಶ ಹೆಚ್ಚಳ: ನರಸಾಪುರ, ವೇಮಗಲ್‌,ಕೆಜಿಎಫ್‌, ಮುಳಬಾಗಿಲುಗಳಲ್ಲಿ ಕೈಗಾರಿಕೆಗಳಅಭಿವೃದ್ಧಿಗೆ 1397 ಎಕರೆ ಹೆಚ್ಚುವರಿ ಜಮೀನುಗುರುತಿಸಲಾಗಿದೆ.

ಕೆಜಿಎಫ್‌ನಲ್ಲಿ ಬಿಇಎಂಎಲ್‌ನ 971ಎಕರೆ ಜಮೀನಿನ ಲೀಸ್‌ ಮುಗಿದಿದ್ದು, ಅಲ್ಲಿಯೂ ಎಸ್‌ಇಝಡ್‌ ನಡಿ ಕೈಗಾರಿಕೆ ಆರಂಭಿಸಲು ಸಿದ್ಧತೆನಡೆಸಲಾಗಿದೆ. ಹಾಲಿ ನಡೆಯುತ್ತಿರುವ ಕೈಗಾರಿಕೆಗಳನ್ನುಕೋವಿಡ್‌ ಮಾರ್ಗಸೂಚಿ ಪ್ರಕಾರ ನಡೆಸಲು ಅವಕಾಶಕಲ್ಪಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗಿದೆ.

ಪ್ಯಾಕೇಜ್‌ ಸೌಲಭ್ಯ: ಈ 2 ವರ್ಷಗಳಲ್ಲಿ ಜಿಲ್ಲೆ ಉತ್ತಮಮಳೆ ಕಾಣುತ್ತಿದ್ದು, ನದಿ ನಾಲೆಗಳಿಲ್ಲದ ಕಾರಣದಿಂದನೆರೆ ಭೀತಿ ಇಲ್ಲವಾಗಿದೆ. ಆದರೂ, ಜಿಲ್ಲೆಯ ಜನಉತ್ತಮ ಮಳೆ ಕಾರಣದಿಂದ ರಾಗಿ ಫ‌ಸಲನ್ನು ಉತ್ತಮವಾಗಿ ಪಡೆದುಕೊಂಡರು. ಕೊರೊನಾ ಮೊದಲ ಮತ್ತುಎರಡನೇ ಅಲೆಯಲ್ಲಿ ಸರ್ಕಾರ ಘೋಷಿಸಿದ ಪ್ಯಾಕೇಜ್‌ಗಳ ಪ್ರಕಾರ ಸಾವಿರಾರು ಮಂದಿ ಫ‌ಲಾನುಭವಿಗಳುಕೋಲಾರ ಜಿಲ್ಲೆಯಿಂದಲೂ ಕಟ್ಟಡ ಕಾರ್ಮಿಕರು,ಆಟೋ ಚಾಲಕರು, ರೈತರ ಬೆಳೆ ಹಾನಿ ಇತ್ಯಾದಿಯಪರಿಹಾರ ಪ್ರಯೋಜನ ಪಡೆದುಕೊಂಡರು.

ಕೆ.ಎಸ್‌.ಗಣೇಶ್

ಟಾಪ್ ನ್ಯೂಸ್

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.