ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಲಾರೆ
Team Udayavani, May 22, 2018, 2:05 PM IST
ಮಾಲೂರು: ಮತ ನೀಡಿ ಶಾಸಕನನ್ನಾಗಿ ಮಾಡಿದ ತಾಲೂಕಿನ ಮತದಾರನ ಸ್ವಾಬಿಮಾನಕ್ಕೆ ದಕ್ಕೆಯಾಗುವ ಕೆಲಸ ಎಂದಿಗೂ ಮಾಡುವುದಿಲ್ಲ ಮತ ನೀಡಿ ಗೆಲುವಿಗೆ ಸಹಕರಿಸಿದ 75 ಸಾವಿರ ಮತದಾರರ ಜೊತೆಗೆ ತಾಲೂಕಿನ ಎಲ್ಲಾ ಮತ ಬಾಂದವರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳುವುದಾಗಿ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಅವರು ಪಟ್ಟಣದ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ನೂತನ ಶಾಸಕ ಕೆ.ವೈ.ನಂಜೇಗೌಡರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಸತತವಾದ ಶ್ರಮದ ಫಲವಾಗಿ ತಾಲೂಕಿನ ಜನತೆ ತಮ್ಮ ಮೇಲೆ ವಿಶ್ವಾಸ ವಿಟ್ಟು ಶಾಸಕನನ್ನಾಗಿ ಅಯ್ಕೆ ಮಾಡಿದ್ದು ಅವರ ಗೌರವಗಳಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದು ಕೊಳ್ಳುವುದಾಗಿ ತಿಳಿದರು. ತಾಲೂಕಿನ 2ಲಕ್ಷ ಜನರು ನನ್ನ ಜನರೇ ಅಗಿದ್ದು , ತಾಲೂಕಿನ ಯಾವುದೇ ಸಾರ್ವಜನಿಕರ ಹಿತ ಕಾಪಾಡಲು ಬೇರೆಯವ ಅಗತ್ಯವಿಲ್ಲ ತಾಲೂಕಿನ ಎಲ್ಲಾ ವರ್ಗದ ಜನರ ಹಿತ ಕಾಪಾಡಲು ಸದಾ ಸಿದ್ಧನಾಗಿರುವುದಾಗಿ ತಿಳಿಸಿದರು.
ಚುನಾವಣೆಯ ಪೂರ್ವದಲ್ಲಿ ಅನೇಕರ ತಮಗೆ ಚುನಾವಣೆಯ ನಡೆಸಲು ಸಾದ್ಯವಿಲ್ಲ ಎಂಬ ಅತಂಕವನ್ನು ಉಂಟು ಮಾಡಿದ್ದು ತಾಲೂಕಿನ ಜನತೆ ಹೆದರಬೇಕಾಗಿಲ್ಲ. ಇಂತಹ 10 ಚುನಾವಣೆಗಳನ್ನು ಎದುರಿಸಲು ಸಿದ್ಧವಾಗಿರುವುದಾಗಿ ತಿಳಿಸಿದರು.
ಪ್ರಸ್ತುತ ಸರಕಾರ ರಚನೆಯಲ್ಲಿ ಬಹುಮತಗಳ ಸಾಬೀತಿಗಾಗಿ ತಮ್ಮಗೆ ಪ್ರತಿಪಕ್ಷಗಳು ಅಪಾರವಾದ ಬೇಡಿಕೆಯನ್ನು ಇಟ್ಟಿದ್ದರೂ ಪಕ್ಷ ಮತ್ತು ತಾಲೂಕಿನ ಮತದಾರನ ಸ್ವಾಬಿಮಾನಕ್ಕೆ ದಕ್ಕೆಯಾವುದರಿಂದ ಎಲ್ಲಾ ಆಮಿಷಗಳನ್ನು ಬದಿಗಿಟ್ಟು ಕಾಂಗ್ರೆಸ್ ಪಕ್ಷದ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ಧನಾಗಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಕ್ಷದ ಹೈಕಾಮಾಂಡ್ ತಮ್ಮ ಅಬಿಪ್ರಾಯನ್ನು ಕೇಳಿದ ಸಂದರ್ಭದಲ್ಲಿಯೂ ತಮಗೆ ಯಾವುದೇ ಸಚಿವ ಸ್ಥಾನ, ನಿಗಮ ಮಂಡಳಿಗಳ ಸ್ಥಾನಗಳ ಅಗತ್ಯವಿಲ್ಲವಾಗಿದ್ದು, ತಾಲೂಕಿನ ಅಭಿವೃದ್ಧಿಗೆ ಹಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುವಂತೆ ಕೋರಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಸಮಿಶ್ರ ಸರಕಾರ ರಚನೆಯಾದ ಕೂಡಲೇ ತಾಲೂಕಿನ ಪ್ರತಿ ಹಳ್ಳಿಗೂ ಪ್ರವಾಸ ಕೈಗೊಳ್ಳುವ ಜೊತೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ಪುರಸಭಾ ಚುನಾವಣೆಯ ಪೂರ್ವ ಸಿದ್ಧತೆಗಳನ್ನು ನಡೆಸುವುದಾಗಿ ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷಿನಾರಾಯಣ್, ಎಸ್.ಎನ್.ರಘುನಾಥ್, ಕೆ.ಹೆಚ್.ಸೋಮಶೇಖರ್, ಜಿ.ಇ.ರಾಮೇಗೌಡ, ಟಿ.ಎಂ.ಅಶೋಕ್ಕುಮಾರ್, ಟಿ. ಮುನಿಯಪ್ಪ, ಅರ್.ರಾಜಣ್ಣ, ಆರ್.ಸಿ.ಅಪ್ಪಾಜಿಗೌಡ, ಅಂಜನಿಸೋಮಣ್ಣ, ಕೆ.ಮುನಿರಾಜು, ಎಟ್ಟಕೋಡಿ ವೀರಭದ್ರಪ್ಪ, ಸಬಾœರ್ಬೇಗ್, ಸಿ.ಪಿ.ವೆಂಕಟೇಶ್, ಹನುಮಂತರೆಡ್ಡಿ, ಎಂ.ಜಿ.ಮಧುಸೂಧನ್, ಅಶ್ವತ್ರೆಡ್ಡಿ, ಬೋರ್ರಮೇಶ್, ಪ್ರಧೀಪ್ರೆಡ್ಡಿ, ಸಂತೇಹಳ್ಳಿ ನಾರಾಯಣಸ್ವಾಮಿ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ವಿಜಯನರಸಿಂಹ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು