ಕೋಲಾರ : ಎಂ. ವಿ. ಕೃಷ್ಣಪ್ಪ ಪತ್ನಿ ಪ್ರಮೀಳಮ್ಮ ನಿಧನ
Team Udayavani, Jun 23, 2021, 1:54 PM IST
ಕೋಲಾರ : ಹೈನೋದ್ಯಮದ ಪಿತಾಮಹ ಎಂದೇ ಖ್ಯಾತಿ ಪಡೆದು ಇಂದು ಲಕ್ಷಾಂತರ ರೈತರ ಜೀವನಕ್ಕೆ ದಾರಿ ದೀಪವಾಗಿರುವ ದಿವಂಗತ ಎಂ. ವಿ. ಕೃಷ್ಣಪ್ಪ ರವರ ಧರ್ಮಪತ್ನಿ ಹಾಗೂ ಕೋಲಾರ ಜಿಲ್ಲೆಯ ಪ್ರಭಾವಿ ಮುಖಂಡರಾದ ಶ್ರೀ ಅಶೋಕ್ ಕೃಷ್ಣಪ್ಪ ಮತ್ತು ಜಯಸಿಂಹ ಕೃಷ್ಣಪ್ಪ ರವರ ತಾಯಿ ಪ್ರಮೀಳಮ್ಮ ಕೃಷ್ಣಪ್ಪ (95) ವರ್ಷ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಕೇಂದ್ರ ಮತ್ತು ರಾಜ್ಯಸರ್ಕಾರಗಳಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಕೋಲಾರಜಿಲ್ಲೆಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂ. ವಿ. ಕೆ ರವರ ಸಾಧನೆಯಲ್ಲಿ ಮೃತ ಪತ್ನಿ ಪ್ರಮೀಳಮ್ಮ ರವರ ಪಾತ್ರವೂ ಇತ್ತು ಎಂದು ತಿಳಿಸಿದ್ದಾರೆ.
ಸ್ವಾತಂತ್ರ ಹೋರಾಟದಲ್ಲಿ ಗಂಡ ಕೃಷ್ಣಪ್ಪರವರ ಜೊತೆ ಬಾಗಿಯಾಗಿದ್ದ ಪ್ರಮೀಳಮ್ಮ ಹಲವು ಭಾರಿ ಜೈಲಿಗೂ ಹೋಗಿದ್ದರು ಇತ್ತೀಚಿನ ವರೆಗೂ ಅರೋಗ್ಯವಾಗಿಯೇ ಇದ್ದ ಪ್ರಮೀಳಮ್ಮ ಕೆಲವು ದಿನಗಳಿಂದ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾಗಿದ್ದು ಈ ದಿನ 23-06-21ರಂದು ಬೆಳಿಗ್ಗೆ ಬೆಂಗಳೂರು ಅವರ ಸ್ವಗೃಹದಲ್ಲಿ ನಿಧಾನರಾಗಿದ್ದಾರೆ.
ಇಂದು ಸಂಜೆ 4ಗಂಟೆಗೆ ಕೆಜಿಎಪ್ ತಾಲೂಕು ಬಂಗಾರುತಿರುಪತಿ (ಗುಟ್ಟಹಳ್ಳಿ ) ಬಳಿಯ ಅವರ ಸ್ವಂತ ತೋಟದ ಭೂಮಿಯಲ್ಲಿ ( ಗಂಡ ದಿವಂಗತ ಎಂ. ವಿ. ಕೃಷ್ಣಪ್ಪ ಸಮಾಧಿ ಪಕ್ಕದಲ್ಲೇ ) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕೋವಿಡ್ 19 ಹಿನ್ನಲೆಯಲ್ಲಿ ಎಲ್ಲರಿಗೂ ಮಾಹಿತಿ ನೀಡಲು ಸಾಧ್ಯವಾಗದ ಕಾರಣ ವಿಷಯ ತಿಳಿದವರು ತುಂಬಾ ಆಪ್ತರು,ಸಂಬಧಿಕರು,ಹಿತೈಷಿಗಳು, ಮತ್ತು ಅಭಿಮಾನಿಗಳು ಭಾಗವಹಿಸಲು ಸಾಧ್ಯವಾಗದಿದ್ದರೆ ಶ್ರದ್ದಾoಜಲಿ,ಸಂತಾಪಗಳನ್ನು ಸೂಚಿಸಬೇಕೆಂದು ಕುಟುಂಬದವರು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ