ಕೋಲಾರ ಕ್ಲಾಕ್ ಟವರ್: ಗಡಿಯಾರ ಗೋಪುರದಲ್ಲಿ ಗಡಿಯಾರವೇ ಇಲ್ಲ!


Team Udayavani, Mar 23, 2022, 2:28 PM IST

ಕೋಲಾರ ಕ್ಲಾಕ್ ಟವರ್: ಗಡಿಯಾರ ಗೋಪುರದಲ್ಲಿ ಗಡಿಯಾರವೇ ಇಲ್ಲ!

ಕೋಲಾರ: ಮೂರು ನಾಲ್ಕು ದಿನಗಳ ಹಿಂದಷ್ಟೇ ಕೋಲಾರದ ಗಡಿಯಾರ ಗೋಪುರದ ಮೇಲೆ ತ್ರಿವರ್ಣ ಧ್ವಜ ಹಾರಾಡಿಸಿತ್ತು ರಾಜ್ಯದ ಗಮನ ಸೆಳೆದಿತ್ತು. ಆದರೆ, ಈ ಗಡಿಯಾರ ಗೋಪುರದಲ್ಲಿ ಈಗ ಗಡಿಯಾರವೇ ಇಲ್ಲವೆನ್ನುವುದು ವಿಪರ್ಯಾಸದ ಸಂಗತಿಯಾಗಿದೆ.

ಗಡಿಯಾರ ಗೋಪುರದ ಮೇಲೆ ಇದ್ದ ಧಾರ್ಮಿಕ ಧ್ವಜ ತೆರವುಗೊಳಿಸಬೇಕು, ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಪರ ವಿರುದ್ಧ ನಿಂತಿದ್ದ ಯಾವುದೇ ಗುಂಪಿಗೂ ಗಡಿಯಾರ ಗೋಪುರಕ್ಕೆ ಗಡಿಯಾರ ಮುಖ್ಯ ಎಂದು ಅನ್ನಿಸದಿರುವುದು ಟೀಕೆಗೆ ಕಾರಣವಾಗಿದೆ.

ಬೆಂಗಳೂರಿನಿಂದ ಕೋಲಾರಕ್ಕೆ ಆಗಮಿಸುವಾಗ ಸಿಗುವ ಮೊದಲ ವೃತ್ತದಲ್ಲಿ ಹಾಗೂ ಈಗಿನ ಹಳೆಯ ಬಸ್‌ ನಿಲ್ದಾಣದಲ್ಲಿ ಗಡಿಯಾರ ಗೋಪುರಗಳನ್ನು ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಳೀಯ ಮುಖಂಡರು ನಿರ್ಮಾಣ ಮಾಡಲಾಗಿತ್ತು. ಕೋಲಾರ ನಗರದ ಹೆಗ್ಗುರುತಾಗಿರುವ ಈ ಗಡಿಯಾರ ಗೋಪುರಗಳನ್ನು ನಿರ್ಮಾಣ ಮಾಡಿ ಅವುಗಳಲ್ಲಿ ನಾಲ್ಕು ದಿಕ್ಕಿಗೂ ಕಾಣುವಂತೆ ಗಡಿಯಾರವನ್ನು ಅಳವಡಿಸಲಾಗಿತ್ತು. ಹಲವಾರು ದಶಕಗಳ ಕಾಲ ಈ ಗಡಿಯಾರವು ಕೋಲಾರ ನಗರದ ಜನತೆಗೆ ಸಮಯವನ್ನು ತೋರಿಸುವ ಮತ್ತು ಅಲಾರಾಂ ಬಾರಿಸುವ ಮೂಲಕ ಸ್ಥಳೀಯರನ್ನು ಎಚ್ಚರಿಸುವ ಕೆಲಸ ಮಾಡುತ್ತಿತ್ತು. ಎಲ್ಲರೂ ಕೈಗಡಿಯಾರ ಕಟ್ಟುವಷ್ಟು ಆರ್ಥಿಕ ಸ್ಥಿತಿವಂತರಲ್ಲದ ಅಂದಿನ ದಿನಗಳಲ್ಲಿ ಗಡಿಯಾರ ಗೋಪುರವೇ ಎಲ್ಲರಿಗೂ ಸಮಯ ತೋರಿಸುವ ಸಾಧನ ವಿನ್ಯಾಸಗೊಳಿಸಲಾಗಿತ್ತು.

ಕಾಲಕ್ರಮೇಣ ಈ ಗಡಿಯಾರಗಳು ಕೆಟ್ಟು ಹೋ ದವು, ಅವುಗಳನ್ನು ದುರಸ್ತ ಮಾಡಲು ಇಚ್ಛಾಶಕ್ತಿ ಕೊರತೆ ಎದುರಾಯಿತು. ಹಳೆಯ ಗಡಿಯಾರಗಳನ್ನು ಕೆಲವು ದಶಕಗಳ ಹಿಂದೆ ತೆರವುಗೊಳಿಸಿ ಆಧುನಿಕ ಗಡಿಯಾರಗಳನ್ನು ಅಳವಡಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಅವು ಸಮಯ ತೋರಿಸಲು ವಿಫ‌ಲವಾದವು.

ಆನಂತರ ಈ ಗಡಿಯಾರ ಗೋಪುರ ಧಾರ್ಮಿಕ ಪ್ರದರ್ಶನದ ಗೋಪುರವಾಗಿ ಮಾರ್ಪಟ್ಟಿತ್ತು. ಇದನ್ನು ಸಂಸದ ಎಸ್‌.ಮುನಿಸ್ವಾಮಿ ವಿರೋಧಿಸುವ ಮೂಲಕ ತ್ರಿವರ್ಣಧ್ವಜ ಹಾರಿಸಲು ಒತ್ತಾಯಿಸಿದರು. ಎಚ್ಚೆತ್ತುಕೊಂಡ ಜಿಲ್ಲಾಡಳಿತ ತ್ರಿವರ್ಣ ಧ್ವಜವನ್ನು ಹಾರಿಸುವಲ್ಲಿ ಸಫ‌ಲರಾದರು. ಆದರೆ, ಇದೇ ಅವಧಿಯಲ್ಲಿ ನಾಲ್ಕು ದಿಕ್ಕುಗಳಲ್ಲೂ ಗಡಿಯಾರ ಅಳವಡಿಸಲು ಧಾರ್ಮಿಕ ಧ್ವಜ ಹಾರಿಸಿದವರೂ, ತ್ರಿವರ್ಣ ಧ್ವಜ ಬೇಕೆಂದವರೂ ಯಾರೂ ಒತ್ತಾಯಿಸಲಿಲ್ಲ ಎನ್ನುವುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕೋಲಾರ ನಗರದ ಹೆಗ್ಗುರುತಾಗಿರುವ ಕ್ಲಾಕ್‌ ಟವರ್‌ ಗಡಿಯಾರ ಗೋಪುರ ಮತ್ತು ಹಳೇ ಬಸ್‌ ನಿಲ್ದಾಣದ ಗಡಿಯಾರ ಗೋಪುರಗಳಲ್ಲಿ ಜಿಲ್ಲಾಡಳಿತ ಧ್ವಜ ಹಾರಿಸುವ ರೀತಿಯ ಉತ್ಸಾಹದಲ್ಲಿಯೇ ಗಡಿಯಾರಗಳನ್ನು ಅಳವಡಿಸುವ ಮೂಲಕ ಗೋಪುರಗಳ ಅಂದ ಹೆಚ್ಚಿಸಬೇಕೆಂದು ಸಾರ್ವ ಜನಿಕರು ಒತ್ತಾಯಿಸುತ್ತಿದ್ದಾರೆ.

ಧಾರ್ಮಿಕ ಧ್ವಜ ತೆರವುಗೊಳಿಸಿ ತ್ರಿವರ್ಣ ಧ್ವಜ ಹಾರಿಸಿದ ಕಾರಣಕ್ಕೆ ಪ್ರತಿಯೊಬ್ಬರ ಬಾಯಲ್ಲೂ ಗಡಿಯಾರ ಗೋಪುರದ್ದೇ ಸುದ್ದಿಯಾಗಿದೆ. ಆದರೆ, ಧ್ವಜ ಹಾರಿಸುವ ಮುತುವರ್ಜಿ ಇದೇ ಗೋಪುರಕ್ಕೆ ಅಂದವಾದ ಗಡಿಯಾರ ಅಳವಡಿಸಲು ತೋರಿಸಿದ್ದರೆ ಗೋಪುರವೂ ಅಂದವಾಗಿರುತ್ತಿತ್ತು. ಜಿಲ್ಲಾಡಳಿತ ಈಗಲಾದರೂ ಗಡಿಯಾರ ಅಳವಡಿಕೆಗೆ ಮನಸು ಮಾಡಬೇಕು.-ಕುರುಬರಪೇಟೆ ವೆಂಕಟೇಶ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ.

 

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.