ರೈತ ವಿರೋಧಿ ಕಾಯ್ದೆಗಳ ವಾಪಸ್ಗೆ ಆಗ್ರಹ
Team Udayavani, Jun 29, 2021, 1:10 PM IST
ಕೋಲಾರ: “ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ’, ರೈತ ವಿರೋಧಿ ಕಾಯ್ದೆ ಕೂಡಲೇ ವಾಪಸ್ ಪಡೆಯಲು ಒತ್ತಾಯಿಸಿ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕವು ಡೀಸಿ ಮೂಲಕ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿತು. ದೆಹಲಿಯ ಗಡಿಯಲ್ಲಿ ರೈತರು
ನಡೆಸುತ್ತಿರುವ ಪ್ರತಿಭಟನೆ ಏಳು ತಿಂಗಳು ಪೂರೈಸಿದ್ದಕ್ಕಾಗಿ ಮತ್ತು ಈ ದೇಶದಲ್ಲಿ ತುರ್ತು ಪರಿ ಸ್ಥಿತಿಯ 47ನೇ ವಾರ್ಷಿಕೋತ್ಸವದಂದು ಕೃಷಿಯನ್ನು ಉಳಿಸುವ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಸವಾಲಿನ ಬಗ್ಗೆ ಪ್ರಧಾನಿಗೆ ಪತ್ರವನ್ನು ಬರೆಯುತ್ತಿದ್ದೇವೆ ಎಂದುಕಾರ್ಯಕರ್ತರು ವಿವರಿಸಿದರು.
ಮೊದಲು 33 ಕೋಟಿ ನಾಗರಿಕರಿಗೆ ಆಹಾರ ನೀಡುತ್ತಿದ್ದೆವು. ಇಂದು ಅದಕ್ಕಿಂತ ಕಡಿಮೆ ಪ್ರಮಾಣದ ಭೂಮಿಯಲ್ಲಿ 140 ಕೋಟಿ ಭಾರತೀಯರಿಗೆ ಆಹಾರ ಪೂರೈಸುತ್ತಿದ್ದೇವೆ. ಕೊರೊನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿಆರ್ಥಿಕತೆಯ ಇತರ ಕ್ಷೇತ್ರಗಳು ಕ್ಷೀಣಿಸಿದವುಮತ್ತು ಕುಸಿದವು. ಆದರೂ, ರೈತರು ಕೃಷಿಯಲ್ಲಿದಾಖಲೆಯ ಉತ್ಪಾದನೆಯನ್ನು ಸಾಧಿಸಿದ್ದೇವೆ.ಜೀವನವನ್ನೇ ಪಣಕ್ಕಿಟ್ಟುಧಾನ್ಯ ಗೋದಾಮುಗಳಲ್ಲಿ ತುಂಬಿರುವುದನ್ನು ಖಾತ್ರಿಪಡಿಸಿದ್ದೇವೆ ಎಂದು ಹೇಳಿದರು.
ಮನವಿ ಸ್ವೀಕರಿಸಿಲ್ಲ: ದೆಹಲಿಯ ಗಡಿಯಲ್ಲಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಏಳು ತಿಂಗಳು ಪೂರೈಸಿದೆ. ಈ ಹೋರಾಟದಲ್ಲಿ 500 ರೈತರು ಪ್ರಾಣ ಕ ಳೆದುಕೊಂಡಿದ್ದಾರೆ. ಮಳೆ, ಗಾಳಿ ಬಿಸಿಲೆನ್ನೆದೆ ಹಲವು ರೈತರುಕಾಯಿಲೆಗಳಿಂದ ಬಳಲುತ್ತಿದ್ದರೂ, ಪ್ರಧಾನಿ ಪ್ರತಿಭಟನೆ ಸ್ಥಳಕ್ಕೆ ತೆರಳಿ ಮನವಿ ಸ್ವೀಕ ರಿಸಿಲ್ಲ ಎಂದು ದೂರಿದರು.
ಎಚ್ಚರಿಕೆ ಪತ್ರ ರವಾನೆ: ಕಾರ್ಪೊರೇಟ್ ವಲಯದ ಪರವಾಗಿ ನಿಂತು ರೈತ ವಿರೋಧಿ ಕಾಯ್ದೆ ಜಾರಿ ಮಾಡಿರುವುದು ಮಾರಕವಾಗಿದೆ. ಈಗಲಾದರೂ ತಮ್ಮ ತಪ್ಪುಗಳನ್ನು ಅರಿತು, ಭೂ ಸ್ವಾಧೀನ, ಕೆಪಿಟಿಸಿಎಲ್, ಎಪಿಎಂಸಿ ತಿದ್ದುಪಡಿ, ಇನ್ನೂ ಹಲವು ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆದು, ರೈತ ಪರ ಸರ್ಕಾರ ಎಂಬುದನ್ನು ಸಾಬೀತುಪಡಿಸಿ, ಇಲ್ಲವಾದರೆ ರೈತವಿರೋಧಿ ಸರ್ಕಾರ ಎಂದು ಭಾವಿಸಿ ಮುಂದಿನದಿನಗಳಲ್ಲಿ ತಮ್ಮ ತಕ್ಕ ಉತ್ತರವನ್ನು ದೇಶದ ರೈತರು,ಪ್ರಜೆಗಳು ನೀಡಲಿದ್ದಾರೆ ಎಂದು ಈ ಮೂಲಕ ತಮಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?