Kushtagi: ಹ್ಯಾಂಡಲ್ ಆಸರೆ ಇಲ್ಲದೇ, ಎರಡು ಕೈ ಬಿಟ್ಟು ಸೈಕಲ್ ಚಲಾಯಿಸುವ 61 ವರ್ಷದ ರೈತ
Team Udayavani, Aug 15, 2023, 2:52 PM IST
ಕುಷ್ಟಗಿ: 61 ವರ್ಷದ ರೈತರೊಬ್ಬರು ಈ ಬಾರಿಯ 77ನೇ ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜಾ ಹಿಡಿದು ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸವಾರಿ ಸಾಹಸ ಮಾಡಿ ಗಮನ ಸೆಳೆದರು.
61 ವರ್ಷದ ಯಾಖೂಬ್ ಖಾನ್ ರಸೂಲ್ ಖಾನ್ ಸೌಧಾಗರ್ ಎಂಬವರು ಸೈಕಲ್ ಸಹಾಸಿ. ಹ್ಯಾಂಡಲ್ ಆಸರೆ ಇಲ್ಲದೇ ಎರಡು ಕೈ ಬಿಟ್ಟು ಸೈಕಲ್ ಚಲಾಯಿಸುವುದಲ್ಲದೇ ಸೈಕಲ್ ಪೆಡಲ್ ತುಳಿಯುತ್ತಲೇ ಕೂಡ ಸುಮಾರು ಹೊತ್ತು ದೂರ ಕ್ರಮಿಸುವ ಸಹಾಸಿಗ. ಇವರು ಆಗಾಗ್ಗೆ ಸೈಕಲ್ ಸಾಹಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಈ ಬಾರಿ 77ನೇ ಸ್ವಾತಂತ್ರ್ಯ ಮಹೋತ್ಸವದಂದು ಕುಷ್ಟಗಿ ಪಟ್ಟಣದ ಕಾರ್ಗಿಲ್ ವೃತ್ತದಿಂದ ಮಾರುತಿ ವೃತ್ತ, ಕನಕದಾಸ ವೃತ್ತ ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದವರೆಗೂ ರಾಷ್ಟ್ರ ಧ್ವಜ ಹಿಡಿದು ಸೈಕಲ್ ಸವಾರಿ ಮಾಡಿ ಗಮನ ಸೆಳೆದು ಸಾರ್ವಜನಿಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದರು. ರೈತ ಯಾಖೂಬ್ ಖಾನ್ ಸಹಾಸಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ