ಅಂಗನವಾಡಿ ಕೇಂದ್ರಕ್ಕಿಲ್ಲ ಶಾಶ್ವತ ಸೂರು
Team Udayavani, Oct 12, 2019, 2:53 PM IST
ಕುಷ್ಟಗಿ: ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿರುವ ಮೊದಲ ಅಂಗನವಾಡಿ ಕೇಂದ್ರಕ್ಕೆ ಸೂರು ಭಾಗ್ಯ ಇಲ್ಲ. ಈಗಲೂಆಶ್ರಯ ಮನೆಯಲ್ಲಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುತ್ತಿಲ್ಲ. ನೆರೆಬೆಂಚಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ.
ಈ ಮೊದಲು ತಗಡಿನ ಶೆಡ್ನಲ್ಲಿ ನಡೆಯುತ್ತಿತ್ತು. ಅದು ಮಳೆಗಾಲದಲ್ಲಿ ಸೋರುತ್ತಿದ್ದ ಹಿನ್ನೆಲೆಯಲ್ಲಿ ಆಶ್ರಯ ಮನೆಯ ಗ್ರಾಮ ಆರೋಗ್ಯ ಸಮಿತಿ ಕಟ್ಟಡದಲ್ಲಿ ನಡೆಯುತ್ತಿದೆ. ಹೀಗಾಗಿ ಮೂಲ ಅಂಗನವಾಡಿ ಕೇಂದ್ರವೀಗ ಕುರಿ ಸಾಕಾಣಿಕೆಗೆ ಬಳಕೆಯಾಗುತ್ತಿದೆ. ಗ್ರಾಮದಲ್ಲಿ ಎರಡನೇ ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ಭಾಗ್ಯ ದೊರಕಿದ್ದು, ಮೊದಲ ಅಂಗನವಾಡಿ ಕೇಂದ್ರಕ್ಕೆ ಆ ಭಾಗ್ಯ ಇಲ್ಲ. ಈಗಲೂ ಆಶ್ರಯ ಮನೆಯಲ್ಲಿ ನಡೆಯುತ್ತಿದೆ. ಅದು ಕೂಡ ಈಗಿನ ಮಳೆ ದಿನಗಳಲ್ಲಿ ಸೋರಲಾರಂಭಿಸಿದೆ.
ಪಾಟಿಕಲ್ಲು ಕಿತ್ತು ಹೋಗಿದ್ದು, ಇದರಲ್ಲೇ ಅನಿವಾರ್ಯವಾಗಿ ಕಲಿಯುವಂತಾಗಿದೆ. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ದ್ಯಾಮವ್ವ ಪ್ರತಿಕ್ರಿಯಿಸಿ, ಈ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಈ ಅಂಗನವಾಡಿ ಕೇಂದ್ರದ ಜಾಗೆ ಇಲ್ಲದಿರುವುದು ಮಕ್ಕಳು ಬಯಲಲ್ಲಿರುವಂತಾಗಿದೆ. ಕೂಡಲೇ ಕಟ್ಟಡ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ