ನಕಲಿ ದಾಖಲೆ ಸಲ್ಲಿಸಿ ಸೇನೆ ಸೇರಲು ಮುಂದಾಗಿದ್ದ ಯುವಕ ಅರೆಸ್ಟ್
Team Udayavani, Nov 16, 2019, 7:42 PM IST
ಕೊಪ್ಪಳ: ಕೊಪ್ಪಳದಲ್ಲಿ ನಡೆದ ಭೂ ಸೇನಾ ಭರ್ತಿ ರಾಲಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಸೇನೆ ಸೇರಲು ಮುಂದಾದ ರಾಜಸ್ಥಾನದ ಯುವಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಠಾಣೆಗೆ ಕರೆ ತಂದಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಬಂಧಿತ ಯುವಕ ರಾಜೇಂದ್ರ ಸಿಂಗ್ ರಾಜಸ್ಥಾನದ ಯುವಕ ತಿಳಿದು ಬಂದಿದೆ.
ಕೊಪ್ಪಳದಲ್ಲಿ ನ.5 ರಿಂದ 16ರ ವರೆಗೂ ಭೂ ಸೇನಾ ನೇಮಕಾತಿ ರಾಲಿ ನಡೆದಿತ್ತು. 45 ಸಾವಿರ ಅಭ್ಯರ್ಥಿಗಳು ಹೆಸರು ನೊಂದಾಯಿಸಿ ಕೊಂಡಿದ್ದರು. ಶನಿವಾರ ದಾಖಲೆ ಪರಿಶೀಲನೆ ವೇಳೆ ರಾಜಸ್ಥಾನದ ರಾಜೇಂದ್ರ ಸಿಂಗ್ ಎನ್ನುವ ಯುವಕ ನಕಲಿ ದಾಖಲೆ ಸಲ್ಲಿಸಿದ ಬಗ್ಗೆ ಸೇನಾ ಕರ್ನಲ್ ದೂರಿನ ಅನ್ವಯ ಯುವಕನನ್ನು ಕೊಪ್ಪಳ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಈತನು ಕೊಪ್ಪಳ ಜಿಲ್ಲೆಯ ಗಂಗಾವತಿಯ ಸ್ಥಳೀಯ ವಿಳಾಸ ನೀಡಿ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ. ಸೇನಾ ತಂಡವು ದಾಖಲೆ ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.