Kushtagi: ಬಾಲಕ ಕಿಡ್ನ್ಯಾಪ್ ಪ್ರಕರಣ ; ಕೆಲವೇ ತಾಸುಗಳಲ್ಲಿ ಸುಖಾಂತ್ಯ
ಕಲಿಕೆಯಲ್ಲಿ ಆಸಕ್ತಿ ಇಲ್ಲವೆಂದು ಕಿಡ್ನ್ಯಾಪ್ ಕತೆ
Team Udayavani, Aug 1, 2023, 3:51 PM IST
ಕುಷ್ಟಗಿ: 5ನೇ ತರಗತಿ ಬಾಲಕ ಕಿಡ್ನ್ಯಾಪ್ ಪ್ರಕರಣ ಕೆಲವೇ ತಾಸುಗಳಲ್ಲಿ ಸುಖಾಂತ್ಯ ಕಂಡಿದೆ. ಈ ಹುಸಿ ಕಿಡ್ನ್ಯಾಪ್ ಪ್ರಕರಣಕ್ಕೆ ಈ ಬಾಲಕನೇ ಸೂತ್ರದಾರನಾಗಿದ್ದು, ಕಲಿಯಲು ಕಷ್ಟ ಎಂದು ಯಾರೋ ಅಪರಚಿತರು ಕಿಡ್ನ್ಯಾಪ್ ಮಾಡಿದ್ದಾರೆಂದು ತಂದೆಗೆ ಕರೆ ಮಾಡಿ ಯಾಮಾರಿಸಿದ ಪ್ರಹಸನ ನಡೆದಿದೆ.
ಯಲಬುರ್ಗಾ ತಾಲೂಕಿನ ಸಾಲಬಾವಿ ಗ್ರಾಮದ ಲಕ್ಷ್ಮಣಗೌಡ ಶಿವನಗೌಡ ಮಾಲಿಪಾಟೀಲ ಎಂಬ ಬಾಲಕ ಕುಷ್ಟಗಿ ಚಂದ್ರಶೇಖರ ಲೇಔಟ್ ನಲ್ಲಿರುವ ಖಾಸಗಿ ಕೋಚಿಂಗ್ ಸೆಂಟರ್ ನಲ್ಲಿ ಕಲಿಯುತ್ತಿದ್ದ.
ಆತನಿಗೆ ಕಲಿಕೆಯಲ್ಲಿ ಎಳ್ಳಷ್ಟು ಆಸಕ್ತಿ ಇರಲಿಲ್ಲವಾದ್ದರಿಂದ ಪಾರಾಗಲು ತನ್ನ ಮೊಬೈಲ್ನಿಂದ ತಂದೆಗೆ ಕರೆ ಮಾಡಿ ತನ್ನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆಂದು ಹೇಳಿದ ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಇದನ್ನು ನಂಬಿ ಗಾಬರಿಗೊಂಡ ಪಾಲಕರು ಕೂಡಲೇ ಕುಷ್ಟಗಿ ಪೊಲೀಸರಿಗೆ ಮಾಹಿತಿ ನೀಡಿದರು. ಆ ಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ತೀವ್ರಗತಿಯಲ್ಲಿ ಹುಡುಕಾಟ ನಡೆಸಿದಾಗ ಬಾಲಕ ಬಸ್ ನಿಲ್ದಾಣದಲ್ಲಿರುವುದು ಕಂಡು ಬಂತು.
ಬಾಲಕನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಆತ ಕಲಿಯುವುದು ಇಷ್ಟವಿರಲಿಲ್ಲ. ಹೀಗಾಗಿ ಈ ರೀತಿ ಮಾಡಿರುವುದಾಗಿ ತನ್ನ ನಿಜ ಸ್ಥಿತಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ನಂತರ ಬಾಲಕನ ತಂದೆ ಶಿವನಗೌಡ ಮಾಲಿ ಪಾಟೀಲ ಅವರನ್ನು ಠಾಣೆಗೆ ಕರೆಸಿ ಬಾಲಕ ಲಕ್ಷ್ಮಣಗೌಡನಿಗೆ ಬುದ್ದಿವಾದ ಹೇಳಿಗೆ ಮನೆಗೆ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ