ಸಿಎಂ, ಎಂ.ಬಿ. ಪಾಟೀಲ ತಲೆ ತಿರುಕರು: ಬಿಎಸ್ವೈ
Team Udayavani, Dec 17, 2017, 6:15 AM IST
ಕೊಪ್ಪಳ: ರಾಜ್ಯದಲ್ಲಿ ಇಬ್ಬರು ತಲೆ ತಿರುಕರಿದ್ದಾರೆ. ಒಬ್ಬ ಸಿದ್ದರಾಮಯ್ಯ, ಮತ್ತೂಬ್ಬ ಎಂ.ಬಿ.ಪಾಟೀಲ. ಇವರಿಬ್ಬರೂ ತಲೆ ತಿರುಕರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಕೊಪ್ಪಳದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾವೇಶದಲ್ಲಿ ಮಾತನಾಡಿ, “ಇವರು ಮಹದಾಯಿ ವಿವಾದ ಏಕೆ ಇತ್ಯರ್ಥ ಮಾಡ್ತಿಲ್ಲ. ನಾಲ್ಕೂವರೆ ವರ್ಷ ಎಂ.ಬಿ.ಪಾಟೀಲ್ ಏನು ಕತ್ತೆ ಕಾಯ್ತಿದ್ದನಾ? ಮಹದಾಯಿ ಬಗ್ಗೆ ನನಗೆ ಜ್ಞಾನವೇ ಇಲ್ಲ ಎನ್ನುತ್ತಿದ್ದಾನೆ. ಮಹದಾಯಿ ವಿವಾದ ಕಾಂಗ್ರೆಸ್ನ ಪಾಪದ ಕೂಸು. ಸೋನಿಯಾ ಗಾಂಧಿ ಗೋವಾದಲ್ಲಿ ಮಾತನಾಡಿದ್ದಕ್ಕೆ ಇಷ್ಟೆಲ್ಲ ಆಗಿದೆ. ವಿವಾದ ಇತ್ಯರ್ಥಕ್ಕೆ ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲ. ನಾನು ಕೇವಲ 15-20 ದಿನದಲ್ಲಿ ಮಹದಾಯಿ ವಿವಾದ ಇತ್ಯರ್ಥ ಮಾಡುವೆ. ಸಂಬಂದಪಟ್ಟವರೊಂದಿಗೆ ಈಗಾಗಲೆ ಮಾತನಾಡಿದ್ದೇನೆ’ ಎಂದು ಏಕವಚನದಲ್ಲಿ ಹರಿಹಾಯ್ದರು.
“ಸಿಎಂ ಸಿದ್ದರಾಮಯ್ಯ ಹಣ, ಜಾತಿ, ಅಧಿಕಾರದ ಮದದಿಂದ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಅತಿ ಹಗುರವಾಗಿ ಮಾತನಾಡಬೇಡಿ. ಬಿಜೆಪಿ ಸರ್ಕಾರದಲ್ಲಿ ನಾನು ಯಾವ ಮಹಿಳೆಗೂ ಹರಕು ಸೀರೆ, ಮುರುಕು ಸೈಕಲ್ ಕೊಟ್ಟಿಲ್ಲ. ಬಡ ಮಕ್ಕಳ ಅನುಕೂಲಕ್ಕೆ ನಾನು ಸೈಕಲ್ ಕೊಟ್ಟಿರುವೆ. ಸಿಎಂ ಎಲುಬಿಲ್ಲದ ನಾಲಿಗೆ ಎಂದು ಬಾಯಿಗೆ ಬಂದಂತೆ, ತಲೆ ತಿರುಕನಂತೆ ಮಾತನಾಡಬೇಡಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ