ರಾಯರಡ್ಡಿ ನೀರಿಳಿಸಿದ ಕಾಂಗ್ರೆಸ್ ಮುಖಂಡ
Team Udayavani, May 3, 2018, 7:15 AM IST
ಕೊಪ್ಪಳ: ಯಲಬುರ್ಗಾ ತಾಲೂಕಿನ ತೆಂಗಿನಕಾಯಿ ಮಿಲ್ನಲ್ಲಿ ಇತ್ತೀಚೆಗೆ ನಡೆಯಿತೆನ್ನಲಾದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರ ಎದುರಲ್ಲೇ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಕಾಂಗ್ರೆಸ್ ಮುಖಂಡ
ಶಿವಕುಮಾರ ಹಳ್ಳಿ ವಾಗ್ಧಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
“ರಾಯರಡ್ಡಿ ಅವರು ವಾಲ್ಮೀಕಿ ಸಮಾಜಕ್ಕೆ ಏನೂ ಕೊಡುಗೆ ನೀಡಿಲ್ಲ. ತಳಕಲ್ಗೆ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡುವ ಭರವಸೆ ನೀಡಿದ್ದರು. ಆದರೆ ಮಂಜೂರು ಮಾಡಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಈಗ ಚುನಾವಣೆ ಬಂದಿದೆ ವಾಲ್ಮೀಕಿ ನಾಯಕರ ಅವಶ್ಯಕತೆ ಬಂದ ಮೇಲೆ ಸಭೆ ನಡೆಸಲಾಗುತ್ತಿದೆ’ ಎಂದು ಸಚಿವ ರಾಯರಡ್ಡಿ ಎದುರಲ್ಲೇ ಶಿವಕುಮಾರ ಮೈಕ್ನಲ್ಲಿ ಮಾತನಾಡಿದ್ದಾರೆ.
ಇದರಿಂದ ಸಭೆಯಲ್ಲಿದ್ದ ಸಚಿವ ಬಸವರಾಜ ರಾಯರಡ್ಡಿಗೆ ಮುಜುಗುರವಾಗಿದ್ದು, ಇದನ್ನರಿತ ಉಳಿದ ಕಾರ್ಯಕರ್ತರು ಕೂಡಲೇ ಶಿವಕುಮಾರ ಹಳ್ಳಿ ಅವರ ಕೈಯಲ್ಲಿದ್ದ ಮೈಕ್ ಕಸಿದು ಸಭೆಯಿಂದ ಹೊರ ಕಳಿಸಿರುವ ವಿಡೀಯೋ ವೈರಲ್ ಆಗಿದೆ. ಈ ಘಟನೆ ಏ.30ರಂದು ನಡೆದಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ