ಗುಳೆ ಹೋಗದೆ “ದುಡಿಯೋಣು ಬಾ’
Team Udayavani, Mar 17, 2021, 4:42 PM IST
ಕಾರಟಗಿ: ತಾಲೂಕಿನ ಚಳ್ಳೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ದುಡಿಯೋಣ ಬಾ ಅಭಿಯಾನಕ್ಕೆ ಗ್ರಾಪಂ ಅಧ್ಯಕ್ಷ ವಿಜಯ ಕುಮಾರ ಚಾಲನೆ ನೀಡಿದರು.
ಅಭಿಯಾನದಲ್ಲಿ ಪಾಲ್ಗೊಂಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಭಾರ್ಗೇಶ್ವರಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಬೇಸಿಗೆಯ ಸಮಯದಲ್ಲಿ ಮೂರು ತಿಂಗಳು ಕೆಲಸ ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ “ದುಡಿಯೋಣ ಬಾ’ ಎಂಬ ಯೋಜನೆಜಾರಿಗೆ ತಂದಿದೆ. ಗುಳೆ ತಡೆಯುವ ಉದ್ದೇಶದಿಂದ ನರೇಗಾಯೋಜನೆಯಲ್ಲಿ ಸ್ಥಳೀಯವಾಗಿ ಕೆಲಸ ಒದಗಿಸಲು ಈಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆಯಿರಿ ಎಂದರು.
ಗ್ರಾಪಂ ಉಪಾಧ್ಯಕ್ಷರಾದ ಹುಲಿಗೆಮ್ಮ ಕಳಕಪ್ಪ, ಸದಸ್ಯರಾದಮಂಜುನಾಥ, ಹನುಮನಗೌಡ, ಸಿದ್ದಪ್ಪ, ವೆಂಕಟೇಶ, ಶಾಂತಮ್ಮವೆಂಕಟೇಶ, ಶ್ರೀನಿವಾಸ್, ಮಹಾದೇವಪ್ಪ, ಚಿದಾನಂದಪ್ಪ,ಗ್ರಾಪಂ ಸಿಬ್ಬಂದಿಗಳಾದ ಎಸ್ಡಿಎ ಮಂಜುನಾಥ್,ಹನುಮಂತ, ಶರಣಪ್ಪ, ಹನುಮೇಶ, ಶಂಕಲಿಂಗ, ಗಂಗಮ್ಮ, ಶಶಿಕಲಾ, ಮಂಜುನಾಥ ಸೇರಿದಂತೆ ಇನ್ನಿತರಿದ್ದರು.
ಬಂಡರಗಲ್ಲ ಗ್ರಾಮದಲ್ಲಿ 261 ಜನರಿಂದ ಕೆಲಸ :
ಕುಷ್ಟಗಿ: ತಾಲೂಕಿನ ಕಾಟಾಪುರ ಗ್ರಾಪಂ ವ್ಯಾಪ್ತಿಯ ಬಂಡರಗಲ್ಲ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಅಭಿಯಾನಕ್ಕೆ ಸಹಾಯಕ ನಿರ್ದೇಶಕ ವೆಂಕಟೇಶವಂದಾಲ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, 60ದಿನಗಳ ಕಾಲದ ಬೇಸಿಗೆ ಸಂದರ್ಭದಲ್ಲಿಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸನೀಡುವ ಉದ್ದೇಶದ ಹಿನ್ನೆಲೆಯಲ್ಲಿ ಈ ಅಭಿಯಾನ ಆಯೋಜಿಸಲಾಗಿದೆ.ಈ ಅಭಿಯಾನ ಮಾ. 15ರಿಂದ3 ತಿಂಗಳವರೆಗೆ ನಿರಂತರವಾಗಿ ನಡೆಯಲಿದೆ ಎಂದರು.
ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ ಮಾತನಾಡಿ,ಕಾಟಾಪೂರ ಗ್ರಾಪಂ ವ್ಯಾಪ್ತಿಯ ದುಡಿಯೋಣು ಬಾ ಅಭಿಯಾನ ಗುಳೆತಡೆಯುವ ಉದ್ದೇಶ ಹೊಂದಿದೆ. ಸದರಿ ಅಭಿಯಾನದಲ್ಲಿ 261 ಜನರು ಕೆಲಸ ಮಾಡುತ್ತಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಪಾವಿ, ಪಿಡಿಒ ಹರೀಶ ಮೆಣಸಿನಕಾಯಿ, ಗ್ರಾಪಂ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್