ರಮಾನಂದ ಸಂಪ್ರದಾಯದಂತೆ ರಾಮಾದಾಸ ಬಾಬಾ ಅಂತ್ಯಕ್ರಿಯೆ
Team Udayavani, Aug 17, 2022, 7:11 PM IST
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಪಂಪಾಸರೋವರದ ಅರ್ಚಕ ಮಹಾಂತ ರಾಮಾದಾಸ ಬಾಬಾ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ 5.35 ಕ್ಕೆ ರಾಮಾನಂದ ಸಂಪ್ರದಾಯದಂತೆ ಪಂಪಾಸರೋವರದ ಜಮೀನಿನಲ್ಲಿ ನೆರವೇರಿತು.
ಪ್ರಸ್ತುತ ವಿಜಯಲಕ್ಷ್ಮೀ ದೇಗುಲದಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ ಬಾಬಾ ಹಿಮಾಲಯ ವೃಷಿಕೇಶ ಪ್ರವಾಸ ಮೊಟಕುಗೊಳಿಸಿ ಪಂಪಾಸರೋವರಕ್ಕೆ ಆಗಮಿಸಿ ರಾಮಾದಾಸ ಬಾಬಾ ಅವರ ಕೊನೆಯ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಧುವನ, ಋಷಿಮುಖ, ವಾಲೀಕಿಲ್ಲಾ ಕ್ಷೇತ್ರದ ಸಾಧುಸಂತರು ಮಂತ್ರಘೋಷಣೆ ಹೇಳುವ ಮೂಲಕ ರಾಮಾದಾಸ ಬಾಬಾ ಅವರ ದೇಹಕ್ಕೆ ಅಗ್ನಿಸ್ಪರ್ಶ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಯು.ನಾಗರಾಜ, ಪಿಎಸ್ಐ ಮಂಜುನಾಥ, ಆನೆಗೊಂದಿ ರಾಜಮನೆತನದ ಲಲಿತಾರಾಣಿ, ಸಿದ್ದರಾಮಯ್ಯಸ್ವಾಮಿ, ಹರಿಹರದೇವರಾಯಲು, ಗೋವರ್ಧನರಾಜು, ಗ್ರಾ.ಪಂ.ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ, ಹೈದ್ರಾಬಾದ್,ಕೊಪ್ಪಳ, ಹೊಸಪೇಟೆ, ಗಂಗಾವತಿ, ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರು ಭಕ್ತರು ಹಾಗೂ ಸುತ್ತಲಿನ ಗ್ರಾಮಸ್ಥರಿದ್ದರು.