ತುಂಗಭದ್ರಾ ಪುಷ್ಕರಣೋತ್ಸವ: ಪಂಡಿತರ ಆಗಮನ; ಯಶಸ್ವಿ ತುಂಗಭದ್ರಾರತಿ !
Team Udayavani, Nov 20, 2020, 8:13 PM IST
ಗಂಗಾವತಿ: ತಾಲೂಕಿನ ಆನೆಗೊಂದಿ ಚಿಂತಾಮಣಿಮಠದ ಹತ್ತಿರ ತುಂಗಭದ್ರಾ ಪುಷ್ಕರಣೋತ್ಸವ ನಿಮಿತ್ತ ಶುಕ್ರವಾರ ಸಂಜೆ ತುಂಗಭದ್ರಾ ಆರತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಇಂದಿನಿಂದ ಆರಂಭವಾಗಿರುವ ತುಂಗಭದ್ರಾ ಪುಷ್ಕರಣೋತ್ಸವದ ನಿಮಿತ್ತ ಪುಷ್ಕರಣಾ ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ನ.20ರಿಂದ ಡಿ.01ರ ವರೆಗೆ ನಡೆಯಲಿದ್ದು ಪ್ರತಿ ದಿನ ಸಂಜೆ ತುಂಗಭದ್ರಾ ಆರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಪುಷ್ಕರಣೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಚೆನ್ನೈ ಮೂಲದ ಶ್ರೀ ಮಹಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥೆ ಮಾಡಿದೆ. ಚೆನ್ನೈ ಮಹಾನಗರದಿಂದ ಪುಷ್ಕರಣೋತ್ಸವ ಧಾರ್ಮಿಕ ಕಾರ್ಯಕ್ರಮ ನಡೆಸಲು ಪಂಡಿತರು ಆಗಮಿಸಿದ್ದಾರೆ.
ಇದನ್ನೂ ಓದಿ: ‘ಸುವರ್ಣ ಗ್ರಾಮ’ ಯೋಜನೆ ಪುನರಾರಂಭ ಚಿಂತನೆ: ಡಿಸಿಎಂ ಲಕ್ಷ್ಮಣ ಸವದಿ