ಗಂಗಾವತಿ : ಪ್ರಾಣಿಗಳನ್ನು ಹಿಂಸಿಸದಂತೆ ಬೆಳ್ಳಂಬೆಳಗ್ಗೆ ಬೀದಿಗಿಳಿದ ಪ್ರಾಣಿಪ್ರಿಯರು
ಸಸ್ಯಾಹಾರವೇ ಶ್ರೇಷ್ಠ ಜನಜಾಗೃತಿ
Team Udayavani, Sep 4, 2022, 9:05 AM IST
ಗಂಗಾವತಿ : ಪ್ರಾಣಿಗಳನ್ನು ಹಿಂಸಿಸಬೇಡಿ ಪ್ರಾಣಿಗಳ ಬಗ್ಗೆ ದಯೆ ಇರಲಿ, ಮಾಂಸ ಆಹಾರವನ್ನು ತ್ಯಾಗ ಮಾಡಿ ಸಾತ್ವಿಕ ಆಹಾರ ಸೇವಿಸುವ ಘೋಷಣೆಗಳೊಂದಿಗೆ ಪ್ರಾಣಿಪ್ರೀಯರು ಬೆಳ್ಳಂ ಬೆಳಿಗ್ಗೆಯೇ ಬೀದಿಗಿಳಿದು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದ ಮಳೆ ಮಲ್ಲೇಶ್ವರ(ಪಂಪಾನಗರ) ವೃತ್ತದ ಬಳಿ ಜರಗಿತು.
ಈ ಸಂದರ್ಭದಲ್ಲಿ ಜನಜಾಗೃತಿ ಸಂಘಟಕರಾದ ಲಲಿತಾ ನಾರಾಯಣ ಕಂದಗಲ್ ಮಾತನಾಡಿ ಮನುಷ್ಯ ಜನಿಸಿದಾಗ ಸಾತ್ವಿಕ ಆಹಾರದ ಮೇಲೆ ಅವಲಂಬನೆಯಾಗಿದೆ ನಂತರದ ದಿನಗಳಲ್ಲಿ ಮಾಂಸಾಹಾರ ಸೇವಿಸುವ ಪದ್ಧತಿ ರೂಢಿಸಿಕೊಂಡಿದ್ದಾರೆ .ಇದರಿಂದ ಪ್ರಾಣಿ ಹಿಂಸೆಯಾಗುತ್ತದೆ ಮಹಾತ್ಮಾಗಾಂಧಿ, ಮಹಾವೀರ, ಅಬ್ದುಲ್ ಕಲಾಂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಮಹಾನ್ ವ್ಯಕ್ತಿಗಳು ಸಾತ್ವಿಕವಾದ ಆಹಾರವನ್ನು ಸೇವಿಸುವ ರಾಯಭಾರಿಗಳಾಗಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಪ್ರಾಣಿ ಹಿಂಸೆ ಮಾಡದೆ ಸಸ್ಯಹಾರದ ಮೇಲೆ ಅವಲಂಬನೆ ಹಾಕಬೇಕು .ಸಾತ್ವಿಕ ಆಹಾರದಿಂದ ಮನುಷ್ಯನ ದೇಹವು ಪ್ರತಿಕ್ಷಣವೂ ಜಾಗೃತವಾಗಿದೆ.ಪಿರಾಮಿಡ್ ಹಾಗೂ ಎಲ್ಲಾ ಧ್ಯಾನಾಸಕ್ತ ಸಂಸ್ಥೆಗಳ ಸದಸ್ಯರು ಪ್ರತಿ ಭಾನುವಾರ ಸಸ್ಯಾಹಾರದ ಬಗ್ಗೆ ಜನಜಾಗೃತಿ ಮೂಡಿಸುವ ಮೆರವಣಿಗೆಯನ್ನು ನಗರದ ಪ್ರತಿ ವಾರ್ಡ್ ಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ಮಾಂಸಾಹಾರದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಸಣ್ಣ ಪ್ರಯತ್ನವಾಗಿದೆ. ಪ್ರತಿಯೊಬ್ಬರು ಮಾಂಸವನ್ನು ತ್ಯಾಗಮಾಡಿ ಸಸ್ಯಾಹಾರಿಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ನಾಗರಾಜ್ ಖಾದಿ, ಲಲಿತಾ ನಾರಾಯಣ್ ಕಂದಗಲ್, ಲಲಿತಾ ನಾರಾಯಣ ವಗ್ಗಾ, ರಾಜಗೋಪಾಲ ಗುರುಮೂರ್ತಿ, ಚಂದ್ರಪ್ಪ ಸೇರಿ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ