ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ
Team Udayavani, Oct 17, 2021, 12:40 PM IST
ಕೊಪ್ಪಳ: ನನಗೆ ರಾಜಕೀಯದಲ್ಲಿ 40 ವರ್ಷದ ಅನುಭವ ಇದೆ. ನಾನೂ 16 ಸಿಎಂ ಕಂಡಿದ್ದೇನೆ. ಅಂದಿನ ರಾಜಕಾರಣವೇ ಬೇರೆ. ಆದರೆ ಇಂದಿನ ರಾಜಕೀಯ ವ್ಯವಸ್ಥೆ ನನಗೆ ತೃಪ್ತಿ ಎಂದೆನಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಂದಿನ ರಾಜಕಾರಣದಲ್ಲಿ ನಾವು ಏನು ಮಾಡುತ್ತೇವೆ ಎಂದು ಜನರಿಗೆ ಹೇಳುತ್ತಿದ್ದೇವು. ಆದರೆ ಇಂದು ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಟೀಕೆ ಟಿಪ್ಪಣಿಗಳೆ ನಡೆಯುತ್ತಿವೆ ಎಂದು ಇಂದಿನ ರಾಜಕೀಯ ಟೀಕೆ ವಿಚಾರದ ಬಗ್ಗೆ ಮನದ ಮಾತು ವ್ಯಕ್ತಪಡಿಸಿದರು.
ಆರ್ ಎಸ್ಎಸ್ ಬಗ್ಗೆ ಎಚ್ ಡಿಕೆ ಹೇಳಿಕೆ ವೈಯಕ್ತಿಕ. ಅವರವರ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ರಾಜಕೀಯವನ್ನು ಮಾತನಾಡಲ್ಲ. ನಾನು ಎಲ್ಲ ಪಕ್ಷದವರಿಗೆ ಹೇಳುವುದಿಷ್ಟೆ, ಬರೀ ಟೀಕೆ ಮಾಡಬೇಡಿ. ಜನರ ವಿಶ್ವಾಸ ಗಳಿಸುವ ಕೆಲಸ ಮಾಡಿ. ಜನರ ಒಳಿತಿಗಾಗಿ ಸ್ಪಂದಿಸಿ ಎಂದರು.
ಇದನ್ನೂ ಓದಿ:ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಪರಿಣಾಮಕಾರಿ: ಡಿಸಿ
ವಿಪಕ್ಷ ನಾಯಕ ಸ್ಥಾನ ಪುಟಗೋಸಿ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಹಾಗೂ ವಿಪಕ್ಷ ಸ್ಥಾನ ಒಂದೇ ನಾಣ್ಯದ ಎರಡು ಮುಖಗಳು. ಎಲ್ಲರಿಗೂ ನಾನು ಹೇಳುವುದೊಂದೆ, ಯಾರೇ ಮಾತನಾಡಲಿ ವಿಚಾರ ಮಾಡಿ ಮಾತನಾಡಬೇಕು ಎಂದರು.
ಶಾಲೆಗಳನ್ನು ಆರಂಭಿಸಬೇಕು. ಮಕ್ಕಳು ಶಾಲೆ ಹಾದಿ ಮರೆತಿದ್ದಾರೆ. ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶಾಲೆ ಆರಂಭಿಸಬೇಕು. ಶಾಲೆ ನಡೆಯದಿದ್ದರೆ ತೊಂದರೆಯಾಗಲಿದೆ. ಶಿಕ್ಷಕರ ಕೊರತೆ ನೀಗಿಸಬೇಕು. ನಿಯಮ ಸರಳೀಕರಣ ಮಾಡಬೇಕು. ಎನ್ಇಪಿ ಚೆನ್ನಾಗಿದೆ. ನರ್ಸರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು. ಪಾಲಕರು, ಜನರನ್ನು ಸೇರಿಸಿ ಚರ್ಚೆ ಮಾಡಬೇಕು. ಹಿಂದಿನ ವರದಿ ಕ್ರೋಢೀಕರಿಸಿ ನೀತಿ ರೂಪಿಸಲಿ. ಅವಸರದಲ್ಲಿ ಜಾರಿ ಮಾಡುವ ಅಗತ್ಯವಿಲ್ಲ ಎಂದು ಹೊರಟ್ಟಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ