Koppal ನಾಳೆ ಬೆಂಗಳೂರಿನಲ್ಲಿ ಮಾತುಕತೆಗೆ ಅಹ್ವಾನ: ಸಂಗಣ್ಣ
Team Udayavani, Mar 22, 2024, 11:40 PM IST
ಕೊಪ್ಪಳ: ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ನನಗೇನೂ ನೋವಿಲ್ಲ. ಎಂಟೂ ಕ್ಷೇತ್ರದ ಜನರಿಗೆ ಆಗಿರುವ ಅನ್ಯಾಯದ ಕುರಿತು ವೇದನೆ ವ್ಯಕ್ತಪಡಿಸಿದ್ದಾರೆ. ಅದನ್ನು ನಾನು ನಾಯಕರಿಗೆ ತಿಳಿಸಿದ್ದೇನೆ. ಮಾ.24ರಂದು ಬೆಂಗಳೂರಿಗೆ ಮಾತುಕತೆಗೆ ಕರೆದಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನನ್ನ ಜತೆಗೆ ಹಲವು ನಾಯಕರು ಮಾತನಾಡಿ ದ್ದಾರೆ. ಮಾ.24ರಂದು ನಡೆಯುವ ಮಾತುಕತೆಗೆ 8 ಕ್ಷೇತ್ರಗಳ ಪ್ರಮುಖ ನಾಯಕ ರನ್ನೂ ಕರೆದುಕೊಂಡು ಹೋಗುತ್ತೇನೆ. ಸಭೆಯಲ್ಲಿ ಬಿಎಸ್ವೈ, ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಬೊಮ್ಮಾಯಿ ಇದ್ದರೆ ಮಾತ್ರ ಬರುವೆ ಎಂದು ಹೇಳಿದ್ದೇನೆ. ಒಂದು ವೇಳೆ ಅವರ್ಯಾರೂ ಇರದಿದ್ದರೆ ನಾನು ತೆರಳುವುದಿಲ್ಲ. ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನನ್ನನ್ನು ಪ್ರೀತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ನನಗೆ ಆಹ್ವಾನ ನೀಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವೆ. ಆದರೆ ನಾನು ಅವರ ಆಹ್ವಾನ ತಿರಸ್ಕರಿಸುತ್ತೇನೆ ಎಂದರು.
ಅರವಿಂದ ಬೆಲ್ಲದ ಭೇಟಿ
ಸಂಗಣ್ಣ ಅವರನ್ನು ಸಮಾಧಾನ ಮಾಡಲು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಶುಕ್ರವಾರ ಸಂಸದರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಸಂಸದರು ನಾಲ್ಕು ದಿನ ಕಾದು ನೋಡುವೆ ಎಂದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ರಾಜ್ಯ ನಾಯಕರು ಸಂಸದರನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದಾರೆ. ಗುರುವಾರ ರಾತ್ರಿ ಎಂಎಲ್ಸಿ ರವಿಕುಮಾರ ಭೇಟಿ ನೀಡಿ ಸಂಸದರ ಜತೆ ಮಾತುಕತೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ