Kushtagi; ತೊಟ್ಟಿಲಲ್ಲಿರುವ ಶಿಶುಗಳನ್ನು ಟಾರ್ಗೆಟ್ ಮಾಡುತ್ತಿರುವ ಕೋತಿ: ಆತಂಕ
Team Udayavani, Oct 14, 2023, 10:05 PM IST
ಕುಷ್ಟಗಿ: ತಾಲೂಕಿನ ಹಿರೇಮುಕರ್ತಿಹಾಳ ಗ್ರಾಮದಲ್ಲಿ ಅಂಗಳದಲ್ಲಿ ಆಡಿಕೊಂಡಿರುವ ಮಕ್ಕಳು, ತೊಟ್ಟಿಲಲ್ಲಿ ಮಲಗಿರುವ ಕಂದಮ್ಮಗಳಿಗೆ ಕೋತಿ ಕಚ್ಚುತ್ತಿದ್ದು ಗ್ರಾಮಸ್ಥರಲ್ಲಿಆತಂಕ ಹೆಚ್ಚಿದೆ.
ಕಳೆದ ನಾಲ್ಕೈದು ತಿಂಗಳ ಹಿಂದೆ ಅಂಗಳದಲ್ಲಿ ಆಡಿಕೊಂಡಿದ್ದ ಕೆಂಪು ಕೋತಿ, ಹಿರೇಮುಕರ್ತಿಹಾಳ ಗ್ರಾಮದ ತಿರುಪತಿ ಎಂಬುವರ ಮೊಮ್ಮನನ್ನು ಕಚ್ಚಿ ಗಾಯಗೊಳಿಸಿತ್ತು. ಇದಾದ ಬಳಿಕ ಅದೇ ಕೋತಿ ಶನಿವಾರ ಸಂಜೆ ತಿರುಪತಿ ಅವರ ಮೊಮ್ಮಗು, ತೊಟ್ಟಿಲಿನಲ್ಲಿ 4 ತಿಂಗಳ ಮಗು ವಿರುಪಾಪೂರ ಗ್ರಾಮದ ಶಿವಾನಿ ನಿರುಪಾದಿ ವಾಲ್ಮಿಕಿ ಯ ಪೃಷ್ಟ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.
ಮಗು ಶಿವಾನಿಯನ್ನು ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಈ ಹಿಂದೆ ಕೋತಿ ಕಚ್ಚಿದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ಅವರ ಗಮನಕ್ಕೆ ತಂದು ಕೋತಿಯನ್ನು ಹಿಡಿಯುವಂತೆ ಮನವಿ ಮಾಡಲಾಗಿತ್ತು. ಅಂತೆಯೇ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದ್ದರೂ ಪ್ರಯೋಜನೆ ಆಗಿಲ್ಲ. ಪದೇ ಪದೇ ಕೋತಿಯ ದಾಳಿ ನಿಯಂತ್ರಿಸುವಂತೆ ಮತ್ತೊಮ್ಮೆ ಗ್ರಾ.ಪಂ.ಪಿಡಿಒ ಅವರ ಗಮನಕ್ಕೆ ತರಲಾಗಿದ್ದು ಮಕ್ಕಳ ಮೇಲೇರಿಗಿ ಗಾಯಗೊಳಿಸುವ ವಿಲಕ್ಷಣ ಕೋತಿಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದಾರೆ. ಮಕ್ಕಳ ಮೇಲೆರೆಗುವ ವಿಲಕ್ಷಣ ಕೋತಿ ವರ್ತನೆಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ