Kushtagi:ನಜರ್ ಚೂಕ್ ನಿಂದ ಎನ್.ಎ. ಭೂಮಿ ಇನ್ನೊಬ್ಬರ ಹೆಸರಿಗೆ ; ಉಪನೊಂದಣಾಧಿಕಾರಿ ಕರಾಮತ್ತು


Team Udayavani, Oct 6, 2023, 9:44 AM IST

2-kushtagi

ಕುಷ್ಟಗಿ: ತಾಲೂಕಿನ ಕಂದಕೂರು ಗ್ರಾಮದಲ್ಲಿ 20 ಗುಂಟೆ ಎನ್.ಎ. ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿದ ಜಾಗವನ್ನು ಬೇರೊಬ್ಬರ ಹೆಸರಿಗೆ ಇಲ್ಲಿನ ಉಪ ನೊಂದಣಾಧಿಕಾರಿಗಳ ನಜರ್ ಚೂಕ್ ಹಾಗೂ ಕಾರ್ಯದ ಒತ್ತಡದಿಂದ ಇನ್ನೊಬ್ಬರ ಹೆಸರಿಗೆ ಅಕ್ರಮ ರೆಜಿಸ್ಟೇಷನ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಕಂದಕೂರು ಸೀಮಾದ ಸ.ನಂ. 130, ಬಿ ಹಿಸ್ಸಾ 20 ಗುಂಟೆ ಜಮೀನಿನಲ್ಲಿ ಈಗಾಗಲೇ 1984ರಲ್ಲಿ ಎನ್.ಎ. ಆಗಿದ್ದು, ಇದರಲ್ಲಿ 8 ಜನರ ಪೈಕಿ 5 ಜನ ಮನೆ ನಿರ್ಮಿಸಿಕೊಂಡಿದ್ದು ಮೂವರ ಹೆಸರಿನಲ್ಲಿ ನಿವೇಶನಗಳಿರುವುದು ವಾಸ್ತವ ಸ್ಥಿತಿ.  ಈರಪ್ಪ ಕಡಿವಾಲ, ಶರಣಪ್ಪ ಕಾಮನೂರು, ರುದ್ರಪ್ಪ ಚಕ್ರಸಾಲಿ, ಕೃಷ್ಟಚಾರ ಯಂಕಪ್ಪಾಚಾರಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಬಸವರಾಜ ತಾವರಗೇರಾ ಇವರ 2 ನಿವೇಶನ ಹಾಗೂ ಶರಣಪ್ಪ ಸಿಂಪಿಗೇರ 1 ನಿವೇಶನದ ಖಾಲಿ ಜಾಗೆ ಇದೆ. ಈ ಸ್ಥಿತಿಯಲ್ಲಿರುವ 20 ಗುಂಟೆ ಜಮೀನು ಕಳೆದ ಸೆ.21ರಂದು ಕುಷ್ಟಗಿ ಉಪ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ತರಾತುರಿಯಲ್ಲಿ ರೆಜಿಸ್ಟೇಶನ್ ಪ್ರಕ್ರಿಯೆ ನಡೆದಿದೆ.

ಇದಾದ ಏಳೆಂಟು ದಿನಗಳಲ್ಲಿ ಅಂದರೆ ಸೆ.29ರಂದು ಶರಣಬಸವ ಕುಟಗಮರಿ, ನಾಗರಾಜ ಹೊಟ್ಟೇರ್ ಎಂಬವರ ಹೆಸರಿನಲ್ಲಿ ಪಹಣಿ ಪತ್ರ ಸಿದ್ದವಾಗಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿವೇಶನದ ಹಕ್ಕುದಾರರು, ಇಲ್ಲಿನ  ಪ್ರಭಾರಿ ಉಪನೊಂದಣಾಧಿಕಾರಿ ನಾಗೇಂದ್ರಪ್ಪ ಮಣೂರು ಅವರನ್ನು ವಿಚಾರಿಸಿದರೆ ಕಣ್ತಪ್ಪಿನಿಂದ ಪ್ರಮಾದವಾಗಿರುವ ಎಂದು ದೂರುದಾರರ ಮುಂದೆ ಸಮಾಜಾಯಿಷಿ ತರಾತುರಿಯಲ್ಲಿ ಈ 20 ಗುಂಟೆ ಜಮೀನಿನ ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳಲು ಮುಂದಾಗಿರುವುದು ಸದರಿ ಜಮೀನಿನ ವಾರಸುದಾರರನ್ನು ಕೆರಳಿಸಿದೆ.

ಸ.ನಂ. 130 ಹಿಸ್ಸಾ ಬಿ 20 ಗುಂಟೆ ಕ್ಷೇತ್ರದ ಜಮೀನು 1984ರಲ್ಲಿ ಎನ್.ಎ. ಆಗಿರುವ ಪಹಣಿ ಕಲಂ 11 ರ ಋಣಗಳು ಕಾಲಂ ನಲ್ಲಿ ದಾಖಲಾಗಿದೆ. ಎನ್.ಎ. ಆಗಿರುವುದನ್ನು ಮರೆಮಾಚಿ ಸದರಿ ಜಮೀನಿನಲ್ಲಿ 5 ಮನೆಗಳು ಮೂರು ಖಾಲಿ ನಿವೇಶನಗಳು ಇದ್ದಾಗ್ಯೂ ಈ ಜಮೀನು ಖರೀಧಿಸಿ ವ್ಯವಸ್ಥಿತವಾಗಿ ಅಕ್ರಮವಾಗಿ ನೊಂದಣಿ ಮಾಡಿಸಿಕೊಂಡಿದ್ದಾರೆ.

ಮನೆಗಳಿರುವ ಜಮೀನು ಯಾವುದೇ ಕಾರಣಕ್ಕೂ ಪರಭಾರೆ ಮಾಡುವುದು ಅಸಿಂಧು ಆಗಿದ್ದಾಗ್ಯೂ ಉಪ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ರೆಜಿಸ್ಟೇಷನ್ ಸಂಧರ್ಭದಲ್ಲಿ ಕಂದಾಯ ಭೂಮಿ ಎಂದು ಅದೇ ಗ್ರಾಮದ ಇಬ್ಬರ ಹೆಸರಿಗೆ ನೊಂದಣಿಯನ್ನು ಟಿ. ಬಸವರಾಜ್, ಚನ್ನಮ್ಮ ಗುತ್ತೂರು, ಶಿವಪ್ಪ ಬಿಜಕಲ್, ಈರಪ್ಪ ಕಡಿವಾಲ, ಶರಣ್ಪಪ ಶಿವಸಿಂಪರ್, ಕಳಕಪ್ಪ ಕುಂಬಾರ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಉಪ ನೊಂದಣಾಧಿಕಾರಿ ದಾಖಲೆ ಪರಿಶೀಲಿಸದೇ ನೊಂದಣಿ ಮಾಡಿಸಿಕೊಂಡಿದ್ದು ಈ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನಮ್ಮ ಎಸ್ ಡಿಎ ರೇವಮ್ಮ ಶಿವಣಗಿ ಅವರು ಪ್ರಭಾರಿ ಸೇವೆಯಲ್ಲಿದ್ದಾಗ ಸದರಿ ಕಂದಾಯ ಕುಷ್ಕಿ ಭೂಮಿ  20 ಗುಂಟೆ ಜಮೀನು ಸಂಗಮ್ಮ ಪ್ರಭುಲಿಂಗಯ್ಯ ಹಿರೇಮಠ ಎಂಬುವರಿಂದ ಶರಣಪ್ಪ ಕುಟುಗಮರಿ, ನಾಗರಾಜ ಹೊಟ್ಟೇರ್ ಖರೀಧಿಸಿದ್ದು, ಸದರಿಯವರ ಹೆಸರಿಗೆ ರೆಜಿಸ್ಟೇಷನ್ ಆಗಿದೆ. ಕೆಲಸದ ಒತ್ತಡದಲ್ಲಿ ಋಣಭಾರ ಗಮನಿಸದೇ ಕಣ್ತಪ್ಪಿನಿಂದ ಆಗಿದೆ. ಇದೀಗ ಕಣ್ತಪ್ಪಿನ ಅರಿವು ಗಮನಕ್ಕೆ ಬಂದಿದ್ದು 46 ಎ ಅನ್ವಯ ಜಿಲ್ಲಾ ನೊಂದಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಅವರಿಂದ ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳುವೆ.

ಈ ಪ್ರಕರಣದಲ್ಲಿ ನೈಜ ಸ್ಥಿತಿ ಮರೆ ಮಾಚಲಾಗಿದೆ. ಖರೀದಿದಾರರು ಭೌತಿಕವಾಗಿ ಗೊತ್ತಾಗಿಯೇ ಸದರಿ ಜಮೀನು ಖರೀಧಿಸಿದ್ದು, ಖರೀಧಿದಾರರಿಗೆ ನೋಟೀಸ್ ಜಾರಿ ಮಾಡಿ, ಅವರಿಂದ ಸಂದಾವಾಗಬೇಕಾದ ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳುವೆ. –ನಾಗೆಂದ್ರಪ್ಪ ಮಣೂರು ಪ್ರಭಾರಿ ನೊಂದಣಾಧಿಕಾರಿ ಉಪ ನೊಂದಣಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.