ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ


Team Udayavani, Jun 27, 2022, 4:37 PM IST

ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

ದೋಟಿಹಾಳ: ಮಣ್ಣೆತ್ತಿನ ಅಮವಾಸ್ಯೆಗೆ ವಿಶೇಷತೆ ಇದೆ. ವರ್ಷದ 12 ಅಮವಾಸ್ಯೆಗಳಲ್ಲಿ ಬರುವ ಪ್ರಮುಖ ಅಮವಾಸ್ಯೆಗಳಲ್ಲಿ ಇದು ಒಂದು. ಇಲ್ಲಿಂದ ನೈಜ ಮಳೆಗಾಲ ಶುರುವಾಗುತ್ತದೆ ಎನ್ನವ ನಂಬಿಕೆ ರೈತರದು. ಉತ್ತರ ಕರ್ನಾಟಕದ ರೈತ ವರ್ಗಕ್ಕೆ ಮಣ್ಣೆತ್ತಿನ ಅಮವಾಸ್ಯೆ ಎಂದರೆ ಸಂಭ್ರಮವೋ ಸಂಭ್ರಮ.

ಹೌದು, ರೈತ ಬಿತ್ತನೆಗೆ ಕೈ ಹಾಕುವ ಮುನ್ನ ಕೃಷಿಗೆ ಆಧಾರ ಸ್ತಂಭವಾಗಿರವ, ತನ್ನ ಶ್ರಮದ ಬದುಕಿಗೆ ಹೆಗಲು ನೀಡಿದ ಎತ್ತುಗಳನ್ನು ಪೂಜಿಸುವ, ಆರಾಧಿಸುವ ವಿಶೇಷತೆ ಹೊಂದಿರುವ ಈ ಅಮವಾಸ್ಯೆವನ್ನು ಇಲ್ಲಿ ಸಂಭ್ರಮದೊಂದಿಗೆ ಹಬ್ಬದಂತೆ ಆಚರುಸುತ್ತಾರೆ. ರೈತರು ಹೆಗಲಿಗೆ ಹೆಗಲಕೊಟ್ಟು ಕೃಷಿ ಕಾಯಕದಲ್ಲಿ ಭಾಗಿಯಾಗುವ ರೈತನ ಮಿತ್ರ ಎನಿಸಿಕೊಂಡಿರುವ ಎತ್ತುಗಳಿಗೆ ಈ ಭಾಗದಲ್ಲಿ ವಿಶಿಷ್ಟ ಸ್ಥಾನ ಮಾನ ನೀಡಲಾಗಿದೆ. ಕಷ್ಟದಲ್ಲಿರುವ ಮನಷ್ಯನನ್ನು ಮೇಲೆತ್ತಿದ್ದು ಎತ್ತುಗಳು. ಭೂದೇವಿ ಹಾಗೂ ಎತ್ತು ಇರದೆ ಜೀವನವೇ ಇಲ್ಲ. ಮಣ್ಣಿಗೂ, ಎತ್ತಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿತ್ತಿನ ಅಮವಾಸ್ಯೆಯಂದು ಮಣ್ಣಿನ ಬಸವ ಮೂರ್ತಿಗಳನ್ನು ಪೂಜೆಗೈದಲ್ಲಿ ಸಕಾಲದಲ್ಲಿ ಮಳೆ, ಬೆಳೆಯಾಗಿ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಈ ಭಾಗದ ರೈತಾಪಿ ವರ್ಗದ್ದು. ಹೀಗಾಗಿ ಇದೇ ಜೂ:28-29ರಂದು ರೈತರು ಹಾಗೂ ಸಾರ್ವಜನಿಕರು ಮಣ್ಣಿನ ಎತ್ತುಗಳನ್ನು ತಂದು ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸುವುದು ಪ್ರತಿ ವರ್ಷದ ವಾಡಿಕೆ.

ಮಣ್ಣಿತ್ತಿನ ಅಮವಾಸ್ಯೆ ನಿಮಿತ್ತ ಗ್ರಾಮದ ಕುಂಬಾರರು ಬಸವ ಮೂರ್ತಿಗಳ ತಯಾರಿಸಿದ್ದಾರೆ. ಗ್ರಾಮ ಸುತ್ತಮುತ್ತಲ ಗ್ರಾಮಗಳಿಗೆ ಹಿಂದೆ ಹೋಗಿ ಮಾರಟ ಮಾಡಿ ಬರುತ್ತಾರೆ. ಕಳೆದ ಎರಡು ದಿನಗಳಿಂದ ಗ್ರಾಮ ಹಾಗೂ ಸುತ್ತಮುತ್ತಲ್ಲ ಗ್ರಾಮಗಳಿಲ್ಲಿ ಮಾರಟ ಮಾಡುತ್ತಾರೆ. ಜನರು ತಮಗೊಪ್ಪವ ಮಣ್ಣಿನ ಎತ್ತುಗಳನ್ನು ಮತ್ತು ಮಣ್ಣಿನಿಂದ ಮಾಡಿದ ಮೇವು ಹಾಕುವ ಗ್ವಾದಲಿಯನ್ನು ಕರಿದಿಸಿ ಮನೆಗೆ ತಂದು ದೇವರ ಜಗಿಲಿಯ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಹೋಳಿಗೆ, ಬೆಲ್ಲದ ಬೇಳೆ, ಕರಿ ಕಡುಬು ಮಾಡಿ ನೈವೇದ ಮಾಡುವರು. ಮಣ್ಣೆತ್ತಿಗೆ ನಮಸ್ಕರಿಸಿ ಭಕ್ತಿ-ಭಾವ ಮೆರೆಯುತ್ತಾರೆ.

ಇದನ್ನೂ ಓದಿ: ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ

ನಮ್ಮ ಸಂಸ್ಕೃತಿಯಲ್ಲಿ ಭೂಮಿಗೆ ಮಹತ್ವದ ಸ್ಥಾನವಿದೆ. ಅಷ್ಟೇ ಮಹತ್ವವನ್ನು ಎತ್ತುಗಳಿಗೂ ನೀಡಲಾಗಿದೆ. ಮೊದಲು ಮನುಷ್ಯನ ಕೈಹಿಡಿದಿದ್ದು ಭೂ ತಾಯಿ. ನಂತರದಲ್ಲಿ ಎತ್ತುಗಳು, ಹೀಗಾಗಿ ಮಣ್ಣೆತ್ತನ್ನು ಪೂಜೆ ಮಾಡಲಾಗುತ್ತದೆ. ಇದರಿಂದ ಎತ್ತುಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎನ್ನುವುದಕ್ಕೆ ಈ ಹಬ್ಬದ ಆಚರಿಸಲಾಗುತ್ತದೆ ಎನ್ನುತ್ತಾರೆ ಹಿರಿಯರು.

ಈ ಅಮಾವಾಸೆ ಆಚರಣೆಯಿಂದ ರೈತರ ಬದುಕು ಹಸನವಾಗಲಿದೆ ಎಂಬ ಪ್ರತೀತಿವಿದೆ. ಹಾಗಾಗಿ ಮಣ್ಣಿನಲ್ಲಿ ಎತ್ತನ್ನು ಮಾಡಿ ಪೂಜಿಸಿ ಧನ್ಯತೆ ಮೆರೆಯಲಾಗುತ್ತದೆ ಎಂಬುದು ಅನುಭವಿಗಳ ಮಾತು. ಇಲ್ಲಿ ಹಬ್ಬಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ, ರೈತರು ಮಾತ್ರವಲ್ಲದೆ ಸಾರ್ವಜನಿಕರು ಈ ಹಬ್ಬವನ್ನು ಭಕ್ತಿಯಿಂದ ಪೂಜಿಸಿ ಪುನೀತರಾಗುತ್ತಾರೆ.

ಒಟ್ಟಾರೆ ಜಗತ್ತು ಎಷ್ಟೆ ಆಧುನಿಕರಣಗೊಂಡರೂ, ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದರೂ, ಹಿರಿಯರು ಆಚರಿಸಿಕೊಂಡು ಬಂದಿರುವ ಆಚರಣೆ, ಸಂಸ್ಕೃತಿ, ಪರಂಪರೆಗೆ ಯಾವತ್ತೂ ಧಕ್ಕೆಯಾಗಿಲ್ಲ. ಆದರೆ, ಯಾಂತ್ರಿಕ ಯುವದ ಜಂಜಾಟದ ಬದುಕಿನಲ್ಲಿ ಕೆಲ ಹಬ್ಬಗಳುಕೊಂಚ ಮಂಕಾಗಿದರೂ ಅವು ಇಂದಿಗೂ ತನ್ನ ವಿಶಿಷ್ಟತೆ ಉಳಿಸಿಕೊಂಡು ಹೊಸ ಪೀಳಿಗೆಗೆ ಮುಂದುವರೆಸಿವೆ.

ಹಿರಿಯರು ಕಾಲದಂದಿಲೂ ನಮ್ಮ ಮನೆಯಲ್ಲಿ ಈ ಎತ್ತಿನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುವುದು ವಾಡಿಕೆಯಾಗಿದೆ. ಈಗ ಸಂಪ್ರದಾಯಗಳು ಕಡಿಮೆಯಾಗುತ್ತಿವೆ. ಎತ್ತಿನ ಮೂರ್ತಿಗಳ ಮಾರಾಟವು ಕಡಿಮೆಯಾಗಿದೆ. ಆದರೂ ಮೊದಲಿನಿಂದ ಬಂದ ರೂಢಿ ತಪ್ಪಿಸಲು ಆಗುತ್ತಿಲ್ಲ  ಶರಣಪ್ಪ ಕುಂಬಾರ ಗ್ರಾಮಸ್ಥ

ಹಿರಿಯರು ಆಚರಿಸಿಕೊಂಡು ಬಂದಿರುವ ಆಚರಣೆ, ಸಂಸ್ಕೃತಿ, ಪರಂಪರೆಗಳನ್ನು ಇಂದಿಗೂ ಆಚರಣೆ ಮಾಡಿಕೊಂಡು ಬಂದ್ದಿದೇವೆ.  ಪರಸಪ್ಪ ಗೌಡ್ರ,ಮಾಟೂರು ಗ್ರಾಮದ ರೈತ

 

-ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.