ದೋಟಿಹಾಳ: ಕಣ್ಮರೆಯಾಗುತ್ತಿದೆ ಹಳೆ ಕಾಲದ ಮೊಹರಂ ಹೆಜ್ಜೆ ಕುಣಿತ
Team Udayavani, Aug 9, 2022, 11:32 AM IST
ದೋಟಿಹಾಳ: ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾಂಧವ್ಯದ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಪ್ರಯುಕ್ತ ಗ್ರಾಮದ ಸುತ್ತ ಮುತ್ತ ಊರುಗಳಲ್ಲಿ ಹೆಜ್ಜೆ ಕುಣಿತ ಕಂಡು ಬರುತ್ತಿದ್ದವು. ಆದರೆ ಅವು ಹೀಗ ಕಣ್ಮರೆಯಾಗುತ್ತಿವೆ.
ಗ್ರಾಮದ ಮಕಳೇಪ್ಪ ಬಳೂಟಗಿ ಇವರು ಸುಮಾರ 20-25 ವರ್ಷಗಳಿಂದ ಮೊಹರಂ ಹಬ್ಬದ ದಿನಗಳಲ್ಲಿ 2-3 ದಿನಗಳ ಕಾಲ ತಮ್ಮ ತಂಡದೊಂದಿಗೆ ಗ್ರಾಮದ ಸುತ್ತಮುತ್ತಲ್ಲ ಗ್ರಾಮಗಳಾದ ಶಿರಗುಂಪಿ, ಬಳೂಟಗಿ, ಮೇಗೂರ, ದೋಟಿಹಾಳ, ಮುದೇನೂರ ಜುಮಲಾಪೂರ ಮತ್ತು ಇನ್ನಿತರ ಊರುಗಳಲ್ಲಿ ಸಂಚಾರಿ ಗೆಜ್ಜೆ ಕುಣಿತಗಳನ್ನು ಹಾಡುತ್ತಾರೆ. ತಾವು ಭೇಟಿ ಕೊಡುವ ಗ್ರಾಮಗಳ ಪ್ರತಿ ಮನೆ, ಅಂಗಡಿಗಳ ಮುಂದೆ ಹೆಜ್ಜೆ ಹಾಡುಗಳನ್ನು ಆಡಿ ಅವರಿಂದ ಹಬ್ಬದ ಖುಶಿಯಾಗಿ ಹಣವನ್ನು ಪಡೆಯುವ ಕಾಲ ಹಿಂದೇ ಇತ್ತು. ಆದರೆ ಈಗ ಇದು ಕಣ್ಮರೆಯಾಗುತ್ತಿದೆ.
ರಾಮಣ್ಣ ಬಳೂಟಗಿ ಅವರನ್ನು ಹೆಜ್ಜೆ ಕುಣಿತದ ಬಗ್ಗೆ ವಿಚಾರಿಸಿದಾಗ, ಹಿರಿಯರು ಹಿಂದಿನಿಂದ ಈ ಪದ್ದತಿಯನ್ನು ಮಾಡಿಕೊಂಡು ಬಂದಿರುವುದರಿಂದ ನಾವು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ಹೆಜ್ಜೆ ಕುಣಿತದಲ್ಲಿ ಸುಮಾರು ಹತ್ತರಿಂದ ಹದಿನೈದು ಜನರು ಇದ್ದು ಹಬ್ಬದ 3-4 ದಿನಗಳಕಾಲ ನಮ್ಮ ಸುತ್ತಮುತ್ತಲಿನ ಪ್ರದೇಶಗಲ್ಲಿ ಆಟವಾಡಿ ಬಂದ ಹಣದಿಂದ ಹಬ್ಬವನ್ನು ಆಚರಿಸುತ್ತೇವೆ. ನಮ್ಮ ಭಾಗದಲ್ಲಿ ಹಿಂದೆ 3-4 ಹೆಜ್ಜೆ ಕುಣಿತದ ತಂಡಗಳು ಇದ್ದವು ಆದರೆ ಈಗ ಅವು ಕಡಿಮೆಯಾಗಿವೆ, ಕಾರಣ ಕುಣಿತದಲ್ಲಿ ನಮಗೆ ಯಾವ ಲಾಭವು ಬರುವುದಿಲ್ಲ ಕೇವಲ ಇದು ಹಿಂದಿನ ಹಿರಿಯರು ಆಡಿಕೊಂಡು ಬಂದ ಕಾರಣದಿಂದಾಗಿ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ ಹೀಗಿನ ಯುವಕರು ಆಧುನಿಕ ಜಗತ್ತಿಗೆ ಮಾರು ಹೋಗಿದ್ದು ಇಂಥ ಹಳೆಯ ಸಂಪ್ರದಾಯದ ಪದ್ದತಿಗಳು ಅವನತಿಯತ್ತ ಸಾಗಿದೆ ಎಂದರು.
-ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?