Navaratri: ಬನ್ನಿ ಮಹಾಕಾಳಿಗೆ ನವರಾತ್ರಿಯ ವಿಶೇಷ ಮೌನವೃತ


Team Udayavani, Oct 16, 2023, 12:55 PM IST

6-dotihala

ದೋಟಿಹಾಳ: ನವರಾತ್ರಿ ಆರಂಭವಾದ ಪ್ರಯುಕ್ತ ದೋಟಿಹಾಳ, ಕೇಸೂರ ಗ್ರಾಮಗಳ ಮಹಿಳೆಯರು ಮತ್ತು ಮಕ್ಕಳು ಆಶ್ವೀಜ ಮಾಸದ ನವರಾತ್ರಿ ಹಬ್ಬದಲ್ಲಿ ವಿಶಿಷ್ಠವಾದ ಮೌನಾಚರಣೆಯೊಂದನ್ನು ಹಲವು ವರ್ಷಗಳಿಂದ ಆಚರಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಮಹಿಳೆಯರು ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಮೌನವಾಗಿ ಬನ್ನಿ ಮಹಾಕಾಳಿ ಕಟ್ಟೆಗೆ ಸುಮಾರ ನೂರಕ್ಕೂ ಹೆಚ್ಚು ಮಹಿಳೆಯರು ಹೋಗಿ ಪೂಜೆ ಸಲ್ಲಿಸುವ ವಿಶೇಷವಾದ ಮೌನವೃತಾಚರಣೆ ಆ. 15ರ ರವಿವಾರದಿಂದ ಆರಂಭವಾಗಿದೆ. ಸೋಮವಾರ ಬೆಳಗಿನ ಜಾವ ಗ್ರಾಮದಲ್ಲಿ ಮಹಿಳೆಯರು ಬೆಳಗಿನ ಮೌನವಾಗಿ ಬನ್ನಿ ಮಹಾಕಾಳಿ ಕಟ್ಟೆಗೆ ಆಚರಿಸುತ್ತಿರುವುದು ಕಂಡು ಬಂತು.

ಆಚರಣೆ ಕ್ರಮ: ಆಶ್ವೀಜ ಮಾಸದ ನವರಾತ್ರಿಯ ಪ್ರತಿದಿನ ಗ್ರಾಮದ ಯುವತಿಯರು, ಮಹಿಳೆಯರು, ಮತ್ತು ಮಕ್ಕಳು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕಸ ಗೂಡಿಸಿ, ಮನೆ ತೊಳೆದು  ದೇವರ ಕೋಣೆಯಲ್ಲಿ ರಂಗೋಲಿ ಹಾಕಿ ಶೃಂಗಾರ ಮಾಡಿ ಮಾತನಾಡದೆ ಸ್ನಾನ ಮಾಡಿ ಮಡಿವಂತಿಕೆಯಿಂದ ಮನೆ ದೇವರಿಗೆ ದೀಪ ಹಚ್ಚಿ ಗುಂಪು ಗುಂಪಾಗಿ ಮಂಬ್ಬುಕತ್ತಲಲ್ಲಿ ಕೈಯಲ್ಲಿ ಹೂ-ಕಾಯಿ, ಕುಂಕುಮ ಹಣ್ಣು ಹಂಪಲಗಳೊಂದಿಗೆ ಗ್ರಾಮದಲ್ಲಿರುವ ಬನ್ನಿ ಮಹಾಕಾಳಿ ಕಟ್ಟೆಗೆ ಯಾರೊಂದಿಗೂ ಮಾತನಾಡದೆ ತೆರಳಿ ಪೂಜೆ ಸಲ್ಲಿಸುತ್ತಾರೆ.

ಅಕ್ಕಪಕ್ಕ ಜನರಿದ್ದರೂ ಪರಸ್ಪರ ಮಾತನಾಡದೆ ಕತ್ತಲಲ್ಲಿ ಮೌನವಾಗಿ ಹೆಜ್ಜೆಹಾಕುತ್ತಾರೆ. ಬನ್ನಿಕಟ್ಟೆಗೆ ಹೋಗಿ ಪೂಜೆ ಸಲ್ಲಿಸಿ ತಮ್ಮ ತಮ್ಮ ಪ್ರಾರ್ಥನೆ(ಹರಕೆ)ಯನ್ನು ದೇವರಿಗೆ ಸಲ್ಲಿಸುತ್ತಾರೆ. ಬನ್ನಿಕಟ್ಟೆಗೆ ಇದೆ ರೀತಿ ಮೌನ ಆಚರಿಸಲು ಬರುವ ತಮ್ಮ ಗೆಳತಿಯರೊಂದಿಗೂ ಅಲ್ಲಿ ಮಾತನಾಡುವುದಿಲ್ಲ. ಪೂಜೆ ಮುಗಿಸಿಕೊಂಡು ಮನೆಗೆ ಮರಳಿ ಬಂದ ನಂತರವೇ ಮೌನ ಬಿಟ್ಟು ಮಾತನಾಡುತ್ತಾರೆ.

ನಂಬಿಕೆ: ಬ್ರಾಹ್ಮಿ ಮಹೂರ್ತದಲ್ಲಿ ಮೌನವೃತ ಆಚರಿಸಿ ಬನ್ನಿಮಹಾಕಾಳಿಗೆ ಪೂಜೆ ಸಲ್ಲಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ಹಿಂದೂ ಧರ್ಮದ ಶ್ರೇಷ್ಟವಾದ ನಂಬಿಕೆಯಾಗಿದೆ. ಈ ದಿನಗಳಂದು ಬನ್ನಿಮಹಾಕಾಳಿಗೆ ಹರಕೆ ಕಟ್ಟುವುದರಿಂದ ಖಂಡಿತವಾಗಿ ಒಳ್ಳೆಯದಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ.

ಈ ಮೌನವೃತಾಚರಣೆ ಈ ಗ್ರಾಮಗಳಲ್ಲಿ ಸುಮಾರು 15-20 ವರ್ಷಗಳಿಂದ ಆಚರಣೆಯಲ್ಲಿದೆ. ಈ ವೃತಾಚರಣೆಯಿಂದ ಗ್ರಾಮದ ಹಲವಾರು ಜನರಿಗೆ ಒಳಿತಾಗಿರುವ ಉದಾಹರಣೆಗಳಿವೆ. ಮಹಿಳೆಯರು ತಮ್ಮ ಗಂಡಂದಿರ ಒಳಿತಿಗಾಗಿ ಪೂಜೆ ಸಲ್ಲಿಸಿದರೇ, ಯುವತಿಯರು ಕಂಕಣಭಾಗ್ಯ ದೊರೆತು ಉತ್ತಮ ಜೀವನ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಇನ್ನೂ ಮಕ್ಕಳು ಒಳ್ಳೆಯ ವಿಧ್ಯಾಬ್ಯಾಸ ತಮ್ಮದಾಗಲಿ ಎಂದು ಪ್ರಾರ್ಥಿಸುತ್ತಾರೆ.

ಮೊದಲೆಲ್ಲಾ ಕೆಲವೇ ಕೆಲವು ಜನರಿಂದ ಪ್ರಾರಂಭವಾದ ಈ ಆಚರಣೆ ಬರಬರುತ್ತಾ ನಂಬಿಕೆ ಬಲವಾದ ಕಾರಣ ಊರಿನ ಪ್ರತಿಮನೆಯಿಂದ ಒಬ್ಬರಾದರೂ ಮೌನಾಚರಣೆ ಮೂಲಕ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.

ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.