Polluted Water ಮೃತ ಬಾಲಕಿಯ ಮನೆಗೆ ಸಚಿವ ತಂಗಡಗಿ ಭೇಟಿ
ಪಾಲಕರಿಗೆ ಕೈಮುಗಿದು ಸಾಂತ್ವನ ಹೇಳಿದ ಸಚಿವರು
Team Udayavani, Jun 11, 2023, 10:54 PM IST
ದೋಟಿಹಾಳ: ಸಮೀಪದ ಬಿಜಕಲ್ ಗ್ರಾಮದಲ್ಲಿ ಕಳೆದ ಗುರುವಾರ ಕಲುಷಿತ ನೀರು ಸೇವನೆಯಿಂದ ಹತ್ತು ವರ್ಷದ ಬಾಲಕಿಯ ನಿರ್ಮಲಾ ಈರಪ್ಪ ನಿರಲೂಟಿ ವಾಂತಿ ಭೇಧಿಯಿಂದ ಮೃತಪಟ್ಟ ಬಾಲಕಿಯ ಮನೆಗೆ ರವಿವಾರ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ತಾಲ್ಲೂಕಿನ ಬಿಜಕಲ್ ಗ್ರಾಮದಲ್ಲಿ ಇತ್ತೀಚಿಗೆ ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಬಾಲಕಿ ನಿರ್ಮಲಾ ನಿರಲೂಟಿ ಮನೆಗೆ ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಸಚಿವ ಶಿವರಾಜ ತಂಗಡಗಿ ಅವರು ಕುಟುಂಬಸ್ಥರೊಡನೆ ಮಾತನಾಡಿ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಈ ವೇಳೆ ಮೃತಪಟ್ಟ ಬಾಲಕಿಯ ತಂದೆ ಈರಪ್ಪ ನಿರಲೂಟಿ ಅವರು ಮಾತನಾಡಿ, ನಾವು ಬಡವರು, ದುಡಿಯಲು ನಗರಕ್ಕೆ ಹೋದಾಗ ಈ ಘಟನೆ ನಡೆದ್ದಿದೆ. ನನ್ನ ಮಗಳ ಸಾವಿಗೆ ಮೂಲ ಕಾರಣವಾಗಿದ್ದು ಜೆಜೆಎಮ್ ಕಾಮಗಾರಿಯ.!! ಅವರು ಗ್ರಾಮದಲ್ಲಿ ಹಾಕಿರುವ ಪೈಪ್ಲೈನ್ ಕಾಮಗಾರಿ ಕಳೆಪ ಕಾಮಗಾರಿ ಮಾಡಿದು. ಇವರ ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದಾಳೆ ನನಗೆ ಆದ ಅನ್ಯಾಯವು ಬೇರೆ ಯಾರಿಗೂ ಆಗುವುದು ಬೇಡ..! ಇಂತಹ ಪ್ರಕರಣ ಮತ್ತೊಂದು ಗ್ರಾಮದಲ್ಲಿ ಆಗುವ ಮೊದಲು ಈ ಜೆಜೆಎಮ್ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಿ ಎಂದು ಪಾಲಕರು ಕಣ್ಣೀರು ಹಾಕಿದರು.
ಶಾಲೆಗಳು ಆರಂಭವಾದ ಕಾರಣ ಶಾಲೆಗೆ ಹೊಗಲು ಸಂಬಂಧಿಕರ ಮನೆಗೆ ಬಂದ್ದಿದಾಳೆ. 2-3 ದಿನಗಳ ಕಾಲ ಶಾಲೆಗೆ ಹೋಗಿ ಬಂದಿದ್ದಾಳೆ. ಆದರೆ ಬುಧವಾರ ರಾತ್ರಿ ವಾಂತಿ ಭೇದಿ ಹೆಚ್ಚಾಗಿ ಇವಳ ಸಾವಿಗೆ ಕಾರಣವಾಗಿದೆ ಎಂದು ಸಚಿವರಿಗೆ ಮತ್ತು ಶಾಸಕರಿಗೆ ಪಾಲಕರು ಮಾಹಿತಿ ನೀಡಿದರು.
ಇದೇ ವೇಳೆ ಗ್ರಾಮಸ್ಥರು ಮಾತನಾಡಿ, ನಮ್ಮ ಗ್ರಾಮದಲ್ಲಿ ಜೆಜೆಎಮ್ ಅವರು ಕಳಪೆ ಕಾಮಗಾರಿಯನ್ನು ಮಾಡಿದ್ದಾರೆ. ಕಾಮಗಾರಿಯ ಪೈಪುಗಳನ್ನು ನೆಲದ ಮೇಲ್ಭಾಗದಲ್ಲಿ ಹಾಕಿದ್ದಾರೆ. ಇದರ ಮೇಲೆ ವಾಹನಗಳು ಅಡ್ಡಾಡುತ್ತಿರುವಾಗ ಪೈಪುಗಳು ಹೊಡೆಯುತ್ತಿವೆ. ಹೀಗಾಗಿ ಕಳಪೆ ಕಾಮಗಾರಿ ಮಾಡಿದ ಜೆಜೆಎಮ್ ಅಧಿಕಾರಿಗಳು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಇಷ್ಟೇಲಾ ಸಮಸ್ಯೆಗೆ ಮುಖ್ಯವಾಗಿ ಜೆಜಿಎಂ ಕಾಮಗಾರಿಯೇ ಇದಕ್ಕೆ ಕಾರಣವಾಗಿದೆ ಇವರು ವಿರುದ್ದ ಕಠಿಣ ಕ್ರಮಕೈಗೊಳ್ಳಿ ಎಂದು ಗ್ರಾಮಸ್ಥರು ಸಚಿವರಿಗೆ ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಸುಂದರೇಶ ಬಾಬು, ಸಿಇಓ ರಾಹುಲ್ ರತ್ನಮ್ ಪಾಂಡೆ, ಡಿಹೆಚ್ಓ. ಡಾ.ಅಲಕಾನಂದ ಮಳಗಿ, ತಾಪಂ ಇಒ ಶಿವಪ್ಪ ಸುಭೆದಾರ, ಪಿಡಿಓ ನಾಗೇಶ ಅವರಿಗೆ ಈ ಪ್ರಕರಣದ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಸೂಚಿಸಿದರು.
ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಮಾಲತಿ ನಾಯಕ, ಸೇರಿದಂತೆ ಇತರರು ಇದ್ದರು.
ಹೀಗಾಗಲೇ ಜೆಜೆಎಮ್ ಕಾಮಗಾರಿಗಳ ಬಗ್ಗೆ ಗ್ರಾಮದಲ್ಲಿ ಸಂಚರಿಸಿ ಪರಿಶೀಲನೆ ಮಾಡಿದೇನೆ. ಈ ವೇಳೆ ಕಾಮಗಾರಿ ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಆಗಿರುವುದು ಕಂಡುಬಂದಿದ್ದು ಅವರಿಗೆ ನೋಟಿಸ್ ನೀಡಿದ್ದೇನೆ ಎಂದು ಸಚಿವರಿಗೆ ಸಿಇಓ ರಾಹುಲ್ ರತ್ನಮ್ ಪಾಂಡೆ ಅವರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ