ಮಳೆ ಕೊರತೆ: ಆತಂಕದಲ್ಲಿ ಭತ್ತ ಬೆಳೆಗಾರರು
Team Udayavani, Jul 28, 2019, 4:34 PM IST
ಕಾರಟಗಿ: ಪಟ್ಟಣದ ಪನ್ನಾಪೂರ ರಸ್ತೆಯಲ್ಲಿ ಬೋರ್ವೆಲ್ ಹೊಂದಿದ ರೈತರು ಗದ್ದೆಯಲ್ಲಿ ಹಾಕಿರುವ ಭತ್ತದ ಸಸಿಗಳು.
ಕಾರಟಗಿ: ಸಕಾಲಕ್ಕೆ ಸಮರ್ಪಕ ಮಳೆಯಿಲ್ಲದೆ ಭತ್ತ ನಾಟಿ ಮಾಡುವ ಹಂತ ಬಂದರೂ ಕಾಲುವೆಗೆ ನೀರು ಹರಿಸದಿರುವುದಕ್ಕೆ ರೈತರು ತೀವ್ರ ಆತಂಕಗೊಂಡಿದ್ದಾರೆ.
ಸಮರ್ಪಕ ಮಳೆ ಬಂದಿದ್ದರೆ ಈಗಾಗಲೇ ಟಿಬಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಜಲಾಶಯ ತುಂಬುತ್ತಿಲ್ಲ. ಜಲಾಶಯದ ನೀರನ್ನೇ ಅವಲಂಬಿಸಿರುವ ಎಡಂದಡೆ ರೈತರು ಸಂಕಷ್ಟದ ಸ್ಥಿತಿ ಎದುರಿಸಬೇಕಾಗಿದೆ. ಕಾಲುವೆಗೆ ನೀರು ಬರುವ ನೀರಿಕ್ಷೆಯಲ್ಲಿಯೇ ರೈತರು ಭತ್ತದ ಸಸಿ ನಾಟಿಗೆ ಸಜ್ಜಾಗಿದ್ದರು. ಆದರೆ ನೀರಿಲ್ಲದೇ ರೈತರು ಭತ್ತ ನಾಟಿ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ.ಕಾರಟಗಿ ಹೋಬಳಿ ವ್ಯಾಪ್ತಿಯಲ್ಲಿ ಬೋರ್ವೆಲ್ ಹೊಂದಿರುವ ರೈತರು ಈಗಾಗಲೇ ಸಸಿ ಮಡಿ ಹಾಕಿ ಭತ್ತ ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಕಾಲುವೆ ನೀರು ಅವಲಂಭಿಸಿದ ರೈತರು ನೀರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ವಾರ ಜಾನುವಾರುಗಳಿಗಾಗಿ ಕುಡಿಯಲು ಎಡದಂಡೆ ನಾಲೆಗೆ ನೀರು ಬಿಡಲಾಗಿದೆ. ಆದರೆ ವಿತರಣಾ ಕಾಲುವೆಗೆ ಮಾತ್ರ ಇವರೆಗೂ ನೀರು ಹರಿಬಿಟ್ಟಿಲ್ಲ. ಒಲಾಶಯದಲ್ಲಿ ಒಳಹರಿವು ಸಣ್ಣ ಪ್ರಮಾಣದಲ್ಲಿ ಶುರುವಾಗಿದೆ. ಆದರೆ 31ನೇ ವಿತರಣಾ ನಾಲೆಗೆ ನೀರು ಬರಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಸಸಿಮಡಿ ಹಾಕಿ ಈಗಾಗಲೇ ದಿನಗಳು ಕಳೆದಿವೆ. ಅವಧಿ ಮೀರಿದರೆ ಸಸಿಮಡಿ ನಾಟಿ ಮಾಡಲು ಆಗುವುದಿಲ್ಲ. ಹೀಗೆ ರೈತರಿಗೆ ಪ್ರತಿ ವರ್ಷವೂ ಒಂದಿಲ್ಲೊಂದು ಸಮಸ್ಯೆ ಅನುಭವಿಸಬೇಕಾಗಿದೆ. ಸಸಿಮಡಿ ಹಾಕಲು. ಕ್ರೀಮಿನಾಶಕ, ರಸಗೊಬ್ಬರ ಸೇರಿ ಪ್ರತಿ ಒಂದು ಚೀಲ ಭತ್ತಕ್ಕೆ 8ರಿಂದ 10 ಸಾವಿರ ರೂ. ಖರ್ಚಾಗುತ್ತದೆ. ಸಕಾಲಕ್ಕೆ ಮಳೆ ಅಥವಾ ಕಾಲುವೆಗೆ ನೀರು ಬಂದರೆ ಯಾವುದು ತೊಂದರೆಯಾಗುವುದಿಲ್ಲ ಎನ್ನುತ್ತಾರೆ ರೈತ ಬುಡ್ಡನಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು