ಹಾಸ್ಟೆಲ್ಗೆ ಪರೀಕ್ಷಾರ್ಥಿಗಳ ಪರದಾಟ
Team Udayavani, Apr 25, 2021, 2:11 PM IST
ಕೊಪ್ಪಳ: ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜುವಿದ್ಯಾರ್ಥಿಗಳ ಪರೀಕ್ಷೆಯು ಆರಂಭವಾಗಿವೆ.ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಹಾಸ್ಟೆಲ್ಗಳು ಬಂದ್ ಆಗಿದ್ದರಿಂದ ವಸತಿ ನಿಲಯದವಿದ್ಯಾರ್ಥಿಗಳು ಉಳಿದುಕೊಳ್ಳಲು ಜಾಗವಿಲ್ಲದೇಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರವು ಪರೀಕ್ಷಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳಲ್ಲಿ ವಾಸ್ತವ್ಯಕ್ಕೆ ಅವಕಾಶನೀಡುವಂತೆ ಆದೇಶ ಮಾಡಿದ್ದರೂ ಜಿಲ್ಲೆಯಲ್ಲಿಯಾವ ಹಾಸ್ಟೆಲ್ಗಳೂ ತೆರೆದಿಲ್ಲ.
ಜಿಲ್ಲೆಯ ತಳಕಲ್ ಹಾಗೂ ಗಂಗಾವತಿಯಲ್ಲಿಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ.ಇಲ್ಲಿ ಹಲವು ವಿದ್ಯಾರ್ಥಿಗಳು ದಾಖಲಾತಿ ಪಡೆದುಬಿಸಿಎಂ, ಸಮಾಜ ಕಲ್ಯಾಣ ಹಾಗೂ ಅಲ್ಪ ಸಂಖ್ಯಾತರಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಪ್ರವೇಶಾತಿಪಡೆದು ಅಭ್ಯಾಸ ಮಾಡುತ್ತಿದ್ದರು. ಆದರೆ ಕೋವಿಡ್ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಹಾಸ್ಟೆಲ್ಗಳನ್ನುಬಂದ್ ಮಾಡುವಂತೆ ಈಚೆಗೆ ಆದೇಶ ಮಾಡಿದ್ದರಿಂದಜಿಲ್ಲೆಯಲ್ಲಿ ಎಲ್ಲ ಹಾಸ್ಟೆಲ್ಗಳನ್ನು ಬಂದ್ ಮಾಡಿವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.
ಆದರೆ ಬೆಳಗಾವಿ ವಿಟಿಯು ವ್ಯಾಪ್ತಿಯ ಸರ್ಕಾರಿಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ವಿವಿಧಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗಿವೆ. ಆದರೆಹಾಸ್ಟೆಲ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲುಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನರಿತು ಉನ್ನತ ಶಿಕ್ಷಣ ಇಲಾಖೆ ಪರೀಕ್ಷೆಇರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿವಾಸ್ತವ್ಯಕ್ಕೆ ಅವಕಾಶ ನೀಡುವಂತೆ ಆದೇಶಮಾಡಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಹಾಸ್ಟೆಲ್ಆರಂಭಿಸಿಲ್ಲ.
ಪರೀಕ್ಷಾ ವಿದ್ಯಾರ್ಥಿಗಳಿಗೂ ವಸತಿನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶ ಇಲ್ಲದಂತಾಗಿದೆ.ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾತ್ರಪರೀಕ್ಷೆ ಬರೆಯುವುದು ಹೇಗೆ ಎಂದು ಚಿಂತನೆಮಾಡುವಂತಾಗಿದೆ. ತಮ್ಮ ಊರಿನಿಂದ ನಿತ್ಯ ಪರೀಕ್ಷೆಹಾಜರಾಗಲು ತೊಂದರೆಯಾಗುತ್ತಿದ್ದು, ಹಾಗಾಗಿನಗರ ಪ್ರದೇಶದಲ್ಲೇ ಸಂಬಂಧಿ ಕರ ಮನೆಯಲ್ಲಿ,ಸ್ನೇಹಿತರ ರೂಂಗಳಲ್ಲಿ ಹಾಗೂ ಪಿಜಿಗಳಲ್ಲಿ ಹಣ ಪಾವತಿಮಾಡಿ ವಾಸ್ತವ್ಯ ಮಾಡಿ ಪರೀಕ್ಷೆ ಬರೆಯುವಂತಸಂದಿಗ್ಧ ಸ್ಥಿತಿ ಎದುರಾಗಿದೆ.
ಸರ್ಕಾರವು ಪರೀಕ್ಷಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ವಾಸ್ತವ್ಯಕ್ಕೆ ಅವಕಾಶನೀಡುವಂತೆ ಮರು ಆದೇಶ ಮಾಡಿದ್ದರೂ ಜಿಲ್ಲೆಯಲ್ಲಿಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಹಾಸ್ಟೆಲ್ಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿಲ್ಲ. ಸಮಾಜಕಲ್ಯಾಣ ಇಲಾಖೆಯಡಿ ಹಾಸ್ಟೆಲ್ನಲ್ಲಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎನ್ನುವಮಾತು ಕೇಳಿ ಬಂದಿದ್ದರೂ ಎಲ್ಲಿಯೂ ಹಾಸ್ಟೆಲ್ಆರಂಭಿಸಿಲ್ಲ.
ಇನ್ನೂ ಬಿಸಿಎಂ ಇಲಾಖೆಯಡಿಯಹಾಸ್ಟೆಲ್ನಲ್ಲಿ ಗಂಗಾವತಿಯಲ್ಲಿ ಬಿಸಿಎಂ ಹಾಸ್ಟೆಲ್ಗಳಲ್ಲಿ ಈಚೆಗೆ ಕೆಲವು ವಿದ್ಯಾರ್ಥಿಗಳಿಗೆ ಕೋವಿಡ್ದೃಢಪಟ್ಟಿದೆ. ಇದಲ್ಲದೇ ಪ್ರಾಥಮಿಕ ಸಂಪರ್ಕಿತವಿದ್ಯಾರ್ಥಿಗಳನ್ನು ಇನ್ನೊಂದು ಹಾಸ್ಟೆಲ್ನಲ್ಲಿಐಸೋಲೇಷನ್ ಮಾಡಲಾಗಿದೆ. ಹಾಗಾಗಿ ಬಿಸಿಎಂಇಲಾಖೆಯಲ್ಲೂ ಪರೀಕ್ಷಾ ವಿದ್ಯಾರ್ಥಿಗಳ ಪ್ರವೇಶಾತಿಗೆಇಲಾಖೆ ಅ ಧಿಕಾರಿಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ.ಸೋಮವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ವಿಟಿಯು ಪರೀಕ್ಷೆಯನ್ನು ಮುಂದೂಡದೇಇರುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ.ಹಾಸ್ಟೆಲ್ನಲ್ಲಿ ಅಭ್ಯಾಸ ಮಾಡಿ ಪರೀಕ್ಷೆ ಬರೆಯಬೇಕಾದವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ವಾಸ್ತವ್ಯ ಇಲ್ಲದೇತುಂಬ ಸಮಸ್ಯೆ ಎದುರಾಗಿದೆ. ಕೂಡಲೇ ಹಾಸ್ಟೆಲ್ಗಳನ್ನು ಆರಂಭಿಸಿ, ಪರೀûಾ ವಿದ್ಯಾರ್ಥಿಗಳಿಗೆ ಅವಕಾಶಕಲ್ಪಿಸಬೇಕೆನ್ನುವುದು ವಿದ್ಯಾರ್ಥಿ ಸಂಘಟನೆಗಳಒತ್ತಾಯವಾಗಿದೆ.ಪರೀûಾ ವಿದ್ಯಾರ್ಥಿಗಳಿಗೆ ವಸತಿನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶನೀಡಬೇಕೆಂದು ಸರ್ಕಾರ ಆದೇಶ ಮಾಡಿದೆ.ಹಾಗಾಗಿ ಕೆಲವೊಂದು ಹಾಸ್ಟೆಲ್ಗಳನ್ನು ಆರಂಭಿಸಿಅಂತಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದೇವೆ.ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳು ಆಯಾತಾಲೂಕು ಅ ಧಿಕಾರಿಗಳನ್ನು ಸಂಪರ್ಕ ಮಾಡಿಹಾಸ್ಟೆಲ್ ಪ್ರವೇಶ ಮಾಡಬಹುದು.
ನವೀನ್ ಶಿಂತ್ರೆ,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ, ಕೊಪ್ಪಳ