ಹಿರಿಯ ಕಾಂಗ್ರೆಸ್ ಮುಖಂಡ ತಿಮ್ಮನಗೌಡ ಚಿಕ್ಕಬೆಣಕಲ್ ನಿಧನ
Team Udayavani, May 2, 2022, 12:16 PM IST
ಗಂಗಾವತಿ: ಗಂಗಾವತಿ ಮತಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಾಲ್ಮೀಕಿ ನಾಯಕ ಸಮಾಜದ ಹಿರಿಯರಾದ ತಿಮ್ಮನಗೌಡ ಚಿಕ್ಕಬೆಣಕಲ್ (68) ಅನಾರೋಗ್ಯದಿಂದ ರವಿವಾರ ಗ್ರಾಮದ ನಿವಾಸದಲ್ಲಿ ನಿಧನರಾಗಿದ್ದಾರೆ.
ಗಂಗಾವತಿ ಕ್ಷೇತ್ರದಲ್ಲಿ ಶ್ರೀರಂಗದೇವರಾಯಲು ಶಾಸಕರಾಗಿದ್ದ ಸಂದರ್ಭದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದ ತಿಮ್ಮನಗೌಡರು ಭೂನ್ಯಾಯ ಮಂಡಳಿ ಹಾಗೂ ಆಶ್ರಯ ಕಮಿಟಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬೆಣಕಲ್ ಭಾಗದಲ್ಲಿ ಅಂತರ್ಜಲ ವೃದ್ಧಿಗಾಗಿ ರಾಯರ ಕೆರೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೃತರು ಪತ್ನಿ, 3 ಜನ ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ತಿಮ್ಮನಗೌಡ ಇವರ ನಿಧನಕ್ಕೆ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವರಾದ ಶ್ರೀರಂಗದೇವರಾಯಲು ಮಲ್ಲಿಕಾರ್ಜುನಾಗಪ್ಪ, ಮಾಜಿ ಸಂಸದ ಎಚ್ ಜಿ ರಾಮುಲು, ಎಚ್ ಆರ್ ಶ್ರೀನಾಥ್ , ಲಲಿತಾರಾಣಿ ಶ್ರೀರಂಗದೇವರಾಯಲು, ಸಿದ್ದಪ್ಪ ನೀರ್ಲೂಟಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.